Tuesday 27 December 2011

ಮಾಧ್ಯಮ ಅಕಾಡೆಮಿಯಿಂದ ಗೇಟ್ ಪಾಸ್ !

ಮಾಧ್ಯಮ ಅಕಾಡೆಮಿಯಿಂದ ಪೊನ್ನಪ್ಪ ಹಾಗೂ ಇತರ ಪದಾಧಿಕಾರಿಗಳಿಗೆ ಸರಕಾರ ಒಂದೇ ವಾರದಲ್ಲಿ ಗೇಟ್ ಪಾಸ್ ನೀಡಿದೆ!
ಅಕಾಡೆಮಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ನೇಮಕದಲ್ಲಿ 'ಜಗದೀಶ್'ರ ಮಹಾತ್ಮೆ ಅರಿತ ಸರಕಾರ ತನ್ನ ತಪ್ಪಿನ ಅರಿವಾಗಿ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಮಹತ್ವವಾದ ನಿರ್ಣಯ ಮಾಡಿದೆ.
ಹೀಗಾಗಿ ಪೊನ್ನಪ್ಪ ಎಷ್ಟು ಧಾವಂತದಲ್ಲಿ ಅಧಿಕಾರ ಸ್ವೀಕರಿಸಿದರೋ ಅದೇ ಸ್ಪೀಡಿನಲ್ಲಿ ರಿವರ್ಸ್ ಗೆರ್ನಲ್ಲಿ ಪ್ರೆಸ್ ಕ್ಲಬ್ ಹೋಗಿ, ಎಂಜಿ ರೋಡ್ ಕಡೆ ಹೋಗಿದ್ದಾರೆ. ಪೊನ್ನಪ್ಪ ಅಧಕ್ಷಗಿರಿ ಹೋಗಲು ಮುಖ್ಯವಾಗಿ ಎರಡು ಕಾರಣವೆಂದು ಮೂಲಗಳು ತಿಳಿಸಿವೆ.
ಪೊನ್ನಪ್ಪ ಪ್ರೆಸ್ ಕ್ಲಬ್ ಅಧ್ಯಕ್ಷರು ಆಗಿರುವುದು ಮುಖ್ಯಮಂತ್ರಿಯ ಗಮನಕ್ಕೆ ಬಂದಿದೆ. ಒಬ್ಬರಿಗೆ ಎರಡು ಹುದ್ದೆ ಬೇಡ ಎಂದು ನಿರ್ಧರಿಸಿದರಂತೆ. ಮತ್ತೊಂದೆಡೆ ಪೊನ್ನಪ್ಪ ಅವರನ್ನು ಕುರ್ಚಿಲಿ ಕೂರಿಸಲು ಆರ್.ಪಿ.ಜಗದೀಶ್ ಪ್ರಯತ್ನಿಸಿರುವುದು ಗಮನಕ್ಕೆ ಬಂದಿದೆ. ಇದರಿಂದೆ ಮುಂದೆ ತಮ್ಮ ಮೇಲೆ ಮಾಧ್ಯಮ ಮಿತ್ರರು ಮುನಿಸಿಕೊಂಡಾರು ಎಂಬ ಜಾಣತನವನ್ನು ಸದಾನಂದ ಗೌಡರು ತೋರಿಸಿದ್ದಾರೆ. ಇದರಿಂದ ಅಕಾಡೆಮಿಯಿಂದ ಪೋ ಎಂದು ಸಂದೇಶ ನೀಡಲಾಗಿದೆ.
ಪದಾಧಿಕಾರಿಗಳ ನೇಮಕವನ್ನು ರದ್ದು ಮಾಡಲು ಕಾರಣ ಸದಸ್ಯರ ಆಯ್ಕೆಯಲ್ಲಿನ ಗೊಂದಲ ಎಂದು ತಿಳಿದುಬಂದಿದೆ. ಹಿರಿಯ ವರದಿಗಾರ ಶೃಂಗೇಶ್ ಅವರಿಗೆ ನಕ್ಸಲೈಟ್ ಜೊತೆ ಸಂಬಂಧ ಇದೆ ಎನ್ನುವುದೇ ಹಿನ್ನಡೆ ಆಗಿದೆ. ಇನ್ನು ಗಂಗಾಧರ್ ಮೂದಲಿಯಾರ್ ಮತ್ತೊಮ್ಮೆ ಸದಸ್ಯರಾಗಿದ್ದು ಸರಕಾರದ ಗಮನಕ್ಕೆ ಬಂದಿದೆ. ಶಿವರಾಜ್ ತಂಗಡುರ್ ಅಕ್ರಡಿಶನ್ ಸಮಿತಿಯ ಸದಸ್ಯರಾಗಿದ್ದು ಮತ್ತೆ ಅಕಾಡೆಮಿ ಪದಾಧಿಕಾರಿಯಾಗಿದ್ದು ಸರಕಾರದ ಕೆಂಗಣ್ಣಿಗೆ ಗುರಿಯಾಗಿದೆ.
ಇವೆಲ್ಲ ಕಾರಣಗಳಿಂದ ಯಾವುದೇ ಗೊಂದಲವಿಲ್ಲದಂತೆ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲು ಸರಕಾರ ನಿಶ್ಚಯಿಸಿದೆ.

Thursday 15 September 2011

ಸಮಯ ಸಾಧಕನ ಕಚೇರಿ ಎದುರು ಪ್ರತಿಭಟನೆ ಸಿದ್ಧತೆ

ಸಮಯ ಚಾನಲ್ ಮಾಲಿಕರ ವಿರುದ್ಧ ಪತಿ ಬೇರೊಂದು ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ್ದಕ್ಕೆ, ಪತ್ನಿ ಮಾನಸ ಪುದುಬೆಟ್ಟುವನ್ನು ಕೆಲಸದಿಂದ ಕಿತ್ತುಹಾಕಿದ ಸಮಯ ಸಾಧಕ ಜಿ.ಎನ್. ಮಾಹನ್ ಕಚೇರಿ ಎದುರು ಪ್ರತಿಭಟನೆ ಸಿದ್ಧತೆ ನಡೆದಿದೆ. ಇದಕ್ಕೆ ಹುಬ್ಬಳ್ಳಿಯಲ್ಲಿ ಹಿಂದು ಪತ್ರಿಕೆ ವರದಿಗಾರರಾಗಿದ್ದ ಹಿರಿಯ ಪತ್ರಕರ್ತ ಮದನ್ ಮೋಹನ್ ಕೂಡ ಭಾಗವಹಿಸಲಿದ್ದಾರೆ.
ಈರೀತಿಯ ಒಕ್ಕಣೆ ಇರುವ ಇಮೇಲ್ ಮಾದ್ಯಮ ವಲಯದಲ್ಲಿ ಓಡಾಡುತ್ತಿದೆ. ಅಚ್ಚರಿಯೆಂದರೆ ಈ ಇಮೇಲ್ ಮಾಜಿ ಪತ್ರಕರ್ತ ಸತೀಶ್ ಚಪ್ಪರಿಕೆ ಹೆಸರಿನಲ್ಲಿದೆ. ಎಲ್ಲ ಪತ್ರಕರ್ತರು ಭಾಗವಹಿಸಬೇಕು ಎಂದು ಸತೀಶ್ ಚಪ್ಪರಿಕೆ ಮನವಿ ಮಾಡಿದ್ದಾರೆ.
ಇದೇ ಮೊದಲಲ್ಲ. ಪತ್ರಕರ್ತರು ಸಮಾಜದಲ್ಲಾಗುವ ಅನ್ಯಾಯ, ದೌರ್ಜನ್ಯಗಳ ಕುರಿತು ವರದಿ ಮಾಡುತ್ತಾನೆ. ಆದರೆ ಆತನಿಗೆ ಅನ್ಯಾಯವಾದಾಗ ಧ್ವನಿ ಇಲ್ಲದೆ ಸೊರಗುತ್ತಾನೆ. ಅಂತಹ ಪತ್ರಕರ್ತರ ಪರವಾಗಿ ಮಾಜಿ ಪತ್ರಕರ್ತರು, ಹಿರಿಯ ಪತ್ರಕರ್ತರು ಧ್ವನಿಯಾಗಲಿ. ಜಿ.ಎನ್. ಮೋಹನ್ ನಂತಹ ಆಷಾಢಭೂತಿಗಳ ಬಣ್ಣ ಬಯಲಾಗಲಿ.
ಸತೀಶ್ ಚಪ್ಪರಿಕೆ ಹೆಸರಿನಲ್ಲಿ ಸುತ್ತಾಡುತ್ತಿರುವ ಇಮೇಲ್ ನಿಮ್ಮ ಅವಗಾಹನೆಗಾಗಿ ಇಲ್ಲಿ ನೀಡಲಾಗಿದೆ. ಪ್ರತಿಭಟನೆ ಕೇವಲ ಇಮೇಲ್ ಗೆ ಸೀಮಿತವಾಗದೆ, ಪ್ರತಿಭಟನೆ ನಡೆದರೆ ನೀವೂ ಹೋಗಿ.
Dear friends,
First of all, there is a non-breaking news. Now I am not a journalist. Am proud that I am not journalist.
But, still I am a human being and I strongly feel lot about journalism. So, am writing this mail. After I saw this mail from Madan Mohan Sir, I thought it is better not to keep mum.
I think it is right time raise voice. Today it happened to Suresh Puduvettu family. Tomorrow it may happen to anyone else. I am sorry to say that, the same people who preach about journalism act like HITLER (I think he is better than our so called celebrated, corrupt heroes of Kannada Journalism) once they become head of a news channel or newspaper. Either they have to stop preaching or they have to show guts to back up their own subordinates. In public these cowards (heads) act like they are the saviors of Kannada Journalism. But in reality this is their avatar.
I strongly feel that, all sensitive journalists has to join their hands and at least stage a protest in front of 'Samaya News Channel'. I know nothing will happen from that. At least the people (HITLERS) who are heading that channel will think twice to repeat the same mistake in future.
Come on... if everyone of you say 'YES' , Madan Mohan Sir himself will come to Bangalore and sit with you all.
Regards
Satish Chapparike
NON Journalist, Common Man

Tuesday 13 September 2011

ಮೋಹನ ರೋಗಕ್ಕೆ ಮಾನಸ ಬಲಿ!

ಗಂಡ ಬರೆದ ಲೇಖನಕ್ಕೆ ಹೆಂಡತಿ ಕೆಲಸ ಕಳೆದುಕೊಂಡಿದ್ದಾಳೆ! ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರು ಅಂತಾರಲ್ಲ ಹಾಗೆ.  ಇಂತಹ ಹೇಯ ಕೃತ್ಯ ಎಸಗಿದ್ದು 'ಸಂಪಾದಕೀಯ' ಬ್ಲಾಗ್ ಮೂಲಕ ಸಿಕ್ಕಸಿಕ್ಕವರಿಗೆ ಉಪದೇಶ ನೀಡುವ ಸಮಯ ಚಾನಲ್ ಮಖ್ಯಸ್ಥ ಜಿ.ಎನ್. ಮೋಹನ್. ಸುರೇಶ್ ಪುದುಬೆಟ್ಟು ಎಂಬ ತುಸು ಅಂಗವಿಕಲ ಪತ್ರಕರ್ತನಿದ್ದಾನೆ. ಮೊದಲು ವಿಜಯ ಕನಾFಟಕದಲ್ಲಿದ್ದ. ಜನಶ್ರಿ ಯಾತ್ರೆ ಮುಗಿಸಿ ಈಗ ಉದಯವಾಣಿಯಲ್ಲಿದ್ದಾನೆ. ಈತ ಇತ್ತೀಚೆಗೆ ಸಮಯ ಚಾನಲ್ ಮಾಲಿಕ ಮುರುಗೇಶ್ ನಿರಾಣಿ ವಿರುದ್ಧ ಒಂದು ಲೇಖನ ಬರೆದಿದ್ದ.  ಸುರೇಶ್ ಪುದುಬೆಟ್ಟು ಪತ್ನಿ ಮಾನಸ ಪುದುಬೆಟ್ಟು ಸಮಯ ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದಳು. ಅವಳನ್ನು ಕರೆದ ಜಿ.ಎನ್. ಮೋಹನ, ಮುರುಗೇಶ್ ನಿರಾಣಿ ವಿರುದ್ಧ ಬರೆಯದಂತೆ ನಿನ್ನ ಗಂಡನಿಗೆ ಹೇಳು ಎಂದು ಮಾನಸ ಪುದುಬೆಟ್ಟುಗೆ ಸೂಚಿಸಿದ್ದಾರೆ. ಅದಕ್ಕೆ ಆಕೆ "ಸರ್ ಅವರದ್ದು ಬೇರೆ ಸಂಸ್ಥೆ. ನಾನು ಹಾಗೆ ಹೇಳುವುದು ಸರಿಯಾಗುವುದಿಲ್ಲ" ಎಂದಿದ್ದಾಳೆ.
ಪ್ರಕಟವಾದ ವರದಿಗೆ ನಿರಾಣಿ ಕಡೆಯಿಂದ ಸ್ಪಷ್ಟೀಕರಣ ನೀಡಲಾಗಿತ್ತು. ಅದನ್ನು ಉದಯವಾಣಿ ಚಿಕ್ಕದಾಗಿ ಪ್ರಕಟಿಸಿತ್ತು. ಇದರ ಕುರಿತೂ ಜಿ.ಎನ್. ಮೋಹನ, ಮಾನಸಳ ಮೂಲಕ ಒತ್ತಡ ಹೇರಲು ಯತ್ನಿಸಿದ. ಮಾನಸ ಜಗ್ಗಲಿಲ್ಲ. ಕೆಲಸದಿಂದ ಕಿತ್ತುಹಾಕುವ ಬೆದರಿಕೆ ಹಾಕಲಾಯಿತು. ಆಗಲೂ ಪ್ರಯೋಜನವಾಗದಿದ್ದಾಗ ಮಾನಸಳನ್ನು ಗುಲ್ಬರ್ಗಕ್ಕೆ ವರ್ಗ ಮಾಡಲಾದೆ. ಇದನ್ನು ಖಂಡಿಸಿ ಮಾನಸ ರಾಜಿನಾಮೆ ಸಲ್ಲಿಸಿದ್ದಾಳೆ.
ಬೇರೆ ಪತ್ರಿಕೆಯಲ್ಲಿ ಕೆಲಸ ಮಾಡುವ ಗಂಡ ಲೇಖನಕ್ಕೆ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಆತನ ಪತ್ನಿಯನ್ನು ಕೆಲಸದಿಂದ ಕಿತ್ತು ಹಾಕಿದ ಜಿ.ಎನ್. ಮೋಹನ, ಟಿವಿ ಪರದೆಯ ಮೇಲೆ ನಟ ದರ್ಶನ್ ಪ್ರಕರಣದಲ್ಲಿ ನಟಿ ನಿಖಿತಾಗೆ ೩ ವರ್ಷ ನಿಷೇಧ ಹೇರಿದ್ದು ತಪ್ಪು ಎಂದು ವಾದಿಸುತ್ತಿದ್ದ. ನಾಚಿಕೆಗೇಡು.
ಸಾಕಷ್ಟು ಪತ್ರಕರ್ತರ ದಂಪತಿಗಳು ಹೀಗೆ ಬೇರೆ ಬೇರೆ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸ್ಥಿತಿಯನ್ನು ಮಾಲಿಕರೂ ಅರ್ಥಮಾಡಿಕೊಂಡಿದ್ದಾರೆ. ಆದರೆ ಜಿ.ಎನ್. ಮೋಹನನಂತಹ ಕೀಳು ಮನಸ್ಸಿನ ಪತ್ರಕರ್ತರು ಮಾತ್ರ ಮಾಲಿಕರನ್ನು ಮೆಚ್ಚಿಸಲು ಇಂತಹ ಕೆಲಸ ಮಾಡುತ್ತಾರೆ.

Tuesday 26 July 2011

'ಸಮಯ' ಸಾಧಕರಾಗಲಿದ್ದಾರೆಯೆ ಮೋಹನ್?

ಶಶಿಧರ ಭಟ್ಟರಿಗೆ ಎಲ್ಲು ನಿಲ್ಲಲಾಗುತ್ತಿಲ್ಲ. ಸಮಯದಲ್ಲೂ ಅವರ 'ಅವಧಿ' ಮುಗಿಯುತ್ತಿರುವ ಸೂಚನೆ ಕಾಣುತ್ತಿದೆ. ಅದಕ್ಕೆ ಹೊಸ ಮುಖ್ಯಸ್ಥರಾಗಿ ಜಿ.ಎನ್. ಮೋಹನ್ ಬರಲಿದ್ದಾರೆ ಎಂಬ ಸುದ್ದಿಯನ್ನು ಅವರು ಮತ್ತು ಅವರ ಚೇಲಾ ನಡೆಸುತ್ತಾರೆ ಎನ್ನಲಾಗುವ ಬ್ಲಾಗ್ ನಲ್ಲಿ ಬರೆಯಲಾಗಿದೆ.
 
ಅವರಂತಹ ಸಮಯ ಸಾಧಕ ಖಂಡಿತವಾಗಿ ಸಿಗಲಾರರು!
ಜಿ.ಎನ್. ಮೋಹನ್ ಎಡಪಂಥೀಯ. ಸಂಘ ಪರಿವಾರವನ್ನು, ಬಿಜೆಪಿಯನ್ನು ಟೀಕಿಸುತ್ತಿದ್ದರು, ಆಮೇಲೆ ಮಾಡಿದ್ದೇನು? ಬಿಜೆಪಿ ಸರಕಾರದ ಹಲವಾರು ಪುಸ್ತಕಗಳ ಗುತ್ತಿಗೆ ಪಡೆದರು. ಅವರು ಹಲವು ಬಾರಿ ವಿಶ್ವೇಶ್ವರ ಭಟ್ಟರನ್ನು ಮತ್ತು ವಿಜಯ ಕರ್ನಾಟಕವನ್ನು ಟೀಕಿಸಿದ್ದರು. 

ಈ ಮಧ್ಯದಲ್ಲಿ ಅವರು ಬೆಳೆಸಲು ನೋಡಿದ ಮೇಫ್ಲವರ್ ಗಿಡ ಬಾಡಿಹೋಯಿತು. ಅದನ್ನು ದೊಡ್ಡಮೊತ್ತಕ್ಕೆ ಮಾರಿದೆ ಎಂದು ಜನರ ಕಿವಿಯ ಮೇಲೆ ಹೂ ಇಟ್ಟರು.

ಯಾರೂ ಕರೆದು ಮಾತನಾಡಿಸದ ಸ್ಥಿತಿಯಲ್ಲಿದ್ದ ಮೋಹನ್ ಗೆ ವಿಶ್ವೇಶ್ವರ ಭಟ್ಟರು ಕರೆದು 'ಮೀಡಿಯಾ ಮಿರ್ಚಿ' ಅಂಕಣ ನೀಡಿದರು. ಕೆಲವೇ ದಿನದಲ್ಲಿ ಮೋಹನ್ ಹಿರಿಯ ಅಂಕಣಕಾರರು ಎಂದು ಹಾಕಿಕೊಳ್ಳಲಾರಂಭಿಸಿದರು.

ಅಂಕಣ ಬರೆಯುವಾಗ ಹಿಂದೆ ಭಟ್ಟರನ್ನು ಮತ್ತು ಪತ್ರಿಕೆಯನ್ನು ಟೀಕಿಸಿದ್ದನ್ನು ಮರೆತು ಪ್ರತಿ ಶನಿವಾರ ತಮಗಾಗದವರ ವಿರುದ್ಧ ಮಿರ್ಚಿ ಅರೆಯಲಾರಂಭಿಸಿದರು. ಅಂಕಣದಲ್ಲಿ ಬರೆದದ್ದು ಬರೀ ಆತ್ಮರತಿ. ಇದನ್ನು ಗಮನಿಸಿದರೂ ಭಟ್ಟರು ಈ ಆತ್ಮರತಿಗೊಂದು ಗತಿ ಕಾಣಿಸುವ ಕಾಯಕಕ್ಕೆ ಕೈ ಹಾಕಲಿಲ್ಲ. ಮೋಹನ್ ಅವರ ಸಾಧನೆ ಏನು ಎಂಬುದನ್ನು ಮಂಗಳೂರು ಜನರ ಬಳಿ ಕೇಳಬೇಕು. ಆತ್ಮರತಿಯ ಅಂಕಣದಲ್ಲಿ ಅದರ ವಿವರಗಳು ಬಾರದಿರುವುದು ಅಚ್ಚರಿ.
 
ಈಗ ಅದೇ ಸಮಯ ಸಾಧಕತನವನ್ನು ಮುಂದುವರಿಸಿದ್ದಾರೆ. ಬಿಜೆಪಿಯನ್ನು ಸದಾ ಟೀಕಿಸುತ್ತಿದ್ದ ಅವರು ಬಿಜೆಪಿಯ ಸಚಿವರೊಬ್ಬರ ಚಾನಲ್ ಮುಖ್ಯಸ್ಥರಾಗಲು ಕೋಟು ಹಾಕಿಕೊಂಡು ರೆಡಿಯಾಗಿ ನಿಂತಿದ್ದಾರೆ. ಸಚಿವ ನಿರಾಣಿಗೆ ಇವರಿಗಿಂತ ದೊಡ್ಡ ಸಮಯ ಸಾಧಕರು ಸಿಗಲು ಸಾಧ್ಯವೇ?

ಈಗಲಾದರೂ ಅವರು ಹೆಸರನ್ನು ಸಾರ್ಥಕಪಡಿಸಿಕೊಳ್ಳುತ್ತಾರಾ? ಕಾದುನೋಡೋಣ.

Thursday 21 July 2011

ಕೆಪಿಗೆ ರಾಜೇವ್ ಭೇಟಿ

ಹೊಸ ಮಾಲಿಕ, ರಾಜ್ಯಸಭೆ ಸದಸ್ಯ ರಾಜೇವ್ ಚಂದ್ರಶೇಖರ್ ಮಂಗಳವಾರ ಕನ್ನಡಪ್ರಭ ಕಚೇರಿಗೆ ಮೊದಲ ಭೇಟಿ ನೀಡಿದ್ದಾರೆ. ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಲಾಭದ ಮಾತು ಆಡದಿರುವುದು ಕೆಪಿ ಸಿಬ್ಬಂದಿಯಲ್ಲಿ ಅಚ್ಚರಿ ಮೂಡಿಸಿದೆ.
 
"ಕನ್ನಡಪ್ರಭ ಕರ್ನಾಟಕದ ಪ್ರಭಾವಿ, ಪ್ರಾಮಾಣಿಕ ಮತ್ತು ಧೈರ್ಯ ಹೊಂದಿರುವ ಪತ್ರಿಕೆಯಾಗಬೇಕು. ಪ್ರಸಾರ, ಜಾಹೀರಾತಿನಲ್ಲಿ ನಂ ೧ ಆಗದಿದ್ದರು ತೊಂದರೆಯಿಲ್ಲ. ಜನ ಇಷ್ಟಪಡುವ ಪತ್ರಿಕೆಯಾಗಬೇಕು. ನಾನು ರಾಜಕೀಯ ಉದ್ದೇಶಕ್ಕಾಗಿ ಪತ್ರಿಕೆ ಖರೀದಿಸಿದೆ. ನನ್ನ ಉದ್ಯಮದ ಏಳ್ಗೆಗೆ ಬಳಸಿಕೊಳ್ಳುವ ಉದ್ದೇಶದಿಂದ ಪತ್ರಿಕೆ ಖರೀದಿಸಿದೆ ಎಂದೆಲ್ಲ ಹೇಳಲಾಗುತ್ತಿದೆ. ಆದರೆ ನನ್ನ ಉದ್ಯಮಕ್ಕೆ ಅಥವಾ ನನ್ನ ರಾಜಕೀಯಕ್ಕೆ ಮತ್ತು ಪತ್ರಿಕೆಗೆ ಸಂಬಂಧವಿಲ್ಲ" ಎಂದು ಹೇಳಿರುವುದು ಕೆಪಿ ಸಿಬ್ಬಂದಿಯಲ್ಲಿ ಅಚ್ಚರಿಗೆ ಕಾರಣವಾಗಿದೆ.

ಸಾಮನ್ಯವಾಗಿ ಮಾಲಿಕರು ಲಾಭದ ಮಾತಾಡುತ್ತಾರೆ. ಈ ವರ್ಷ ಈಷ್ಟು ಟಾರ್ಗೆಟ್ ಇದೆ. ಅಷ್ಟು ಲಾಭ ಮಾಡಬೇಕೆಂದುಕೊಂಡಿದ್ದೇವೆ ಎಂದೆಲ್ಲ ಮಾತನಾಡುತ್ತಾರೆ. ಆದರೆ ರಾಜೀವ್ ಚಂದ್ರಶೇಖರ್ ಮೊದಲಬಾರಿಗೆ ಬೇರೆ ಧಾಟಿಯಲ್ಲಿ ಮಾತನಾಡಿದ್ದಾರಂತೆ.

ನೋಡೋಣ ಏನೇನ್ ಮಾಡ್ತಾರೆ ಅಂತ!

ಮೀಡಿಯಾ ಮನ ಮೊಬೈಲ್ ನಲ್ಲಿ!

ಬದಲಾವಣೆ, ಓದುಗರ ಅಗತ್ಯಗಳಿಗೆ ತಕ್ಕಂತೆ ಮೀಡಿಯಾ ಮನ ಬದಲಾಗಿದೆ. ಕೆಲಬು ದಿನದಿಂದ ಮೀಡಿಯಾ ಮನ ಮೊಬೈಲ್ ಫ್ರೆಂಡ್ಲಿಯಾಗಿದೆ. ನೀವು ನಿಮ್ಮ ಮೊಬೈಲ್ ನಲ್ಲಿ ಮೀಡಿಯಾ ಮನ ಬ್ಲಾಗನ್ನು ಸುಲಭವಾಗಿ ನೋಡಬಹುದು. ಬ್ಲಾಗ್ ಸ್ಪಾಟ್ ನವರು ಈ ಅವಕಾಶ ಒದಗಿಸುವ ಮೂಲಕ ಆಧುನಿಕ ತಂತ್ರಜ್ಞಾನಕ್ಕೆ ತಕ್ಕ ಬದಲಾವಣೆ ಮಾಡಿದ್ದಾರೆ.
 
ಈ ತಂತ್ರಜ್ಞಾನದಿಂದ ನೀವು ನಿಮ್ಮ ಮೊಬೈಲ್ ನಲ್ಲಿ ಮೀಡಿಯಾ ಮನ ಬ್ಲಾಗ್ ನೋಡಬಹುದು. ಆಗ ಪ್ರತಿ ಪೋಸ್ಟ್ ನ ಸ್ವಲ್ಪಭಾಗ ಮಾತ್ರ ಕಾಣಿಸುತ್ತದೆ. ಯಾವುದನ್ನು ಓದಬೇಕೊ ಅದನ್ನು ಕ್ಲಿಕ್ ಮಾಡಿದರೆ ಅದರ ಪೂರ್ಣಪಾಠ ನೋಡಬಹುದು.

ಇನ್ನು ನೀವು ಎಲ್ಲೇ ಇರಿ ಮೀಡಿಯಾ ಮನ ನಿಮ್ಮೊಂದಿಗಿರುತ್ತದೆ.

Monday 18 July 2011

ನೆರಳೇ ಆ ಮರಕ್ಕೆ ಉರುಳಾಯಿತು

ವಿಜಯ ಕರ್ನಾಟಕ ಪತ್ರಿಕೆ ಪರಿಸರದ ಬಗ್ಗೆ ಕಾಳಜಿ ತೋರುತ್ತದೆ. ಸ್ಯಾಂಕಿ ರಸ್ತೆಯಲ್ಲಿ ಮರ ಕಡಿಯುವ ಬಗ್ಗೆ ವಿಸ್ತ್ರತ ವರದಿ ಪ್ರಕಟಿಸುತ್ತದೆ. ಆದರೆ ಒಬ್ಬ ವ್ಯಕ್ತಿಯ ಮಾತುಕೇಳಿ, ಮೂಢನಂಬಿಕೆಗೆ ಕಟ್ಟುಬಿದ್ದು ಇನ್ನೇನು ಗೊನೆ ಬಿಡಬೇಕಿದ್ದ ಬಾಳೇಮರವನ್ನು ಕಡಿಸಿಹಾಕಿದೆ!
 
ಬಾಳೆಮರ ಕಡಿದಿದ್ದು ಸಣ್ಣ ವಿಷಯ. ಆದರೆ ಅದನ್ನು ಯಾಕೆ ಕಡಿದರು ಎ‌ಂಬುದು ದೊಡ್ಡ ವಿಷಯ. ನಡೆದ ಘಟನೆ ಹೀಗಿದೆ.

ವಿಜಯ ಕರ್ನಾಟಕದ ಚೀಪ್ ರಿಪೋರ್ಟರ್ ಎಲ್. ಪ್ರಕಾಶ ಕಾರನ್ನು ವಿಜಯ ಕರ್ನಾಟಕದ ಕಚೇರಿ ಹೊರಗೆ ನಿಲ್ಲಿಸಿದ್ದರು. ಅಲ್ಲೇ ಸಮೀಪದಲ್ಲಿದ್ದ ತೆಂಗಿನ ಮರದಿಂದ ಕಾಯಿ ನೇರವಾಗಿ ನಿಲ್ಲಿಸಿದ್ದ ಕಾರಿನ ಬಾನೆಟ್ ಮೇಲೆ ಬಿದ್ದಿದೆ. ಬಾನೆಟ್ ನುಜ್ಜುಗುಜ್ಜಾಗಿದೆ. ಇದನ್ನು ನೋಡಿ ಎಲ್. ಪ್ರಕಾಶ್ ಗೆ ಎದೆ ಒಡೆದಂತಾಗಿದೆ. ತೆಂಗಿನ ಮರಕ್ಕೆ ಶಾಪ ಹಾಕುತ್ತಿದ್ದರು. ಶಾಪ ಕೇಳಿದ್ದರಿಂದಲೋ ಏನೊ ನೋಡ ನೋಡುತ್ತಿದ್ದಂತೆ ಇನ್ನೊಂದು ತೆಂಗಿನಕಾಯಿ ರೊಂಯ್ಯನೆ ಬಂದು ಕಾರಿನ ಮೇಲೆ ಬಿದ್ದಿದೆ. ಎದುರಿನ ಗಾಜು ಚೂರು ಚೂರು.
ಬಾಳೇ ಗಿಡದ ದುರದೃಷ್ಟ!
ಆದರೆ ತೆಂಗಿನಕಾಯಿ ಕಾರಿನ ಮೇಲೆ ಬಿದ್ದಿದ್ದಕ್ಕೆ ಎಲ್. ಪ್ರಕಾಶ್ ದೂರಿದ್ದು ಬಾಳೇಗಿಡವನ್ನು!
ಇದೇ ವಿಶೇಷ!

ಕಾರಿನ ಮೇಲೆ ತೆಂಗಿನಕಾಯಿ ಬಿದ್ದಿದ್ದು, ವಿಜಯ ಕರ್ನಾಟಕದ ಪ್ರಸಾರಸಂಖ್ಯೆ ಕಡಿಮೆಯಾಗುತ್ತಿರುವುದು, ವರದಿಗಾರರಿಗೆ ವಿಶೇಷ ವರದಿಗಳು ಸಿಗದಿರುವುದು ಇದಕ್ಕೆಲ್ಲ ಈ ಬಾಳೇಗಿಡದ ನೆರಳು ವಿಜಯ ಕರ್ನಾಟಕದ ಕಚೇರಿ ಮೇಲೆ ಬೀಳುತ್ತಿರುವುದೇ ಕಾರಣ. ಆದ್ದರಿಂದ ಆ ಬಾಳೇಮರ ಕಡಿಯಬೇಕು ಎಂದು ಆಡಳಿತ ಮಂಡಳಿ ತಲೆಗೆ ತುಂಬಿದ್ದಾರೆ. ತಾನೇ ಮುಂದೆನಿಂತು ಬಾಳೇಮರ ಕಡಿಸಿದ್ದಾರೆ!

ಬಿದ್ದಿದ್ದು ತೆಂಗಿನಕಾಯಿ. ಒಣಗಿದ ಕಾಯಿ ತೆಗೆಸದೆ ಇದ್ದುದರಿಂದ ಕಾಯಿ ಬಿದ್ದಿದೆ. ಎಲ್.ಪ್ರಕಾಶ್ ಸಿಟ್ಟು ಬಂದು ತೆಂಗಿನ ಮರ ತೆಗೆಸಬಹುದಿತ್ತು. ಕಾಯಿ ತೆಗೆಯದವರನ್ನು ತರಾಟೆಗೆ ತೆಗೆದುಕೊಳ್ಳಬಹುದಿತ್ತು. ಅದೆಲ್ಲ ಬಿಟ್ಟು ಏನೂ ಮಾಡದ ಬಾಳೇಗಿಡಕ್ಕೆ ಕೊಡಲಿಯೇಟು ಹಾಕಿಸಿದ್ದಾರೆ. ಸಾಲದ್ದಕ್ಕೆ ವಿಶೇಷ ವರದಿಗಳು ಸಿಗದಿರುವುದು, ಪ್ರಸಾರಸಂಖ್ಯೆ ಕುಸಿಯುತ್ತಿರುವುದಕ್ಕೂ ಬಾಳೇಗಿಡದ ನೆರಳನ್ನೇ ಹೊಣೆಯಾಗಿಸಿದ್ದಾರೆ!

ಪತ್ರಕರ್ತರ ಮೌಢ್ಯಕ್ಕೆ ಬೆಂಕಿಹಾಕ!

Wednesday 13 July 2011

ಕೆಪಿಗೆ ರಾಜೀವ್ ಚಂದ್ರಶೇಖರ್ ಮಾಲಿಕತ್ವ: ಕೆಪಿ-ಸುವರ್ಣಕ್ಕೆ ಭಟ್ಟರ ನಾಯಕತ್ವ

 ಕನ್ನಡಪ್ರಭದಲ್ಲಿ ರಾಜ್ಯಸಭೆ ಸದಸ್ಯ ಹಾಗು ಉದ್ಯಮಿ ರಾಜೀವ್ ಚಂದ್ರಶೇಖರ್ ಹಣ ತೊಡಗಿಸಿರುವುದು ಹಳೆ ಸುದ್ದಿ. ವಿಶ್ವೇಶ್ವರ ಭಟ್ಟರು ಸುವರ್ಣ ಚಾನಲ್ ಮುಖ್ಯಸ್ಥರಾಗಿದ್ದು ಕೂಡ ಮಾಧ್ಯಮ ಲೋಕದಲ್ಲಿ ಬಹುತೇಕರಿಗೆ ತಿಳಿದಿದೆ. ಈ ಬದಲಾವಣೆ ನಂತರ ಕನ್ನಡಪ್ರಭದಲ್ಲಿ ಸಾಕಷ್ಟು ಬದಲಾವಣೆ ಆಗಬಹುದು ಎಂಬ ಮಾತು ಕೇಳಿಬರುತ್ತಿದೆ.

ಇವೆಲ್ಲ ಬದಲಾವಣೆಗಳು ಇಂದಿನಿಂದ ಅಫಿಶಿಯಲ್ ಆಗಿ ಘೋಷಣೆಯಾಗಲಿವೆ. ಇಂದಿನಿಂದ ಕನ್ನಡಪ್ರಭಕ್ಕೆ ರಾಜೀವ್ ಚಂದ್ರಶೇಖರ್ ಮಾಲೀಕರು. ಹಾಗೆಯೆ ವಿಶ್ವೇಶ್ವರ ಭಟ್ಟರು ಕನ್ನಡಪ್ರಭದ ಜೊತೆಗೆ ಸುವರ್ಣ ಚಾನಲ್ ನಾಯಕತ್ವವನ್ನೂ ವಹಿಸಿಕೊಳ್ಳಲಿದ್ದಾರೆ.  ವಿಶ್ವೇಶ್ವರ ಭಟ್ಟರು ಜುಲೈ 1ರಿಂದಲೇ ಸುವರ್ಣ ಚಾನಲ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಚ್ಚರಿಯ ವಿಶಯವೆಂದರೆ ಅವರು ಮುಖ್ಯಸ್ಥರಾದ ಮೊದಲವಾರದಲ್ಲಿ ಸುವರ್ಣ ಚಾನಲ್ ಉತ್ತಮ ಟಿಆರ್ ಪಿ ಗಳಿಸಿದೆ. ಭಟ್ಟರ ಲಕ್ಕು ಚೆನ್ನಾಗಿದ್ದಂತಿದೆ.

Tuesday 12 July 2011

ವಿಜಯ ಸಂಕೇಶ್ವರ ಪತ್ರಿಕೆ ಹೆಸರು ವಿಜಯವಾಣಿ!

ವಿಜಯ ಸಂಕೇಶ್ವರ ಅವರ ಹೊಸ ಪತ್ರಿಕೆ ಹೆಸರು ಸಿದ್ಧವಾಗಿದೆ. ಹೊಸ ಪತ್ರಿಕೆ ಹೆಸರು ವಿಜಯವಾಣಿ!

ವಿಜಯ ಸಂಕೇಶ್ವರ ಅವರು ಈ ಹೆಸರನ್ನು ತುಮಕೂರಿನ ಪ್ರಕಾಶಕರೊಬ್ಬರಿಂದ 35 ಲಕ್ಷ ರೂಪಾಯಿಗೆ ಈ ಟೈಟಲನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ವೆಂಕಟೇಶಮೂರ್ತಿ ಎಂಬವರು ಈ ಹೆಸರಿನ ವಾರ ಪತ್ರಿಕೆ ನಡೆಸುತ್ತಿದ್ದರು. ವಿಜಯ ಸಂಕೇಶ್ವರ ಅವರು ಮೊದಲು ವಿಜಯಾನಂದ ಎಂದು ಹೊಸ ಪತ್ರಿಕೆಗೆ ಹೆಸರಿಡಲು ನಿರ್ಧರಿಸಿದ್ದರು. ಅದು ಉತ್ತಮ ಹೆಸರಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಂಕೇಶ್ವರ ಅವರು ವಿಜಯವಾಣಿ ಟೈಟಲ್ ಖರೀದಿಸಿದ್ದಾರೆ. ವೆಂಕಟೇಶ ಮೂರ್ತಿಯವರು ಪತ್ರಿಕೆ ಮಾರಾಟ ಮಾಡುವುದಕ್ಕಿಂತ ಅದರ ಹೆಸರು ಮಾರಾಟ ಮಾಡಿ ಹೆಚ್ಚು ಗಳಿಸಿದ್ದಾರೆ!

ಹೊಸ ಪತ್ರಿಕೆಗೆ ಹೀಗೆ ಹೆಸರಿಡುವುದರಿಂದ 2 ಲಾಭವಿದೆ. ಈ ಹೆಸರಿನ ಮೊದಲರ್ಧ ವಿಜಯ ಸಂಕೇಶ್ವರ ಅವರ ಹೆಸರಿನ ವಿಜಯವನ್ನು ಹೊಂದಿದೆ. ವಾಣಿ ಎಂಬುದು ಆನಂದ ಸಂಕೇಶ್ವರ ಪತ್ನಿ ಹೆಸರು. ವಿಜಯವಾಣಿ ಎಂಬುದು ಮಾವಸೊಸೆ ಕಾಂಬಿನೇಶನ್ ಕೂಡ ಹೌದು.
ವಿಜಯವಾಣಿ ಎಂಬ ಹೆಸರು ಉದಯವಾಣಿ ಎಂದಂತೆ ಕೇಳಿಸುತ್ತದೆ. ಪ್ರಜಾವಾಣಿಯಂತೆಯೂ ಕಾಣಿಸುತ್ತದೆ. ಹಿಂದಿನ ಬಾರಿ ವಿಜಯ ಕರ್ನಾಟಕ ಎಂದು ಹೆಸರಿಟ್ಟು ಸಂಯುಕ್ತ ಕರ್ನಾಟಕವನ್ನು ವಿಜಯ ಸಂಕೇಶ್ವರ ಅವರು ಹೆಚ್ಚು ಕಡಿಮೆ ಮುಳುಗಿಸಿದ್ದಾರೆ. ಈ ಬಾರಿ ಅವರು 2 ಪತ್ರಿಕೆ ಮೇಲೆ ಕಣ್ಣಿಟ್ಟಂತಿದೆ!

Tuesday 28 June 2011

೧೦ ಎಡಿಶನ್, ೧೦ ಪ್ರಿಂಟಿಂಗ್ ಮೆಷಿನ್, ಒಬ್ಬ ಪ್ರಿಂಟಿಂಗ್ ತಂತ್ರಜ್ಞ

ಸಂಕೇಶ್ವರ ಅವರ ಹೊಸ ಪತ್ರಿಕೆ ಕಾರ್ಯ ಬಿರುಸಿನಿಂದ ಸಾಗಿದೆ. ಮೊದಲು ಸಂಕೇಶ್ವರ ಅವರ ಜೊತೆಗಿದ್ದ, ಅವರು ಪತ್ರಿಕೆ ಮಾರಾಟ ಮಾಡಿದಾಗ ಟೈಮ್ಸ್ ಗ್ರೂಪ್ ಗೆ ಹೋಗಿದ್ದ ಜಿ.ಎಸ್. ಕುಲಕರ್ಣಿ ವಿಜಯ ಕರ್ನಾಟಕಕ್ಕೆ ರಾಜೀನಾಮೆ ನೀಡಿ, ಸಂಕೇಶ್ವರರ ಜೊತೆ ಸೇರಿದ್ದಾರೆ. ಇವರೊಬ್ಬ ಪ್ರಿಂಟಿಂಗ್ ಡಾನ್ ಎನ್ನಬಹುದು!
ಮೂಲಗಳ ಪ್ರಕಾರ ಸಂಕೇಶ್ವರ ಅವರು ಒಂದೇ ಏಟಿಗೆ ೧೦ ಆವೃತ್ತಿ ಆರಂಭಿಸುವ ಹುಮ್ಮಸ್ಸಿನಲ್ಲಿದ್ದಾರೆ. ೧೦ ಕಡೆಯೂ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸುವ ಉದ್ದೇಶ ಅವರದ್ದು. ಬಲು ಜೋರಿನಿಂದಲೇ ಮಾರುಕಟ್ಟೆ ಪ್ರವೇಶಿಸುವುದು ಸಂಕೇಶ್ವರರ ಉದ್ದೇಶ. ಪೂನಾ ಮೂಲದ ಮೊನೋಗ್ರಾಪ್ ಕಂಪನಿಯಾ ಅಶ್ವಥ ಆರಾಯಣ ಎಂಬವರ ಜೊತೆ ಶನಿವಾರ ಮಾತುಕತೆ ನಡೆಸಿದ್ದಾರೆ.

ಸಾಕಷ್ಟು ಓದುಗರು ಮಂಗಳವಾರದ ಸಂಕೇಶ್ವರ-ಶಿವ ಭೇಟಿ ಏನಾಯ್ತು? ಎಂಬ ಕುತೂಹಲ ತೋರಿದ್ದಾರೆ. ನಮಗೂ ಆ ಕುತೂಹಲ ಇತ್ತು. ಆದರೆ ಹೇಳಿಕೊಳ್ಳುವಂತಹ ಬೆಳವಣಿಗೆ ಆಗಿಲ್ಲ. ಇನ್ನು ಕೆಲವು ದಿನದಲ್ಲಿ ತಿಳಿಸುವುದಾಗಷ್ಟೆ ಹೇಳಿದ್ದಾರೆ. ಶಿವಸುಬ್ರಹ್ಮಣ್ಯ ಅವರು (ಓದುಗರೊಬ್ಬರು ಏಕವಚನ ಬೇಡ ಎಂದಿದ್ದಾರೆ. ಅದಕ್ಕೆ ಬೆಲೆಕೊಟ್ಟು...) ತಮ್ಮ ಆಪ್ತರೊಬ್ಬರ ಬಳಿ 'ಸಭೆ ಚೆನ್ನಾಗಿ ನಡೆಯಿತು. ಆದರೆ ಅವರು ಯಾವುದಕ್ಕೂ ಕಮಿಟ್ ಆಗಿಲ್ಲ' ಎಂದು ಹೇಳಿಕೊಂಡಿದ್ದಾರೆ.

ವಿಜಯ ಸಂಕೇಶ್ವರರು ಇನ್ನು ೧೦-೧೫ ದಿನದಲ್ಲಿ ತಿಳಿಸುವುದಾಗಿ ಹೇಳಿದ್ದಾರೆ. ಅದಕ್ಕೆ ಶಿವಸುಬ್ರಹ್ಮಣ್ಯ ಅವರು ತೋಟಕ್ಕೆ, ಕಾಡಿಗೆ ಹೋಗುತ್ತಿರುತ್ತೇನೆ. ಆಗೆಲ್ಲ ಮೊಬೈಲ್ ನಾಟ್ ರೀಚೆಬಲ್ ಆಗಿರುತ್ತದೆ ಎಂದಿದ್ದಾರೆ. ಅದಕ್ಕೆ ಸಂಕೇಶ್ವರ ಅವರು ಪರವಾಗಿಲ್ಲ. ನಿಧಾನವಾಗೆ ತಿಳಿಸುತ್ತೇವೆ ಎಂದಿದ್ದಾರೆ.

ವಿಶೇಷವೆಂದರೆ ನಿನ್ನೆಯ ಭೇಟಿ ಸಂದರ್ಭದಲ್ಲಿ ಸಂಕೇಶ್ವರರ ಜೊತೆ ತಿಮ್ಮಪ್ಪ ಭಟ್ ಕೂಡ ಇದ್ದರು! 

ಇದು ಸಂಕೇಶ್ವರರ ಚಾಲಾಕಿ ನಡೆ. ಭೇಟಿ ಸಂದರ್ಭ ತಿಮ್ಮಪ್ಪ ಭಟ್ ಅವರನ್ನು ಇರಿಸಿಕೊಳ್ಳುವ ಮೂಲಕ ಶಿವಸುಬ್ರಹ್ಮಣ್ಯ ಅವರಿಗೆ ಈಗಾಗಲೇ ಒಬ್ಬರು ಇದ್ದಾರೆ ಎಂಬ ಸಂದೇಶ ರವಾನಿಸಿದ್ದಾರೆ. ಇದೆ ಸಮಯದಲ್ಲಿ ತಿಮ್ಮಪ್ಪ ಭಟ್ ಅವರಿಗೆ ಇನ್ನೊಬ್ಬ ಪೈಪೋಟಿಗಿದ್ದಾನೆ ಎಂಬುದನ್ನು ತೋರಿಸಿದ್ದಾರೆ.


ಇದನ್ನೆಲ್ಲಾ ಸಂಕೆಶ್ವರರಿಗೆ ಹೇಳಿಕೊಡಬೇಕಾಗಿಲ್ಲ ಬಿಡಿ!!

Monday 27 June 2011

ಸಂಕೇಶ್ವರ- ಶಿವ ಭೇಟಿ!

ಇದು ಈ ಕ್ಷಣದ ಬ್ರೆಕಿಂಗ್ ನ್ಯೂಸ್.

ಹೊಸ ಪತ್ರಿಕೆ ಮಾಡುವ ಹುಮ್ಮಸ್ಸಿನಲ್ಲಿರುವ ವಿಜಯ ಸಂಕೇಶ್ವರ ಅವರನ್ನು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಚೇರಿಯಲ್ಲಿ ಹುದ್ದೆಗಾಗಿ ಚಡಪಡಿಸುತ್ತಿರುವ ಶಿವ ಸುಬ್ರಹ್ಮಣ್ಯ ಮಂಗಳವಾರ ಬೆಳಿಗ್ಗೆ ೧೦.೦೦ ಗಂಟೆಗೆ ಭೇಟಿ ಮಾಡಿದ್ದಾರೆ. ಶಿವನ ಕುರಿತು ಸಂಕೇಶ್ವರ ಅವರ ಅಭಿಪ್ರಾಯ ಏನಿದೆ ಎಂಬುದನ್ನು ಮೊದಲೇ ಪ್ರಕಟಿಸಲಾಗಿದೆ. ಸಂಕೇಶ್ವರ ಅವರ ನಿರಾಸಕ್ತಿಯ ಹೊರತಾಗಿಯೂ ಕೆಲವರನ್ನು ಕಾಡಿ ಬೇಡಿ ಅವರನ್ನು ಭೇಟಿ ಮಾಡಲು ಶಿವ ಯಶಸ್ವಿಯಾಗಿದ್ದಾರೆ. ಈಗಾಗಲೇ ಹೊಸಪತ್ರಿಕೆ ಕಾರ್ಯಾರಂಭದ ಸೂಚನೆಯಾಗಿ ತಿಮ್ಮಪ್ಪ ಭಟ್ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವರ ಕೈ ಕೆಳಗೆ ಬೇಕಾದರೂ ಕೆಲಸ ಮಾಡಲು ಸಿದ್ಧ ಎಂದು ಶಿವ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಸುದ್ದಿ ಪ್ರಕಟಿಸುವಾಗ ಭೇಟಿ ಇನ್ನು ಜಾರಿಯಲ್ಲಿತ್ತು.

ಫಲಶ್ರುತಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು.

Monday 20 June 2011

ಸಂಕೇಶ್ವರ್ ಪತ್ರಿಕೆಗೆ ತಿಮ್ಮಪ್ಪ ಭಟ್

ಕರಾರಿನ ಅವಧಿ ಮುಗಿಯುತ್ತಿದ್ದಂತೆ ಸಂಕೇಶ್ವರರು ಪತ್ರಿಕೆ ಕೆಲಸ ಆರಂಭಿಸಿದ್ದಾರೆ. ಮೊದಲ ಹೆಜ್ಜೆಯಾಗಿ ತಿಮ್ಮಪ್ಪ ಭಟ್ಟರನ್ನು ನೇಮಿಸಿಕೊಂಡಿದ್ದಾರೆ. ಆದರೆ ಅವರನ್ನು ಸಂಪಾದಕರನ್ನಾಗಿ ನೇಮಿಸಿಕೊಂಡಿದ್ದಾರೋ ಅಥವಾ ಸಲಹೆಗಾರ ರೀತಿ ನೇಮಿಸಿಕೊಂಡಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.

ತಿಮ್ಮಪ್ಪ ಭಟ್ ನೇಮಕದೊಂದಿಗೆ ಸಂಕೇಶ್ವರರ ಪತ್ರಿಕೆಗೆ ನೇಮಕ ಆರಂಭಗೊಳ್ಳುವ ಸೂಚನೆ ಇದೆ. ಇದು ಪತ್ರಕರ್ತರ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಲಿದೆ. ಕೆಲವರು ಆಗಲೇ ಯಾವ ಹುದ್ದೆಗೆ ಸೇರಬೇಕು ಎಂದು ಸ್ಕೆಚ್ ಹಾಕಿದ್ದಾರಂತೆ. ಸಂಕೇಶ್ವರರು ಹಾಗು ತಿಮ್ಮಪ್ಪ ಭಟ್ಟರು ಇವರಿಗೆಲ್ಲ ಹೇಗೆ ಮಣೆಹಾಕುತ್ತಾರೆ ನೋಡಬೇಕು.

ಉದಯವಾಣಿ ಬಳಗಕ್ಕೆ ರವಿ ಹೆಗ್ಡೆ ಬಳಗ ಹೋದ ಮೇಲೆ ತಿಮ್ಮಪ್ಪ ಭಟ್ಟರು ಅಲ್ಲಿಂದ ಹೊರಬಿದ್ದಿದ್ದರು. ಅಷ್ಟೇ ಬೇಗ ಇನ್ನೊಂದು ಸ್ಥಾನ ಗಳಿಸಲು ಅವರು ಯಶಸ್ವಿಯಾಗಿದ್ದಾರೆ. ಆದರೆ ಇನ್ನಿಬ್ಬರು ಮಾಜಿ ಸಂಪಾದಕರು ಮಾತ್ರ ಇನ್ನು ಹುದ್ದೆ ಹುಡುಕಾಟದಲ್ಲಿ ಬ್ಯೂಸಿ!

Tuesday 14 June 2011

ಬರಲಿದೆ ಸಂಕೇಶ್ವರರ ಪತ್ರಿಕೆ

ಟೈಮ್ಸ್ ಬಳಗ ಸಂಕೇಶ್ವರರಿಗೆ ವಿಧಿಸಿದ್ದ ಕರಾರು ಮುಗಿದಿದೆ!

ಬಹಳಷ್ಟು ಜನ  ಅಂದುಕೊಂಡಿರುವಂತೆ ಸಂಕೇಶ್ವರ ಮತ್ತು ಟೈಮ್ಸ್ ನಡುವಿನ ಕರಾರು ಆಗಸ್ಟ್ ತಿಂಗಳಲ್ಲಿ ಮುಗಿಯುತ್ತೆ ಎಂದು ನಂಬಿದ್ದರು. ಆದರೆ ಸಂಕೇಶ್ವರ ಅವರ ಆಪ್ತರೊಬ್ಬರು ನೀಡಿದ ಮಾಹಿತಿ ಪ್ರಕಾರ ವಿಜಯ ಕರ್ನಾಟಕ ಖರೀದಿಸಿದಾಗ ೫ ವರ್ಷ ಹೊಸ ಪತ್ರಿಕೆ ಆರಂಭಿಸಬಾರದು ಎಂದು ಟೈಮ್ಸ್ ವಿಧಿಸಿದ್ದ ಕರಾರಿನ ಅವಧಿ ಜೂನ್ ೧೪ಕ್ಕೆ ಕೊನೆಗೊಂಡಿದೆ!

ವಿಜಯ ಕರ್ನಾಟಕ ಮೂಲಕ ವಿಜಯ ಸಂಕೇಶ್ವರರು ಕನ್ನಡ ಪತ್ರಿಕೋದ್ಯಮದಲ್ಲಿ ಕ್ರಾಂತಿ ಮಾಡಿದವರು. ಹೊಸ ಆಯಾಮ ಕೊಟ್ಟವರು. ಅವರು ಈಗ ಮತ್ತೊಮ್ಮೆ ಕನ್ನಡ ಪತ್ರಿಕೋದ್ಯಮದಲ್ಲಿ ಕಾಲಿಡಲು ಕಾತುರರಾಗಿದ್ದಾರೆ. ತಂದೆಗಿಂತ ಅವರ ಪುತ್ರ ಆನಂದ ಸಂಕೇಶ್ವರ ಹೆಚ್ಚು ಆಸಕ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಹಲವು ಪತ್ರಕರ್ತರು ಹೊಸ ಪತ್ರಿಕೆಗೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಸಂಪಾದಕರ ಹುದ್ದೆಗೆ ಕಪ್ರ ಮಾಜಿ ಸಂಪಾದಕ ಶಿವಸುಬ್ರಹ್ಮಣ್ಯ ಟಾವೆಲ್ ಹಾಕಿದ್ದಾರಂತೆ. ಅವರು ಶ್ರೀರಾಮುಲು ಅವರ ಬಂಟನೊಬ್ಬನ ಮೂಲಕ ಸಂಕೇಶ್ವರ್ ಅವರೊಂದಿಗೆ ಭೇಟಿ ಅವಕಾಶ ಗಿಟ್ಟಿಸಿದ್ದಾರೆ. ಆದರೆ ಸಂಕೇಶ್ವರರು "ಅವನೇನು ಅನ್ನೋದು ಗೊತ್ತು ಬಿಡಿ'" ಎಂದು ಭೇಟಿಗೆ ಮೊದಲೇ ನಿರ್ಣಯ ಘೋಷಿಸಿದ್ದಾರೆ!

ಸಂಕೇಶ್ವರರ ಪತ್ರಿಕೆಗೆ ಹೋಗುವವರು ಹೋಗಲಿ ಎಂಬ ಕಾರಣಕ್ಕೆ ಟೈಮ್ಸ್ ಪತ್ರಿಕೆ ವಿಕದಲ್ಲಿ ಇನ್ನು ಸ್ಯಾಲರಿ ಹೆಚ್ಚಿಸಿಲ್ಲ. ಹಿಂದಿನ ವರ್ಷ ಸಾಕಷ್ಟು ಸ್ಯಾಲರಿ ಹೆಚ್ಚಿಸಿದ್ದೇವೆ. ಈ ವರ್ಷ ಮತ್ತೆ ಹೆಚ್ಚಳ ಇಲ್ಲ ಎಂದೂ ಹೇಳಲಾಗುತಿದೆ. ಅಂತು ಈವರೆಗೆ ಸ್ಯಾಲರಿ ಹೆಚ್ಚಿಸಿಲ್ಲ.

ಸಂಕೇಶ್ವರರು ಹೊಸ ಪತ್ರಿಕೆ ಆರಂಭಿಸಿದರೆ ಕನ್ನಡ ಪತ್ರಿಕೋದ್ಯಮದಲ್ಲಿ ಮತ್ತೊಮ್ಮೆ ಭಾರಿ ಪಲ್ಲಟಗಳು ನೋಡಲು ಸಿಗಬಹುದು.

ನಿಮ್ಮ ಪ್ರೀತಿಗೆ ಶರಣು

ಮೌಲ್ಯಮಾಪನ, ಪ್ರವೇಶ ಪ್ರಕ್ರಿಯೆ ನಡುವೆ ಬ್ಯೂಸಿ. ಪರಿಣಾಮ ಬ್ಲಾಗು ಬಂದಾಗಿತ್ತು.

ಆದರೆ ಓದುಗರಾದ ನಿಮ್ಮ ಪ್ರೀತಿ ದೊಡ್ಡದು. ಹೊಸ ಪೋಸ್ಟುಗಳು ಇಲ್ಲದೆಯೂ ನೀವು ಬ್ಲಾಗಿಗೆ ಬಂದು ಹೋಗಿದ್ದೀರಿ. ನೋಡುಗರ ಸಂಖ್ಯೆ ೨೫,೦೦೦ ದಾಟಿದೆ. ಕೆಲವರು ಸರಕು ಖಾಲಿಯಾಯಿತಾ ಎಂದು ಕಿಚಾಯಿಸಿದ್ದಾರೆ. ಇನ್ನು ಕೆಲವರು ಸ್ವಲ್ಪ ಮಾಹಿತಿ ಒದಗಿಸಿ ಬರೆಯಿರಿ, ನಿಲ್ಲಿಸಬೇಡಿ ಎಂದಿದ್ದಾರೆ.

ಇಬ್ಬಗೆಯ ಓದುಗರಿಗೂ ನಾನು ಶರಣು. ಓದುಗರ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು ಮತ್ತೆ ಬ್ಲಾಗಿಗೆ ಮರಲಿರುವೆ.

ಥಾಂಕ್ಯೂ......................

Friday 20 May 2011

ಉದಯವಾಣಿ ಹೊಸತನದಲ್ಲಿ ನಕಲಿನ ಘಮಲು

ಸಣ್ಣ ಗಿಡವನ್ನು ಪ್ರತಿದಿನ ಮುಖಪುಟದಲ್ಲಿ ಕಾಣುತ್ತಿತ್ತು. ಒಂದು ದಿನ ಬೆಳಿಗ್ಗೆ ಆ ಗಿಡ ಸಡನ್ ದೊಡ್ಡದಾಗಿತ್ತು. ಅದೊಂದನ್ನು ಬಿಟ್ಟರೆ ಉಳಿದಂತೆ ಉದಯವಾಣಿ ಬದಲಾವಣೆಯಲ್ಲಿ ಕಂಡಿದ್ದು ಕೇವಲ ನಕಲು ಮಾತ್ರ.

ಮುಖಪುಟದಲ್ಲಿ ಗ್ರೂಪ್ ಎಡಿಟರ್ ರವಿ ಹೆಗ್ಡೆ ಬರೆದ ನೋಟ್  ತುಂಬಾ ಆರ್ಡಿನರಿಯಾಗಿತ್ತು. ರವಿ ಹೆಗ್ಡೆಯವರಿಂದ ನಾವಿದನ್ನು ನಿರೀಕ್ಷಿಸಿರಲಿಲ್ಲ.

ಪುಟಕ್ಕೊಂದು ಪಂಚ್, ನಂಬರ್ ಪ್ಲೇಟ್ಗಳೆಲ್ಲ ಮೊದಲು ವಿಕದಲ್ಲಿ ಮಾಡಿದ ಪ್ರಯೋಗಗಳೇ. ಹೊಸ ಹೆಸರು, ಹೊಸ ಡಿಸೈನ್. ಅದರಲ್ಲೂ ದಂ ಇಲ್ಲ. ಓದುಗರನ್ನು ಕಣ್ಸೆಳೆಯಲು ವಿಫಲ. ಕಪ್ರದಲ್ಲಿ ಅಡ್ವಾಣಿ ಅವರ ಅಂಕಣ ಪ್ರಕಟವಾಗುತ್ತಿದ್ದಂತೆ, ಉದಯವಾಣಿಯಲ್ಲೂ ಅವರ ಲೇಖನ ಪ್ರಕಟಿಸಿದರು. ಬುಲೆಟ್ ಸಂದರ್ಶನ ಮಾದರಿಯಲ್ಲಿ ನೇರಾ ನೇರ. ಇದನ್ನೆಲ್ಲಾ ನೋಡಿದ ಮೇಲೆ ಉದಯವಾಣಿಯ ಹೊಸತು ಅಂದರೆ ಬೇರೆ ಪತ್ರಿಕೆಯಿಂದ ನಕಲು ಮಾಡಿದ್ದು ಎಂದು. ಆದರು ಕಾಡು ನೋಡೋಣ ಎಂದುಕೊಂಡಿದ್ದೆವು.

ಇಂದಿನ ಮುಖಪುಟದಲ್ಲಿ ಟ್ವೀಟರ್ ಜಾಹಿರಾತು ನೋಡಿದ ಮೇಲೆ ಖಾತ್ರಿಯಾಯಿತು, ಉದಯವಾಣಿಯ ಗಿಡ ಇನ್ಯಾರೋ ಬಿತ್ತಿದ ಬೀಜ ಎಂದು. ಕನ್ನಡದಲ್ಲಿ ಮೊದಲಬಾರಿಗೆ ಟ್ವಿಭಾಷಿತ ಹೆಸರಲ್ಲಿ ಟ್ವೀಟರ್ ಬಳಸಿದ್ದು ವಿ. ಭಟ್ಟರು, ಅವರ ವೆಬ್ ಸೈಟಿನಲ್ಲಿ. ಅದರನಂತರ ಕನ್ನಡಪ್ರಭ. ಟ್ವಿಭಾಷಿತ ಕಪ್ರದ ಎಡಿಟೋರಿಯಲ್ ಪೇಜ್ ಗೆ ವರ್ಗಾವಣೆಗೊಂಡಿತು.

ರವಿ ಹೆಗ್ಡೆ ಮತ್ತು ತಂಡದವರು ಇದನ್ನೇ ನಕಲು ಮಾಡಿದ್ದಾರೆ. ಆದರೆ ಮಾದರಿ ಬೇರೆ. ವಿ.ಭಟ್ಟರು ಒಳ್ಳೆ ಟ್ವೀಟರ್ ಆಯ್ಕೆ ಮಾಡಿ ಪ್ರಕಟಿಸಿದರೆ, ಉದಯವಾಣಿಯವರು ಒಂದು ವಿಷಯಕ್ಕೆ ಸಂಬಂಧಿಸಿದಂತೆ ಹಲವರ ಟ್ವೀಟ್ ಪ್ರಕಟಿಸಿದ್ದಾರೆ.

ರವಿ ಹೆಗ್ಡೆ ಮತ್ತು ತಂಡದವರು ಸುವರ್ಣ ಚಾನಲ್ ನಲ್ಲಿ ಇದ್ದಾಗಲೂ ಟಿವಿ ೯ ಕಾರ್ಯಕ್ರಮಗಳನ್ನು ನಕಲು ಮಾಡಿದ್ದೆ ಸಾಧನೆ. ಒಂದು ಹೊಸ ಅಥವಾ ಒರಿಜಿನಲ್ ಕಾರ್ಯಕ್ರಮ ಮಾಡಿದ್ದು ಗೊತ್ತಿಲ್ಲ.

ಕಪ್ರದವರು ಏನೇನ್ ಮಾಡ್ತೀವಿ ನೋಡ್ತಾ ಇರಿ ಅನ್ನುತ್ತಾರೆ. ಬಹುಶ ಉದಯವಾಣಿಯವರು ಏನೇನ್ ಕಳವು ಮಾಡ್ತೀವಿ ನೋಡ್ತಾ ಇರಿ ಎಂದು ಅನ್ನಬಹುದೇನೋ!

Sunday 8 May 2011

ಕುಮಾರನಾಥ ಆದ ಅನಾಥ!

ಕೆಲವು ದಿನಗಳ ಹಿಂದೆ ಸಾಯಿಬಾಬ ಮೃತರಾದ ನಂತರ ಕಪ್ರ, ಉದಯವಾಣಿಯಲ್ಲಿ ಸತ್ಯಜಿತ್ ಬಗ್ಗೆ ವರದಿ ಪ್ರಕಟವಾಗಿತ್ತು. ಮರುದಿನ ಈ ಕುಮಾರನಾಥ "ಸತ್ಯಜಿತ್ ಅನಾಥ, ಭೂಗತ" ಎಂದೆಲ್ಲ ವರದಿ ಬರೆದಿದ್ದ.

ಇಂದು ಬಂದಿರುವ ಸುದ್ದಿಯಂತೆ ಈಗ ಕುಮಾರನಾಥನೆ ಅನಾಥನಾಗಿದ್ದಾನೆ!

ಮೈಸೂರು ಬ್ಯೂರೋ ಮುಖ್ಯಸ್ಥರಾಗಿದ್ದ ಅರವಿಂದ ನಾವಡ ಮಂಗಳೂರಿಗೆ ಮುಖ್ಯ ವರದಿಗಾರರಾಗಿ ಹೋಗುತ್ತಾರೆಂಬುದು ಹಳೆ ಸುದ್ದಿ. ಹೊಸ ಸುದ್ದಿ ಏನೆಂದರೆ ಅರವಿಂದ ನಾವಡ ಅವರಿಗೆ ಬ್ಯೂರೋ ಮುಖ್ಯಸ್ಥ ಎಂದು ಡೇಸಿಗ್ನೇಶನ್ ಕೊಡಲಾಗಿದೆ. ಇದು ಕುಮಾರನಾಥನನ್ನು ಹೊರಹಾಕುವ ಸ್ಪಷ್ಟ ಸೂಚನೆ. ಇದು ಅರ್ಥವಾಗದಿದ್ದರೆ ಕುಮಾರನಾಥನಷ್ಟು ಮೂರ್ಖ ಇನ್ನೊಬ್ಬನಿಲ್ಲ.

೯ ರಂದು ಮಂಗಳೂರಿಗೆ ವಿಜಯ್ ಕರ್ನಾಟಕ  ಸಂಪಾದಕ ರಾಘವನ್ ಭೇಟಿ ನೀಡಲಿದ್ದಾರೆ. ಅರವಿಂದ ನಾವಡ ಪಟ್ಟಾಭಿಷೇಕ ಅವರ ಭೇಟಿಯ ಮುಖ್ಯ ಉದ್ದೇಶ. ೧೦ ರಂದು ವರದಿಗಾರರ ಸಭೆ ಇದೆ. ಅಲ್ಲಿ ಅರವಿಂದ ನಾವಡ ಮತ್ತು ಕುಮಾರನಾಥ ಯಾವ ಯಾವ ಕೆಲಸ ಮಾಡಲಿದ್ದಾರೆ ಎಂಬುದನ್ನು ವಿವರಿಸಲಿದ್ದಾರೆ.

ಅಲ್ಲಿಗೆ ಯು.ಕೆ.ಕುಮಾರನಾಥ ರೆಸಿಡೆಂಟ್  ಎಡಿಟರ್. ಅಂದರೆ ಮನಯಲ್ಲೇ ಉಳಿಯುವ ಸಂಪಾದಕ

Thursday 5 May 2011

ಗೋಡ್ಕಿಂಡಿ ಕೊಳಲು ನಾದಕ್ಕೆ ಮೇಯರ್ ನನ್ನು ಕುಣಿಸಿದ ರವಿ


ಕೆಂಪೇಗೌಡ ಪ್ರಶಸ್ತಿಯನ್ನು ಕರೆಕರೆದು ೨೭೦ ಜನರಿಗೆ ನೀಡಿದ್ದು ನಿಮಗೆ ಗೊತ್ತಿರಬಹುದು. ಅದರ ವಿಷಯ ನಾವು ಬರೆದು ಪ್ರಯೋಜನವಿಲ್ಲ. ಪತ್ರಿಕೆಗಳು ಆ ಕೆಲಸ ಮಾಡಿವೆ. ಕೆಂಪೇಗೌಡ ಪ್ರಶಸ್ತಿ ಪಡೆದವರಲ್ಲಿ ಕಪ್ಪು ಸುಂದರಿಯ ಜೊತೆ ಇರುತ್ತ ಕಂಡ ಕಂಡ ಹುಡುಗಿಯರಿಗೂ 'ಹಾಯ್' ಹಾಕುವ ರವಿ ಬೆಳೆಗೆರೆ ಮತ್ತು ಪ್ರಸಿದ್ಧ ಕೊಳಲುವಾದಕ ಪ್ರವೀಣ ಗೋಡ್ಕಿಂಡಿ ಕೂಡ ಇದ್ದರು.

ಇಬ್ಬರು ಪ್ರಶಸ್ತಿ ಗಳಿಸಿದ್ದು ಹೇಗೆ ಗೊತ್ತೇ?

ಪ್ರವೀಣ ಗೋಡ್ಕಿಂಡಿ ಅವರ ಪತ್ನಿ ಸಾರಿಕಾ ಗೋಡ್ಕಿಂಡಿ. ಸಾರಿಕಾ ಅವರ ತಂಗಿಯ ಗಂಡ ಸುಬ್ರಹ್ಮಣ್ಯ ಎಂಬವರು ಮೇಯರ್ ಜೊತೆಯೇ ಇರುತ್ತಾರೆ. ಒಂದರ್ಥದಲ್ಲಿ ಅತ್ಯಂತ ಆಪ್ತರು. ಇವರ ಮೂಲಕ ಪ್ರವೀಣ ಗೋಡ್ಕಿಂಡಿ ಮತ್ತು ರವಿ ಬೆಳೆಗೆರೆ ಪ್ರಸಸ್ತಿ ಗಿಟ್ಟಿಸಿದ್ದಾರೆ. ಪ್ರವೀಣ ಗೋಡ್ಕಿಂಡಿ ಇದಕ್ಕೆ ಅರ್ಹರೆ. ಆದರೆ ರವಿ ಬೆಳೆಗೆರೆಗೆ ಹೀಗೆ ಯಾರನ್ನಾದರು ದುಂಬಾಲು ಬಿದ್ದು ಪ್ರಸಸ್ತಿ ಗಿಟ್ಟಿಸುವ ಗೀಳು.

ಪ್ರಶಸ್ತಿ ಪ್ರಧಾನ ಸಮಾರಂಭದ ದಿನ ಪ್ರವೀಣ ಗೋಡ್ಕಿಂಡಿ ಬರಲಿಲ್ಲ. ಅದಕ್ಕೂ ಸುಬ್ರಹ್ಮಣ್ಯ ಅವರು ಪ್ರಭಾವ ಬೀರಿ ಮೇಯರ್ ಕಚೇರಿಯಲ್ಲಿ ಪ್ರವೀಣ ಗೋಡ್ಕಿಂಡಿಗೆ ಪ್ರಶಸ್ತಿ ಕೊಡಿಸುವ ವ್ಯವಸ್ಥೆ ಮಾಡಿದರು. ಮಧ್ಯಾಹ್ನ ೩.೩೦ಕ್ಕೆ ಮೇಯರ್ ಚೇಂಬರ್ ನಲ್ಲಿ ಪ್ರಶಸ್ತಿ ಕೊಡುವುದು ನಿಗದಿಯಾಗಿತ್ತು. ಸುಬ್ರಹ್ಮಣ್ಯ ಅವರು ಕೆಲವು ಕಾರ್ಪೊರೇಟರ್ ಗಳಿಗೂ ಬರಲು ಹೇಳಿದ್ದರು. ಎಲ್ಲರು ಬಂದು ಕಾಯುತ್ತಿದ್ದರೆ ಪ್ರವೀಣ ಗೋಡ್ಕಿಂಡಿ ಸುಳಿವಿಲ್ಲ. ಕೊಂಚ ಹೊತ್ತಿನಲ್ಲಿ ದೂರವಾಣಿ ಕರೆ ಮಾಡಿದ ಪ್ರವೀಣ ಗೋಡ್ಕಿಂಡಿ "ತನ್ನ ಮನೆಗೆ ರವಿ ಬೆಳೆಗೆರೆ ಮಧ್ಯಾಹ್ನದ ಊಟಕ್ಕೆ ಬಂದಿದ್ದರು. ಅವರು ಇನ್ನು ನನ್ನ ಮನೆಯಲ್ಲೇ ಇದ್ದಾರೆ. ಆದ್ದರಿಂದ ಬರುವುದು ವಿಳಂಬವಾಗುತ್ತಿದೆ. ಕಾರ್ಯಕ್ರಮವನ್ನು ೧-೨ ಗಂಟೆ ಮುಂದೂಡಿ" ಎಂದರು.

ಇದು ಕಾದು ಕುಳಿತಿದ್ದ ಮೇಯರ್ ಹಾಗು ಪ್ರಸಸ್ತಿ ಕೊಡಿಸಿದ ಸುಬ್ರಹ್ಮಣ್ಯ ಹಾಗು ಇತರರಿಗೆ ಕೋಪ ತರಿಸಿತ್ತು. ದೂರವಾಣಿಯಲ್ಲಿ ಪ್ರವೀಣ ಗೋಡ್ಕಿಂಡಿ ಆಡಿದ ಮಾತು ರವಿ ಬೆಳೆಗೆರೆ ಕಿವಿಗೆ ಬಿಟ್ಟು. ಅರೆ ನೀವೇನ್ರಿ ಅಲ್ಲಿಗೆ ಹೋಗೋದು. ಅವರನ್ನೇ ಇಲ್ಲಿಗೆ ಕರೆಸೋಣ. ಅವರಿಗೇನು ಸರಕಾರೀ ಕಾರಿದೆ. ಬರ್ತಾರೆ. ಬರಲ್ಲ ಅಂದ್ರೆ ಕರೆಸೋಣ. ನಾನಿಲ್ವೆ ಎಂದ ರವಿ ಬೆಳೆಗೆರೆ ಮೊಬೈಲ್ ಕೈಗೆತ್ತಿಕೊಂಡರು.

ಆಗ ಬಂತು ನೋಡಿ ಮೇಯರ್ ಗೆ ಬೆಳೆಗೆರೆ ಫೋನು!
"ಏನ್ರೀ ಪ್ರವೀಣ ಗೋಡ್ಕಿಂಡಿ ಯಾರು ಗೊತ್ತ? ಅವರು ಅಂತರಾಷ್ಟ್ರೀಯ ಕಲಾವಿದರು. ಅವರು ನಿಮ್ಮ ಚೇಂಬರ್ ಗೆ ಬಂದು ಪ್ರಶಸ್ತಿ ತಗೋಬೇಕ? ನೀವೇ ಅವರ ಮನೆಗೆ ಹೋಗಿ ಪ್ರಶಸ್ತಿ ಕೊಡಬೇಕು. ನಾನು ಅಲ್ಲೇ ಇದ್ದೀನಿ ಮನೆಗೆ ಬಂದು ಬಿಡಿ" ಎಂದು ಧಮಕಿ ಹಾಕಿದ್ದಾರೆ.
ಮೇಯರ್ ಹಾಗು ಸಂಗಡಿಗರಿಗೆ ಮೈಯ್ಯೆಲ್ಲ ಉರಿದುಹೋಗಿದೆ. ಅಲ್ಲೇ ಬೈದುಕೊಂಡಿದ್ದಾರೆ. ಮಹಾನ್ ಪತ್ರಕರ್ತನಿಗೆ ಛೀ ಥೂ ಎಂದು ಉಗಿದುಕೊಂಡಿದ್ದಾರೆ. ಸುಬ್ರಹ್ಮಣ್ಯ ಅವರಿಗೂ ಯಾಕಾದರೂ ಪ್ರಶಸ್ತಿ ಕೊಡಿಸಿದೇನೋ ಅನ್ನಿಸಿದೆ. ಆದರೆ ಬೇರೆ ಮಾರ್ಗ ಕಾಣದೆ ಪ್ರವೀಣ ಗೋಡ್ಕಿಂಡಿ ಮನೆಗೆ ಹೋಗಿ ಪ್ರಶಸ್ತಿ ಕೊಟ್ಟು ಬಂದಿದ್ದಾರೆ.

ಕೆಂಪೇಗೌಡ ಪ್ರಶಸ್ತಿ ಪಡೆದ ಹಲವರು ಪ್ರಶಸ್ತಿ ಪಡೆಯಲು ಸಮಾರಂಭಕ್ಕೆ ಬಂದಿಲ್ಲ. ಅವರಲ್ಲಿ ಎಷ್ಟು ಜನರ ಮನೆಗೆ ಮೇಯರ್ ಹೋಗಿ ಪ್ರಶಸ್ತಿ ನೀಡಿದ್ದಾರೆ? ಪ್ರವೀಣ ಗೋಡ್ಕಿಂಡಿ ಅಂತರಾಷ್ಟ್ರೀಯ ಕಲಾವಿದರೇ ಇರಬಹುದು ಆದರೆ ಮೇಯರ್ ಬೆಂಗಳೂರಿನ ಪ್ರಥಮ ಪ್ರಜೆ. ಇದನ್ನು ರವಿ ಬೆಳೆಗೆರೆ ಮರೆಯಬಾರದಿತ್ತು.

ಏನೋ ಸಮಾಜಕ್ಕೆ ಕೆಲಸ ಮಾಡುವವರು ಪತ್ರಕರ್ತರಿಗೆ ಜನ ಗೌರವ ಕೊಡುತ್ತಾರೆ. ಅವರು ಕೊಡುವ ಗೌರವವನ್ನು ಈ ರೀತಿ ದುರ್ಬಳಕೆ ಮಾಡುವುದು ಎಷ್ಟು ಸರಿ? ಇಂತಹ ಸಾಮಾನ್ಯ ಜ್ಞಾನವು ರವಿ ಬೆಳೆಗೆರೆಯಂತಹ ನುರಿತ ಮತ್ತು ನೆರೆತ ಪತ್ರಕರ್ತರಿಗೆ ಇಲ್ಲದಿದ್ದರೆ ಹೇಗೆ?

ಇಂತಹ ಚಿಕ್ಕ ಚಿಕ್ಕ ವಿಷಯಕ್ಕೆಲ್ಲ ಪತ್ರಕರ್ತರು ಪ್ರಭಾವ ಬೀರುತ್ತಾರಾ? ಛೀ ಛೀ!
ನಾಚಿಕೆಯಾಗಬೇಕು! ಕೆಲವರಿಗೆ ಅದು ಇರುವುದಿಲ್ಲ!

Tuesday 3 May 2011

ವಿಕದಲ್ಲಿ ಬ್ಯೂರೋ ಮುಖ್ಯಸ್ಥರ ವರ್ಗ

ವಿಕದ ಮೈಸೂರು ಬ್ಯೂರೋ ಮುಖ್ಯಸ್ಥರಾಗಿದ್ದ ಅರವಿಂದ ನಾವಡ ಮಂಗಳೂರಿಗೆ ಹೊರಟಿದ್ದಾರೆ. ಅವರಲ್ಲಿ ಮುಖ್ಯವರದಿಗಾರರಂತೆ.  ಬ್ಯೂರೋ ಮುಖ್ಯಸ್ಥರಾಗಿದ್ದವರು ಮಂಗಳೂರಿಗೆ ಹೋಗಿ ಮುಖ್ಯವರದಿಗಾರರಾಗುವುದು ಡಿಮೋಶನ್ ಹೊಂದಿದಂತೆ. ಆದರೆ ಕುಮಾರನಾಥನನ್ನು ಓಡಿಸುವ ಮೊದಲ ಹಂತವಾಗಿ ನಾವಡರನ್ನು ಮಂಗಳೂರಿಗೆ ಕಳುಹಿಸಲಾಗುತ್ತಿದೆ ಎಂಬ ಸುದ್ದಿ ಇದೆ. ನಾವಡರಿಗೂ ಬ್ಯೂರೋ ಮುಖ್ಯಸ್ಥರಾಗಬೇಕೆಂಬ ಆಸ ಇದ್ದೆ ಇರುತ್ತದೆ.

ಅರವಿಂದ ನಾವಡ ಇನ್ನು ಕೆಲವು ದಿನದಲ್ಲಿ ಮಂಗಳೂರಿನಲ್ಲಿ ಕೆಲಸಕ್ಕೆ ಹಾಜರಾಗಲಿದ್ದಾರೆ. ಅವರು ಹಾಜರಾಗುವ ದಿನ ಸಂಪಾದಕ ರಾಘವನ್ ಮಂಗಳೂರಿಗೆ ಹೋಗುತ್ತಾರಂತೆ. ಇದರರ್ಥ ಅವರು ಅಲ್ಲಿ ನಾವಡರು ಮಾಡಬೇಕಾದ ಕೆಲಸಂ ಕುಮಾರನಾಥನ ಕಾರ್ಯ ವ್ಯಾಪ್ತಿಯನ್ನು ಸರಿಯಾಗಿ ಡಿವೈಡ್ ಮಾಡುತ್ತಾರೆ.

ಕುಮಾರನಾಥ ತನಗೆ ಕಾಂಪಿಟೇಶನ್ ನೀಡುತ್ತಾರೆ ಅನ್ನಿಸಿದ ಎಲ್ಲರಿಗು ಕಿರಿಕಿರಿ ನೀಡಿದ್ದಾನೆ. ಹೀಗಿರುವಾಗ ನಾವಡರನ್ನು ಸುಮ್ಮನೆ ಬಿಡುವವನಲ್ಲ. ಒಂದಷ್ಟು ದಿನ ಮಂಗಳೂರು ವಿಕದಲ್ಲಿ ಘರ್ಷಣೆಗಳನ್ನು ನೋಡಬಹುದು. ಇದರಲ್ಲಿ ಯಾರು ಉಳಿಯುತ್ತಾರೆ, ಯಾರು ಉಡೀಸ್ ಆಗುತ್ತಾರೆ ಎಂಬುದು ಕುತೂಹಲದ ಪ್ರಶ್ನೆ. ಕಾದುನೋಡೋಣ.

ಅರವಿಂದ ನಾವಡರ ಜಾಗಕ್ಕೆ ಚಿತ್ರದುರ್ಗ ಬ್ಯೂರೋ ಮುಖ್ಯಸ್ಥರಾಗಿದ್ದ ದ.ಕೊ. ಹಳ್ಳಿ ಚಂದ್ರಶೇಖರ್ ಅವರನ್ನು ವರ್ಗಾಯಿಸಲಾಗಿದೆ. ಹಾಸನ ಬ್ಯೂರೋ ಮುಖ್ಯಸ್ಥರಾಗಿದ್ದ ರಾಕೇಶ್ ಪೂಂಜಾ ಅವರನ್ನು ಚಿತ್ರದುರ್ಗಕ್ಕೆ ಕಳುಹಿಸಲಾಗಿದೆ. ಹಾಸನಕ್ಕೆ ಯಾರನ್ನು ನೇಮಿಸಲಾಗಿಲ್ಲ.

ಸಂಪಾದಕ ರಾಘವನ್ ಅವರು ಕರಿಸ್ವಾಮಿ ಕಿರಿಕ್ ಪಾರ್ಟಿ ಎಂಬ ಕಾರಣಕ್ಕೆ  ಅವರನ್ನೇ ಹಾಸನಕ್ಕೆ ಕಳುಹಿಸಬಹುದು ಎಂಬುದು ವಿಕ ಪತ್ರಕರ್ತರ ಅನುಮಾನ.

Thursday 28 April 2011

ಟೀಕೆಗಳಿಗೆ ಟಿಪ್ಪಣೆ

ಹೆಚ್ಚಿನ ಕಾಮೆಂಟ್ ಗಳು ಟೀಕೆ ರೂಪದಲ್ಲಿ ಬಂದಿವೆ. ಓದುಗರ ಅಭಿಪ್ರಾಯಕ್ಕೆ ತಲೆಬಾಗುವೆವು. ಹಾಗೆಯೇ ಮೈಸೂರಿನ ನಿಮಿಷಾಂಬ ಎಂಬವರು ಒಂದು ಕಾಮೆಂಟ್ ಹಾಕಿದ್ದಾರೆ. ಅದನ್ನು ಇಲ್ಲಿ ಪ್ರಕಟಿಸಲಾಗಿದೆ.
ಟೀಕೆ ಮಾಡಿದ ಈ ಬ್ಲಾಗ್ ನ ಓದುಗರು ಕೆಲಸ ಮಾಡುವ ಕಛೇರಿಯನ್ನು ಡಬ್ಬ ಎಂದು ಕರೆಯುವುದು ಎಷ್ಟು ಸರಿ? ಎಂಬುದರ ಕುರಿತೂ ಉತ್ತರಿಸಿದ್ದರೆ ಒಳ್ಳೆಯದಿತ್ತು. ಹಾಗೆ ಮಾಡಿಲ್ಲ. ಬದಲಾಗಿ ಹಾಗೆ ಮಾಡಿದ್ದನ್ನು ಬರೆದಿದ್ದೆ ತಪ್ಪು ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಪತ್ರಕರ್ತರು ಬರವಣಿಗೆ ಮೂಲಕ ಜಗತ್ತಿಗೆಲ್ಲ ಉಪದೇಶ ನೀಡುತ್ತಾರೆ. ಅಂತಹ ಪತ್ರಕರ್ತರು ಒಂದು ಕಚೇರಿಯಲ್ಲಿ  ಕೆಲಸ ಮಾಡುವಾಗ ಅಲ್ಲಿಗೆ ನಿಷ್ಠರಾಗಿರಬೇಕು. ಇಷ್ಟವಿಲ್ಲ ಎಂದಾದರೆ ಬಿಟ್ಟು ಹೋಗಬೇಕು. ಅದು ಬಿಟ್ಟು ಅಲ್ಲೇ ಇದ್ದು, ಕಚೇರಿ ವಿರುದ್ಧ ಮಾತನಾಡುವುದು ಸರಿಯಲ್ಲ. ಇದು ಪತ್ರಕರ್ತರಿಗೆ ಎಂದಲ್ಲ ಎಲ್ಲರಿಗು ಅನ್ವಯವಾಗುವ ಮಾತು.

ಇದು ಕಾಮೆಂಟ್ ಮಾಡುವವರಿಗೆ ಗೊತ್ತಿದ್ದರೆ ಸಾಕು... ನಿಮಿಷಾಂಬ

ನಾವು ಬರೆಯುವಾಗಲೇ ಹೇಳಿದ್ದೆವು, ಇದು ಯಾರನ್ನು ನೋಯಿಸುವ, ಅವರ ಖಾಸಗಿ ವಿಷಯವನ್ನು ಹರಾಜು ಹಾಕುವ ಉದ್ದೇಶವಲ್ಲ ಎಂದು. ಅವರ ಚಾಟಿಂಗ್ ನ ವಿಷವನ್ನಷ್ಟೇ ನಾವು ಪ್ರಶ್ನಿಸಿದ್ದೆವು. ಅವರು ಕೋತಿ ಎಂದಾದರು ಕರೆಸಿಕೊಳ್ಳಲಿ, ನಿಜಕ್ಕೂ ಹಾಗೆಯೇ ಇರಲಿ ನಮಗೆ ಅದರ ಬಗ್ಗೆ ಕಾಳಜಿಯಿಲ್ಲ. ಅದರ ಕುರಿತು ನಾವು ಬರೆದೂ ಇಲ್ಲ. ಬರವಣಿಗೆಯ ಉದ್ದೇಶ ಓದುಗರಿಗೆ ಅರ್ಥವಾದರೆ ಸಾಕು.

Saturday 23 April 2011

ಚೇತನಾ-ನೇಸರ-ಶಿವ

ಪತ್ರಿಕಾ ಕಛೇರಿಗಳಲ್ಲಿ ಓತ್ಲಾ ಹೊಡೆದುಕೊಂಡು ಇರುವವರಿದ್ದಾರೆ. ಅದನ್ನು ಸ್ವಯಂ ಘೋಷಿಸಿಕೊಂಡವರು ಕಡಿಮೆ. ಇಲ್ಲೊಬ್ಬರು ಆ ಕೆಲಸವನ್ನು ಮಾಡಿದ್ದಾರೆ. ಒಬ್ಬರು ಕೆಪಿ ಬಿಟ್ಟು ವಿಜಯ ನೆಕ್ಸ್ಟ್ ಸೇರಿಕೊಂಡವರು. ಇನ್ನೊಬ್ಬರು ಕನ್ನಡಪ್ರಭದಲ್ಲಿ ಮೈಸೂರಿನಲ್ಲಿ ಇರುವವರು. ಇಬ್ಬರ ನಡುವೆ ಶಿವ!

ನೇಸರ ಕಾಡನಕುಪ್ಪೆ ಮತ್ತು ವಿಜಯ ನೆಕ್ಸ್ಟ್ ನಲ್ಲಿರುವ ಚೇತನ ತೀರ್ಥಹಳ್ಳಿ ಅವರ ನಡುವಿನ ಚಾಟ್ ಸಂಭಾಷಣೆಯನ್ನು ವಿಜಯ ನೆಕ್ಸ್ಟ್ ನಲ್ಲಿರುವ ನನ್ನ ವಿದ್ಯಾರ್ಥಿನಿ ಕಳುಹಿಸಿದ್ದಾರೆ. ಟೈಮ್ಸ್ ನಲ್ಲಿ ಇಂತಹ ಚಾಟ್ ಗಳೆಲ್ಲ ರೆಕಾರ್ಡ್ ಆಗುತ್ತಂತೆ. ಅದನ್ನೇ ಆಕೆ ಕಳುಹಿಸಿದ್ದಾಳೆ. ನಿಮ್ಮ ಅವಗಾಹನೆಗಾಗಿ ಇಲ್ಲಿ ಕೊಡಲಾಗಿದೆ.

ಕೆಲವರು ಊರಿಗೆಲ್ಲ ಉಪದೇಶ ಮಾಡುತ್ತಾರೆ. ತಾವು ಮಾತ್ರ ಕಚೇರಿಯಲ್ಲಿ ಕುಳಿತು ಇಂತಹ ಚಿಲ್ಲರೆ ಬುದ್ದಿ ತೋರಿಸುತ್ತಾರೆ. ಪ್ರೆಸ್ ಮೀಟ್ ಗಳಲ್ಲಿ ರಾಜಕಾರಣಿಗಳನ್ನು ಗೊಳುಹೊಯ್ದುಕೊಳ್ಳುವ, ಬರಹಗಳ ಮೂಲಕ ನೀತಿಪಾಠ ಹೇಳುವ, ಸಮಾಜ ಸುಧಾರಕರ ರೂಪ ಧರಿಸುವ ಪತ್ರಕರ್ತರ ಒಳಮನಸ್ಸು ಹೇಗಿರುತ್ತದೆ ಎಂಬುದು ಇದರಿಂದ ತಿಳಿಯುತ್ತದೆ.

ನೀವು ಅದನ್ನು ಓದುವುದಕ್ಕೂ ಮೊದಲು ಇನ್ನೊಂದು ವಿಷಯ. ಇದನ್ನು ಇಲ್ಲಿ ಪ್ರಕಟಿಸಿರುವುದು ಯಾರನ್ನು ಅವಹೇಳನ ಮಾಡಲು ಅಥವಾ ವ್ಯಕ್ತಿತ್ವ ಹರಣ ಮಾಡಲು ಅಲ್ಲ. ಖಾಸಗಿ ವಿಷಯದಲ್ಲಿ ಮೂಗು ತೋರಿಸುವುದು ಕೂಡ ನಮ್ಮ ಉದ್ದೇಶ ಅಲ್ಲ. ಎರಡು ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರು ಏನೇನು ಮಾತನಾಡಿಕೊಳ್ಳುತ್ತಾರೆ ಎಂಬುದನ್ನಷ್ಟೇ ತಿಳಿಸುವುದು ನಮ್ಮ ಉದ್ದೇಶ.

 

Friday 22 April 2011

ಇದು ವಿಚಿತ್ರ ಆದರು ಸತ್ಯ!

ಅವರು ಗ್ರೂಪ್ ಎಡಿಟರ್! 
ಗ್ರೂಪ್ ತೆಗೆದುಕೊಂಡು ಬಂದವರು ಎಂಬ ಕಾರಣಕ್ಕೆ!

ಇದು ಉದಯವಾಣಿ ಸಂಪಾದಕ ರವಿ ಹೆಗ್ಡೆ ಸ್ಥಿತಿ!

ರವಿ ಹೆಗ್ಡೆ ಇತ್ತೀಚಿಗೆ ಉದಯವಾಣಿ ಗ್ರೂಪ್ ಎಡಿಟರ್ ಆಗಿ ಸೇರಿದ್ದರು. ಎಡಿಟರ್ ಎಂದ ಮೇಲೆ ಪತ್ರಿಕೆಯಲ್ಲಿ ಅವರ ಹೆಸರು ಬರುವುದು ರೂಢಿ. ಇಂದಿಗೂ ರವಿ ಹೆಗ್ಡೆ ಹೆಸರು ಉದಯವಾಣಿ ದಕ್ಷಿಣ ಕನ್ನಡ ಎಡಿಶನ್ ನಲ್ಲಿ ಪ್ರಕಟವಾಗುತ್ತಿಲ್ಲ! ಉಡುಪಿ, ಮಂಗಳೂರು ಮುಂತಾದ ಕಡೆಗಳಲ್ಲಿ ರವಿ ಹೆಗ್ಡೆ ಹೆಸರು ಪ್ರಕಟವಾಗುತ್ತಿಲ್ಲ.!

ಉದಯವಾಣಿ ಅತ್ಯಂತ ಹೆಚ್ಚು ಪ್ರಸಾರ ಸಂಖ್ಯೆ ಹೊಂದಿರುವುದು ಈ ಪ್ರದೇಶದಲ್ಲಿ. ಅಂದರೆ ಹೆಚ್ಚು ಪ್ರಸಾರ ಇರುವಲ್ಲಿ ರವಿ ಹೆಗ್ಡೆ ಹೆಸರು ಬರುತ್ತಿಲ್ಲ!

ಇದು ವಿಚಿತ್ರ ಆದರೂ ಸತ್ಯ!

ಇದರ ಅರ್ಥ ರವಿ ಹೆಗಡೆಯನ್ನು ಉದಯವಾಣಿ ಗುಂಪು ಇನ್ನೂ ಒಳಗೆ ಬಿಟ್ಟುಕೊಂಡಿಲ್ಲ ಎಂದೇ? ರವಿ ಹೆಗ್ಡೆ ಉದಯವಾಣಿ ಗ್ರೂಪ್ ಎಡಿಟರ್ ಆಗಿ ಆಗಲೇ ೩ ತಿಂಗಳಾಗುತ್ತಿದೆ. ಅವರು ಈವರೆಗೆ ಉದಯವಾಣಿಯ ಹೃದಯ ಎಂದು ಕರೆಯಲಾಗುವ ಮಣಿಪಾಲಕ್ಕೆ ಭೇಟಿಕೊಟ್ಟಿಲ್ಲವಂತೆ!

ಈ ಬಗ್ಗೆ ಉದಯವಾಣಿಯಲ್ಲಿ ವಿಚಾರಿಸಿದಾಗ ತಿಳಿದುಬಂದಿದ್ದೇನೆಂದರೆ, ಉದಯವಾಣಿ ಗ್ರೂಪ್ ನವರಿಗೆ ರವಿ ಹೆಗ್ಡೆ ಸಾಮರ್ಥ್ಯದ ಬಗ್ಗೆ ಅನುಮಾನವಿದೆ. ಈ ಕಾರಣಕ್ಕಾಗಿ ಮಣಿಪಾಲ್ ಗ್ರೂಪಿನ ಮೋಹನದಾಸ್ ಪೈ ಅವರು ರವಿ ಹೆಗ್ಡೆ ಹೆಸರನ್ನು ಮಣಿಪಾಲದ ವ್ಯಾಪ್ತಿಯ ಪತ್ರಿಕೆಗಳಲ್ಲಿ ಸೇರಿಸದಂತೆ ಸತೀಶ್ ಪೈ ಅವರಿಗೆ ಸೂಚಿಸಿದ್ದಾರಂತೆ. ಪರಿಣಾಮ ಅಲ್ಲಿ ರವಿ ಹೆಗ್ಡೆ ಹೆಸರು ಕಟ್! 

ಬೆಂಗಳೂರು ಮತ್ತು ಹುಬ್ಬಳ್ಳಿ ಎಡಿಶನ್ ನಲ್ಲಿ ಮಾತ್ರ ಅವರ ಹೆಸರು ಪ್ರಕಟವಾಗುತ್ತಿದೆ. ಈ ಬೇಸರದಿಂದಲೋ ಏನೋ ಹುಬ್ಬಳ್ಳಿ ಎಡಿಶನ್ ಉಧ್ಘಾಟನೆಗೆ ಹೋಗಿದ್ದು ಬಿಟ್ಟರೆ ಅವರು ಮತ್ತೆ ಅಲ್ಲಿಗೂ ತಲೆ ಹಾಕಿಲ್ಲವಂತೆ.

ಹೀಗಾಗಿ ರವಿ ಹೆಗ್ಡೆ ಈಗ ಗ್ರೂಪ್ ಜೊತೆಗೆ ಉದಯವಾಣಿ ಸೇರಿಕೊಂಡವರು ಎಂಬ ಕಾರಣಕ್ಕೆ ಗ್ರೂಪ್ ಎಡಿಟರ್ ಎಂದು ಕರೆಸಿಕೊಳ್ಳುವಂತಾಗಿದೆ.

Thursday 21 April 2011

ಸುಭಾಷ್ ಹೂಗಾರ ಮರಳಿ ಹುಬ್ಬಳ್ಳಿಗೆ ಹೋಗ್ಯಾರ

ಸ್ವಲ್ಪ ದಿನದ ಪ್ರಜಾವಾಣಿ ಮತ್ತು ಸುವರ್ಣ ಚಾನಲ್ ಪ್ರವಾಸ ಮುಗಿಸಿದ ಸುಭಾಷ್ ಹೂಗಾರ ಮರಳಿ ಹಳೆ ಹೆಂಡತಿ ಪಾದವೇ ಗತಿ ಎಂದು ವಿಕ ಹುಬಳ್ಳಿ ಆವೃತ್ತಿ ಮುಖ್ಯಸ್ಥರಾಗಿ ಸೇರಿಕೊಂಡಿದ್ದಾರೆ.

ವೈದ್ಯರ ಕುರಿತು ಬರೆದರೆಂಬ ಕಾರಣಕ್ಕೆ ವಿಕ ಹಳೆಯ ಮಾಲಿಕರಾದ ವಿಜಯ ಸಂಕೇಶ್ವರರು ಸುಭಾಷ್ ಹೂಗಾರನನ್ನು ಕೆಟ್ಟದಾಗಿ ಹೊರಗಟ್ಟಿದ್ದರು. ವಿಜಯ ಸಂಕೇಶ್ವರರು ಹೀಗೆ ಹಲವರನ್ನು ಹೊರಹಾಕಿದ್ದರಂತೆ.

ಕೆಲದಿನದ ಹಿಂದೆ ಸುಭಾಷ್ ಹೂಗಾರ ವಿಕ ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥರಾದರು ಎಂಬ ಸುದ್ದಿ ಬಂದಾಗಿಂದ ಅವರ ಬಗ್ಗೆ ಮಾಹಿತಿಗಾಗಿ ನಾವು ಪ್ರಯತ್ನಿಸುತ್ತಿದ್ದೆವು. ಅಂತೂ ಹುಬ್ಬಳ್ಳಿ ಬ್ಯೂರೋದ ಡೆಸ್ಕ್ ಪತ್ರಕರ್ತರೊಬ್ಬರು ಹಾಗು ವಿಕ ಬೆಂಗಳೂರು ಕಛೇರಿಯಲ್ಲಿರುವ ನನ್ನ ವಿದ್ಯಾರ್ಥಿಯೊಬ್ಬರು ಸಹಾಯಕ್ಕೆ ಬಂದರು.
ಅವರಿಬ್ಬರೂ ಸುಭಾಷ್ ಹೂಗಾರ ಕುರಿತು ಒಂದಷ್ಟು ಮಾಹಿತಿ ಒದಗಿಸಿದರು. ಅವರಿಬ್ಬರೂ ಹೇಳಿದ್ದೇನೆಂದರೆ...
 
ಸುಭಾಷ್ ಹೂಗಾರ ಗೆಳೆಯರ ಬಳಗದಲ್ಲಿ ೩ ಎಂಡ್ ಹಾಫ್ ಎಂದೇ ಫೇಮಸ್. ಕೆಲವು ಬಾರಿ ಅವರ ಬುದ್ದಿ ಕೂಡ ಅಷ್ಟೇ ಕಳಗೆ ಇಳಿಯುವುದು. ಪರಮ ಆಲಸಿ. ವಿಕದಲ್ಲಿದ್ದಾಗ ಅವರಿಗೆ ಉತ್ತರ ಕರ್ನಾಟಕದ ಕುರಿತು ಉತ್ತರಾಯಣ ಎಂಬ ಅಂಕಣ ಬರೆಯುವಂತೆ ಸೂಚಿಸಲಾಗಿತ್ತಂತೆ. ಕಷ್ಟಪಟ್ಟು ೪ ಕಂತು ಬರೆದ ಸುಭಾಷ್ ಹೂಗಾರ ೫ನೇ ಕಂತಿಗೆ ಉತ್ತರಾಯಣ ಅಂಕಣದ ಉತ್ತರಕ್ರಿಯೆ ಮಾಡಿದ.

ಸಂಕೇಶ್ವರರು ಓಡಿಸಿದ ನಂತರ ಪ್ರಜಾವಾಣಿ ಸೇರಿದ. ಅಲ್ಲಿಂದ ಹಾರಿದ್ದು ಸುವರ್ಣಕ್ಕೆ. ಅಲ್ಲಿ ರಂಗನಾಥ್ ಸ್ವಲ್ಪದಿನ ಈತನಿಗೆ ಪ್ರೋತ್ಸ್ಸಾಹ ನೀಡಿದರು. ಆದರೆ ಸುಭಾಷ್ ಹೂಗಾರ ಸಾಮರ್ಥ್ಯ ಏನು ಎಂಬುದು ಗೊತ್ತಾದ ಮೇಲೆ ಮೂಲೆಗೆ ತಳ್ಳಿದ್ದರು. ಸುವರ್ಣದಲ್ಲಾದ ಬದಲಾವಣೆಯಿಂದಾಗಿ ಸುಭಾಷ್ ಹೂಗಾರ ಮರಳಿ ಹುಬ್ಬಳ್ಳಿ ಸೇರಿದ್ದಾರೆ. ಭೂಮಿ ರೌಂಡ್ ಆಗಿದೆ ಎಂಬುದು ಅವರ ವಿಷಯದಲ್ಲಿ ನಿಜವಾಗಿದೆ!

ಹುಬ್ಬಳ್ಳಿಗೆ ಹೋಗಿ ಸೇರಿದ ನಂತರ ಸುಭಾಷ್ ಹೂಗಾರ ಕಚೇರಿಯಲ್ಲಿ ಫುಲ್ ದರ್ಬಾರು ನಡೆಸಿದ್ದರಂತೆ. ನೀನು ಏನು ಮಾಡಿದ್ದಿ ಎಂಬುದು ಗೊತ್ತು ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದಾರಂತೆ. ಆದರೆ ಹುಬ್ಬಳ್ಳಿ ಕಚೇರಿ ಸಿಬ್ಬಂದಿಗೂ ಬೆಂಗಳೂರಿಗೆ ಹೋಗಿ ಏನು ಮಾಡಿದರು ಎಂಬುದು ಗೊತ್ತು. ಹೀಗಾಗಿ ಹಿಂದಿನಿಂದಾ ನಗುತ್ತಿದ್ದಾರಂತೆ.

ಸುಭಾಷ್ ಹೂಗಾರ ಎಂತಹ ವ್ಯಕ್ತಿ ಎಂದರೆ ಬ್ಲಾಗಲ್ಲಿ ತಮ್ಮ ಕುರಿತು ಬರೆದದ್ದನ್ನು ಓದಿ ನಾನು ಇಷ್ಟು ದೊಡ್ಡ ವ್ಯಕ್ತಿಯಾದೆ ಎಂದು ಸಂತೋಷ ಪಟ್ಟರು ಅಚ್ಚರಿಯಿಲ್ಲ!

Sunday 17 April 2011

ಯಾರಿವನ್, ಈ ರಾಘವನ್?

ಹೆಸರು ತಮಿಳರದ್ದು
ಹುಟ್ಟಿದ್ದು ಕರ್ನಾಟಕದಲ್ಲಿ
ಕೆಲಸ ಮಾಡಿದ್ದು ಇಂಗ್ಲಿಶ್ ಪತ್ರಿಕೆಯಲ್ಲಿ
ಈಗ ಕನ್ನಡ ಪತ್ರಿಕೆ ಸಂಪಾದಕ
ಯಾರಿವನ್?

ಅವರೇ ಈ ರಾಘವನ್!!!!!!!!!!!

ಇದು ಮಾಧ್ಯಮ ವಲಯದಲ್ಲಿ ಸದ್ಯ ಚಾಲ್ತಿಯಲ್ಲಿರುವ ಹೊಸ ಒಗಟು.

ಕಂಡು ಕೇಳರಿಯದ, ಗೊತ್ತಿಲ್ಲದ ವ್ಯಕ್ತಿಯೊಬ್ಬರು ದಿಧೀರನೆ ಕನ್ನಡ ಪತ್ರಿಕೋದ್ಯಮಕ್ಕೆ ಕಾಲಿರಿಸಿದಾಗ, ಅದೃಷ್ಟವಶಾತ್ ಕನ್ನಡ ನಂಬರ್ ಒನ್ ಪತ್ರಿಕೆ ಸಂಪಾದಕರು ಆದಾಗ ಕನ್ನಡ ಓದುಗರು ಯಾರಿವನ್ ಎಂದು ತಲೆ ಕೆರೆದುಕೊಂಡಿದ್ದರು.  ಹಾಗೆ ತಲೆ ಕೆರೆದು ಗಾಯ ಮಾಡಿಕೊಂಡವರಲ್ಲಿ ನಾವು ಇದ್ದೆವು. ಪತ್ರಕರ್ತರು ಅಚ್ಚರಿಪಟ್ಟಿದ್ದರು. ಹೆಚ್ಚಿನವರಿಗೆ ಇಂದಿಗೂ ಈ ರಾಘವನ್ ಯಾರೆಂಬುದು ಗೊತ್ತಿಲ್ಲ. ಇಂಟರ್ ನೆಟ್ನಲ್ಲಿ ಹುಡುಕಿದರು ಸಿಗಲಿಲ್ಲ. ಯಾಕೆಂದರೆ ಇವರು ಕನ್ನಡ ಪತ್ರಿಕೋದ್ಯಮದ ಧೀಮಂತ ಪತ್ರಕರ್ತರು ಅಲ್ಲ, ಇಂಗ್ಲೀಷ್ ನಲ್ಲಿ ಅಂತಹ ಸಾಧನೆಯನ್ನು ಮಾಡಲಿಲ್ಲ.

ಇವರು ಹುಟ್ಟಿದ್ದು ಮೈಸೂರಿನಲ್ಲಿ. ಆರಂಭದಲ್ಲಿ ಕೆಲಸ ಮಾಡಿದ್ದು ಇಂಡಿಯನ್ ಎಕ್ಸ್ಪ್ರೆಸ್ಸ್ ನಲ್ಲಿ. ಆಮೇಲೆ ಸೇರಿಕೊಂಡಿದ್ದು ಟೈಮ್ಸ್ ಆಪ್ ಇಂಡಿಯಾ. ಅಲ್ಲಿಂದ ಅವರನ್ನು ಇಕನಾಮಿಕ್ ಟೈಮ್ಸ್ ಗೆ ವಾರ್ಗಾಯಿಸಲಾಗಿತ್ತು. ಬಹುಷಃ ವಯಸ್ಸಾಯಿತು ಎಂಬ ಕಾರಣಕ್ಕೆ. ಇಕನಾಮಿಕ್ಸ್ ಟೈಮ್ಸ್ ನಲ್ಲಿ ಅವರು ರಾಜಕೀಯ ವರದಿ ಮಾಡುತ್ತಿದ್ದರು! ಅನುಭವಿ ಪತ್ರಕರ್ತರು!

ಕರ್ನಾಟಕದಲ್ಲಿ  ಇಕನಾಮಿಕ್ ಟೈಮ್ಸ್ ಇನ್ಚಾರ್ಜ್ ಆಗಿದ್ದರು, ಇಲ್ಲಿ ಸಿದ್ಧವಾಗುತ್ತಿದ್ದುದು ಕೇವಲ ೨ ಪುಟ ಮಾತ್ರ. ಉಳಿದ ಪುಟಗಳೆಲ್ಲ ಮುಂಬಯಿಯಿಂದ ಬರುತ್ತಿದ್ದವು. ಇಂತಿಪ್ಪ ರಾಘವನ್ ವಯಸ್ಸಿನ ಆಧಾರದಲ್ಲಿ ನಿವೃತ್ತಿಯಾಗಿದ್ದರು. ನಿವೃತ್ತಿಯಾಗಿ ೫ ವರ್ಷ ಮನೆಯಲ್ಲಿದ್ದರು.

ಮನೆಯಲ್ಲಿ ನಿವೃತ್ತಿ ಜೀವನ ನಡೆಸುತ್ತ, ಸಮಯದೂಡುತಿದ್ದ ರಾಘವನ್ ಅವರನ್ನು ಟೈಮ್ಸ್ ಮ್ಯಾನೇಜ್ಮೆಂಟ್ ಹೊಸದಾಗಿ ಆರಂಭಿಸಿದ ವಿಜಯ ನೆಕ್ಸ್ಟ್ ಗೆ ಸಂಪಾದಕರಾಗಿ ಕರೆದು ಕೂರಿಸಿತು. ಈ ಮೂಲಕ ಅವರು ಕನ್ನಡ ಪತ್ರಿಕೋದ್ಯಮ ಪ್ರವೇಶಿಸಿದರು. ಇದಕ್ಕೆ ಅವರಿಗಿದ್ದ ಏಕೈಕ ಅರ್ಹತೆಯೆಂದರೆ ವಿಪಿಎಲ್ ಸಿಇಓ ಸುನೀಲ್ ರಾಜಶೇಖರ್ ಅವರ ಜೊತೆಗಿನ ಸ್ನೇಹ.

ಈ ಸ್ನೇಹದ ಪರಿಣಾಮವಾಗಿಯೇ ಕನ್ನಡ ಪತ್ರಿಕೋದ್ಯಮದ ಗಂಧಗಾಳಿ ಇಲ್ಲದ ಇ. ರಾಘವನ್ ಇಂದು ಕನ್ನಡದ ನಂಬರ್ ೧ ದಿನಪತ್ರಿಕೆಯ ಸಂಪಾದಕರು! ಕನ್ನಡ ಪತ್ರಿಕೋದ್ಯಮ ಪ್ರವೇಶಿಸಿದ ಅತ್ಯಲ್ಪ ಅವಧಿಯಲ್ಲಿ ನಂಬರ್ ೧ ಪತ್ರಿಕೆ ಸಂಪಾದಕರಾದ ಅವರ ಸಾಧನೆ ಮೆಚ್ಚುವಂತದ್ದು! ಸಾಧನೆಯ ಹಿಂದೆ ಅಪಾರ ಪರಿಶ್ರಮ ಇದೆ!


ಸಂಪಾದಕರಾಗಿ ಅವರು ಮಾಡಿದ ಸಾಧನೆ ವಿಕ ಓದುವವರಿಗೆ ಗೊತ್ತು. ಬಜೆಟ್ ದಿನ 'ಡಬ್ಬಲ್ ಬ್ಯಾರಲ್ ಗನ್' ತನ್ನೆಡೆಗೆ ಗುರಿ ಇಟ್ಟು ಟ್ರಿಗರ್ ಒತ್ತಿದಾಗಲೇ ವಿಕ ಸಿಬ್ಬಂದಿಗೆ ರಾಘವನ್ ಏನು ಎಂಬುದು ಅರ್ಥವಾದಂತಿದೆ. ಕಚೇರಿಯಲ್ಲಿ ದಿನಕ್ಕೆ ೧೦-೨೦ ಸಿಗರೇಟು ಸೇದುವುದೇ ರಾಘವನ್ ಸಾಧನೆ ಎಂಬ ಮಾತಿದೆ. ಬಾಯಿಂದ ಸಿಗರೇಟು ಹೋಗೆ ಬಿಡುವುದನ್ನು ನೋಡಿದ ವಿಕ ಸಿಬ್ಬಂದಿ ಈತ ವಿಕದ ಹೊಗೆಯನ್ನು ಹೀಗೆ ಹಾರಿಸುವುದು ಗ್ಯಾರಂಟಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

Thursday 14 April 2011

ಬದುಕಿದ್ದವರನ್ನು ಕೊಲ್ಲಬಹುದೇ ಕುಮಾರನಾಥ? ರಾಮ ರಾಮಾ!


ಕುಮಾರನಾಥ್ ಬಗ್ಗೆ ಬರೆದ ಲೇಖನಕ್ಕೆ ಓದುಗರೊಬ್ಬರು ಕಾಮೆಂಟ್ ಕಳುಹಿಸಿದ್ದಾರೆ. ಈ ಕಾಮೆಂಟಿನ ಸ್ಪೆಷಾಲಿಟಿ ಏನೆಂದರೆ ಕಾಮೆಂಟ್ ಹಾಕಿದವರು ಹೆಸರನ್ನು ಹಾಕಿದರು. ಆದರೆ ಅವರ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ.  ಅವರ ಕಾಮೆಂಟ್ ಪೂರ್ಣ ರೂಪವನ್ನು ಇಲ್ಲಿ ಪ್ರಕಟಿಸಲಾಗಿದೆ.

ಕುಮಾರ್ ನಾಥ್ ಬಗ್ಗೆ ನಮ್ಮ ಮಂಗಳೂರಲ್ಲಿ ಸಾಕಷ್ಟು ಜೋಕ್ ಗಳು ಹುಟ್ಟಿಕೊಂಡಿವೆ. ಅದರಲ್ಲಿ ಒಂದು ಹೀಗಿದೆ.
 
ಅವರು ಜೆ. ರಾಮ ಎಂಬ ಮಂಗಳೂರು ಕಾರ್ಪೊರೇಟರ್ ನಿಧನರಾಗಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಕಟಿಸಿ ಅವರನ್ನು ಜೀವಂತ ಸಾಯಿಸಿದ್ದರು.!

ಒಮ್ಮೆ ಪೋಸ್ಟ್ ನಲ್ಲಿ ಯಾರೋ ನಿಧನ ವಾರ್ತೆ ಕಳುಹಿಸಿದ್ದರು. ಅದನ್ನು ಕ್ರಮವಾಗಿ ವರದಿಗಾರರಿಗೆ ನೀಡಬೇಕಿತ್ತು. ಸದಾ ತನ್ನ ಕೆಳಗಿನ ಸಿಬ್ಬಂದಿ ತಪ್ಪು ಹಿಡಿಯುವ ಚಟದ ಕುಮಾರ ಕಾರ್ಡ್ ಬಗ್ಗೆ ಹೇಳದೆ ವರದಿಗಾರರು ಹೋದ ಬಳಿಕ ತನ್ನ ಚೇಲಾ ಉಪಸಂಪಾದಕನಿಗೆ ಅಂಚೆ ಕಾರ್ಡ್ ಕೊಟ್ಟು ನಿಧನ ಸುದ್ದಿ ಮಾಡುವಂತೆ ಹೇಳಿದ.

ಚೇಲಾ ಕೇಳಿದನಂತೆ ಕಾರ್ಡ್ ನಲ್ಲಿ ಯಾವಾಗ ನಿಧನ ಎಂದು ಬರೆದಿಲ್ಲ. ಯಾವಾಗ ಬರೆಯಲಿ ಎಂದನಂತೆ. ಅದಕ್ಕೆ ಕಾರ್ಡ್ ಬರಲು ಒಂದು ದಿನ ಬೇಕು. ನಿನ್ನೆ ನಿಧನ ಎಂದು ಬರೆಯುವಂತೆ ಅತಿ ಬುದ್ಧಿವಂತ ಕು.ನಾಥ ಹೇಳಿದ್ದ. ಅಂಚೆ ಕಾರ್ಡ್ನ್ ನಲ್ಲಿ ಜಾಹೀರಾತು ನೀಡುತ್ತೇವೆ ಎಂದು ಬರೆದಿತ್ತಂತೆ ಮತ್ತು ಶ್ರೀಯುತರು ನಿಧನರಾದರೂ ತಮ್ಮ ಸಂಪತ್ತನ್ನು ಮಕ್ಕಳಿಗೆ ನೀಡದೆ ಬೇರೆಯವರಿಗೆ ಹಂಚಿದ್ದರು ಎಂದು ಬರೆದಿತ್ತು.

ಸಾಮಾನ್ಯ ಜನರಿಗೂ ಇದು ವಂಚನೆ ಇರಬಹುದು ಎಂದು ಗೊತ್ತಾಗುವಂತಿತ್ತು. ಆದರೆ ಕುಮಾರ ಮತ್ತು ಶಿಷ್ಯ ನಿಧನ ಸುದ್ದಿ ಬರೆದೇ ಬಿಟ್ಟರು. ಮರುದಿನ ಬೆಳಗ್ಗೆ ವರದಿಗಾರರಿಗೆ ದಬಾಯಿಸಬೇಕು ಎನ್ನುವುದು ಕುಮಾರನ ಉದ್ದೇಶ. ಆದರೆ ಎಡವಟ್ಟಾಗಿದ್ದೇ ಮರುದಿನ.

ಬೆಳಿಗ್ಗೆ ಜೆ.ರಾಮ ಮನೆಗೆ ಹೂಗುಚ್ಛ ನೀಡಲು ಸಾಲು ಸಾಲು ಮಂದಿ. ಸಾಯದೆ ಜೀವಂತ ಇದ್ದು ಬೆಳ್ಳಂಬೆಳಗ್ಗೆ ಚಾ ಕುಡಿಯುತ್ತಿದ್ದ ಜೆ.ರಾಮರಿಗೆ ಸಿಟ್ಟು, ಆಕ್ರೋಶ. ಸಂತಾಪ ಎಲ್ಲ ಬಂದಿತ್ತು. ಸಂಜೆ ಪತ್ರಿಕೆ ವರದಿಗಾರನೊಬ್ಬ ಜೆ.ರಾಮ ಅವರ ಮೊಬೈಲ್ಗೆ ಕರೆ ಮಾಡಿ "ಏಪ ದೆಪ್ಪರೆಗೆ" (ಯಾವಾಗ ಶವ ಎತ್ತಿ ಸಂಸಸ್ಕಾರ ಮಾಡುತ್ತಾರೆ) ಕೇಳಿದ್ದ. ಜನ ಜಂಗುಳಿ ಹೆಚ್ಚಾಗಿ ಗಲಾಟೆ ಆಗಿ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು.

ಇದೊಂದೇ ಅಲ್ಲ. ಅನೇಕ ಮಂದಿ ಜೀವಂತ ಇದ್ದವರನ್ನು ನಿಧನ ಕಾಲಂನಲ್ಲಿ ಪ್ರಕಟಿಸಿದ ಕೀರ್ತಿ ನಾಥನದ್ದು. ತಾನೇ ಮಾಡಿದರೂ ಇದನ್ನು ಸಿಬ್ಬಂದಿ ಮೇಲೆ ತಪ್ಪು ಹೊರಿಸಿ ಬಚಾವ್ ಆಗಿದ್ದಾನೆ. 

ನಿಜಕ್ಕೂ ಕತ್ತಿಗಿಂತ ಪೆನ್ನು ಹರಿತ!!!!!!!!!!!!!

ಇದು ಕುಮಾರ ವಿಶೇಷತೆ. ಆದರೆ ಸುದ್ದಿಮನೆ ಕಾಲಂನಲ್ಲಿ ಒಂದೂ ಬಾರಿಯೂ ಈ ಕು.ನಾಥನ ಸಾಹಸ ಬರೆಯದೆ ವಿ. ಭಟ್ಟರು ಪ್ರೀತಿ ತೋರಿಸಿದ್ದು ಇಂದಿಗು ಅರ್ಥವಾಗಿಲ್ಲ.

ವಿ.ಭಟ್ಟರಿಗೆ ಈಗ ಅರ್ಥ ಆಗಿರಬಹುದು! ಆದರೆ ಕು.ನಾಥ ವಿಕ ಮೇಲೆ ಚಪ್ಪಡಿ ಕಲ್ಲು ಎಳೆದಾಗಿದೆ. 75 ಸಾವಿರ ವಿಕ ಮಂಗಳೂರು ಸರ್ಕ್ಯುಲೇಶನ್ 45 ಸಾವಿರಕ್ಕೆ ಇಳಿಸಿದ ಕೀರ್ತಿಯೂ ಈತನಿಗೆ ಸಲ್ಲಬೇಕು.

ಈ ಬಗ್ಗೆ ವಿಸ್ತ್ರುತ ಕಮೆಂಟ್ ಇನ್ನೊಮ್ಮೆ ಕಳುಹಿಸುತ್ತೇನೆ.

(ಕಾಮೆಂಟು ಕಳುಹಿಸಿದವರಿಗೆ ದನ್ಯವಾದ. ಸತ್ಯ ಮಾಹಿತಿಗಳಿಗೆ ಸದಾ ಸ್ವಾಗತ)

Monday 11 April 2011

ಅರವಿಂದ ನಾವಡ ಮಂಗಳೂರಿಗೆ, ಕುಮಾರನಾಥ?

ಓದುಗರೊಬ್ಬರು ಕಾಮೆಂಟಿಸಿದ್ದರು. ಆಗ ಗೊತ್ತಾಯ್ತು ಕುಮಾರನಾಥ್ ಎಂಬೊಬ್ಬ ವ್ಯಕ್ತಿ ಪತ್ರಿಕೊದ್ಯಮದಲ್ಲಿದ್ದಾನೆ, ಬ್ಯೂರೋಚೀಪ್ ಆಗಿದ್ದಾನೆ ಎಂದು.


ವಿಕ ಮೈಸೂರು ಬ್ಯೂರೋ ಮುಖ್ಯಸ್ಥರಾಗಿರುವ ಅರವಿಂದ ನಾವಡ ಅವರನ್ನು ಮಂಗಳೂರಿಗೆ ವರ್ಗಾಯಿಸಲಾಗಿದೆಯಂತೆ. ಅವರು ಮಕ್ಕಳ ಕಾರಣಕ್ಕೆ ಮಂಗಳೂರಿಗೆ ವರ್ಗಾವಣೆ ಬೇಕು ಎಂದು ಬಹು ಸಮಯದಿಂದ ಬೇಡಿಕೆ ಇಟ್ಟಿದ್ದರಂತೆ. ವಿ.ಭಟ್ಟರು ಕುಮಾರನಾಥನ ಮೇಲೆ ಅದೇನು ಪ್ರೀತಿ ಇಟ್ಟಿದ್ದರೋ, ಅವನನ್ನು ವರ್ಗಾಯಿಸಲಿಲ್ಲ. ನಾವಡರ ಆಸೆ ತೀರಲಿಲ್ಲ. ಹೊಸ ಸಂಪಾದಕರು ಬಂದ ಮೇಲೆ ನಾವಡರನ್ನು ಮಂಗಳೂರಿಗೆ ವರ್ಗಾಯಿಸಿದ್ದಾರೆ. ವಿಚಿತ್ರವೆಂದರೆ ಕುಮಾರನಾಥನನ್ನು ವರ್ಗಾಯಿಸಲಾಗಿಲ್ಲ.

ಈ ಬಗ್ಗೆ ಸ್ವಲ್ಪ ಗೊಂದಲವಿದೆ. ನಾವಡರು ಮೈಸೂರಿನಲ್ಲಿ ಬ್ಯೂರೋ ಮುಖಸ್ಥರಾಗಿದ್ದವರು. ಅವರು ಮಂಗಳೂರಿನಲ್ಲಿ ಕುಮಾರನಾಥನ ಕೈ ಕೆಳಗೆ ಕೆಲಸ ಮಾಡಬೇಕೇ? ಇಲ್ಲ ಇನ್ನೊಬ್ಬ ಬ್ಯೂರೋ ಮುಖಸ್ಥನನ್ನು ಮಂಗಳೂರಿಗೆ ವರ್ಗ ಮಾಡಿದ್ದು ಕುಮಾರನಾಥನಿಗೆ ಬಿಟ್ಟು ಹೋಗು ಎಂಬ ಸೂಚನೆಯೇ? ಎಂಬ ಬಗ್ಗೆ ಗೊಂದಲವಿದೆ.

ಕುಮಾರನಾಥ ಯಾರು ಎಂದು ವಿಚಾರಿಸಿದಾಗ ಗೊತ್ತಾದದ್ದು ಇಷ್ಟು.

ಕುಮಾರನಾಥ ೧೦ ವರ್ಷದಿಂದ ವಿಕ ಮಂಗಳೂರು ಬ್ಯೂರೋಚೀಪ್. ಸಾಧನೆ ಸೊನ್ನೆ. ಸಾಧನೆಗಳ ಬಗ್ಗೆ ದಾಖಲೆಗಳನ್ನು ಇಡುವುದರಲ್ಲಿ ನಿಸ್ಸೀಮ. ಯಾರಿಗೆ ಸಾಧ್ಯವೋ ಅವರಿಗೆಲ್ಲ ಬಕೆಟ್ ಹಿಡಿದು ಸ್ಥಾನ ಉಳಿಸಿಕೊಂಡ ಚಾಣಾಕ್ಷ. ವಿಆರ್ ಎಲ್ ನ ರಮಾನಂದ ಭಟ್, ವಿ.ಭಟ್ಟರಿಗೆ, ಸಂಕೇಶ್ವರರಿಗೆ ಹೀಗೆ ಹಲವರಿಗೆ ಬಕೆಟ್ ಹಿಡಿದ ಖ್ಯಾತಿ ಇದೆಯಂತೆ. ವರ್ಷಕ್ಕೊಮ್ಮೆ ನಿಷ್ಪ್ರಯೋಜಕ ಲೇಖನ ಬರೆದರೆ ಅದೇ ದೊಡ್ಡ ಸಾಧನೆ.

ಕೆಲಸ ಮಾಡುವ, ಹೆಚ್ಚು ಬರೆಯುವ ಪತ್ರಕರ್ತರಿಗೆ ಕಿರಿಕಿರಿ ಕೊಡುವುದು ಇವರ ಮುಖ್ಯ ಗುಣವಂತೆ. ಇದಕ್ಕಿಂತ ಹೆಚ್ಚಿನ ಮಾಹಿತಿ ತಿಳಿದಿಲ್ಲ.
ಮಂಗಳೂರಿನ ಹೆಚ್ಚಿನ ಪತ್ರಕರ್ತರು ಅವರನ್ನು ನೋಡಿಲ್ಲವಂತೆ. ಇನ್ನು ಬೆಂಗಳೂರಿನವರು ನೋಡುವ ಸಾದ್ಯತೆ ಇಲ್ಲ.
ಹೀಗಾಗಿ  ತಿಳಿದ ಕೂಡಲೇ ಪ್ರಕಟಿಸಲಾಗುವುದು.

ಇದೆ ಮೊದಲ ಬಾರಿಗೆ ಮೀಡಿಯಾ ಮನ ಬೆಂಗಳೂರು ಬಿಟ್ಟು ಹೊರಗಿನ ಪತ್ರಕರ್ತರ ಕುರಿತು ಬರೆದಿದೆ. ಇದು ಸಾಧ್ಯವಾಗಿದ್ದು ಓದುಗರಿಂದ ಹಾಗು ಅವರ ಕಾಮೆಂಟಿನಿಂದ. ತುಂಬಾ ಥ್ಯಾಂಕ್ಸ್.

Thursday 7 April 2011

ನಿಮ್ಮ ಕಳಕಳಿ, ಅವರಿಗೆ ದುಡ್ಡಿನ ಬಳುವಳಿ

ಅಣ್ಣಾ ಹಜಾರೆಗೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದೆ. ಎಲ್ಲ ಮಾಧ್ಯಮಗಳು ಬೆಂಬಲಕ್ಕೆ ನಿಂತಿವೆ. ಕನ್ನಡದಲ್ಲಿ ಉದಯವಾಣಿ ಮೊದಲು ಬೆಂಬಲ ವ್ಯಕ್ತಪಡಿಸಿತು. ಇಂದು ವಿಕ ಕೂಡ ಬೆಂಬಲ ವ್ಯಕ್ತಪಡಿಸಿದೆ. ವಿಚಿತ್ರ ರೀತಿಯಲ್ಲಿ.

ಲಾಭವಿಲ್ಲದೆ ವಿಕ ಮತ್ತು ಟೈಮ್ಸ್ ಮ್ಯಾನೇಜ್ಮೆಂಟ್ ಯಾವ ಕೆಲಸವನ್ನು ಮಾಡುವುದಿಲ್ಲ. ದೇಶಾದ್ಯಂತ ಅಣ್ಣಾ ಹಜಾರೆಗೆ ಉಂಟಾದ ಬೆಂಬಲವನ್ನು ಏನ್ ಕ್ಯಾಶ್ ಮಾಡಿಕೊಳ್ಳಲು ವಿಕ ಮುಂದಾಗಿದೆ. ಅದಕ್ಕಾಗಿ "ನೀವು ಅಣ್ಣಾ ಹಜಾರೆಯನ್ನು ಬೆಂಬಲಿಸುವುದಾದರೆ ನಮಗೆ ಎಸ್ಎಂಎಸ್ ಕಳುಹಿಸಿ. ನಾವು ಅದನ್ನು ಪ್ರಕಟಿಸುತ್ತೇವೆ" ಎಂಬ ಘೋಷಣೆ ಪ್ರಕಟಿಸಿದೆ.

ನೀವು ಎಸ್ಎಂಎಸ್ ಕಳುಹಿಸಿ ಅಣ್ಣಾ ಹಜಾರೆಗೆ ಬೆಂಬಲ ವ್ಯಕ್ತಪಡಿಸಿ. ನಿಮ್ಮ ಈ ಕಾಳಜಿಯನ್ನು ಬಳಸಿಕೊಂಡು ನಾವು ದುಡ್ಡು ಮಾಡಿಕೊಳ್ಳುತ್ತೇವೆ ಎಂಬುದು ಇದರ ಒಳಾರ್ಥ!

ನೀವು ಒಂದು ಎಸ್ಎಂಎಸ್ ಕಳುಹಿಸಿದರೆ ಅದಕ್ಕೆ ೬ ರೂಪಾಯಿ ತೆರಬೇಕು. ಅದರಲ್ಲಿ ೩ ರೂಪಾಯಿ ವಿಕ ಕಿಸೆಗೆ. ಉಳಿದ ೩ ರೂಪಾಯಿ ಮೊಬೈಲ್ ಕಂಪನಿಗೆ. ಹೀಗೆ ನಿಮ್ಮ ಕಾಳಜಿಯನ್ನು ವಿಕ ತನ್ನ ಕಾಳಜಿಗೆ ಬಳಸಿಕೊಳ್ಳಲು ಮುಂದಾಗಿದೆ. ದೇಶದ ಜನರೆಲ್ಲಾ ಕಾಳಜಿಯಿಂದ ಭ್ರಷ್ಟಾಚಾರದ ವಿರುಧ್ಧ ಹೋರಾಟದಲ್ಲಿ ತೊಡಗಿದ್ದಾರೆ . ವಿಕ ಮ್ಯಾನೇಜ್ಮೆಂಟ್ ಮಾತ್ರ ದುಡ್ಡು ಮಾಡುವದರಲ್ಲಿ ನಿರತವಾಗಿದೆ.

ಇವರೆಲ್ಲ ಬೆಂಕಿ ಬಿದ್ದ ಮನೆಯಲ್ಲಿ ಬೀಡಿ ಹಚ್ಚಿಕೊಳ್ಳುವ ಬುದ್ದಿ ಬಿಡುವುದು ಯಾವಾಗ?

Tuesday 5 April 2011

ನಿಲ್ಲದ ತಲ್ಲಣಗಳ ಅಲೆ

ವಿ.ಭಟ್ಟರು ವಿಕ ಬಿಟ್ಟಮೇಲೆ ಮಾಧ್ಯಮ ಕ್ಷೇತ್ರದಲ್ಲಿ ಎದ್ದ ತಲ್ಲಣದ ಅಲೆಗಳು ಇನ್ನು ತಣ್ಣಗಾಗಿಲ್ಲ.

ಕಪ್ರದಿಂದ ೩ ಜನ ಹೊರನಡೆದರು. ವಿಕದಿಂದಲೂ ೩ ಜನ ಹೊರಬಂದಿದ್ದಾರೆ. ಕಪ್ರದಿಂದ ದೆಹಲಿಯ ಉಮಾಪತಿ ವಿಕಕ್ಕೆ ಹಾರಿದರೆ, ಬೆಂಗಳೂರಿನಲ್ಲಿದ್ದ ವಿಜಯ್ ಮಲ್ಲಿಗೆಹಾಳ್ ಮತ್ತು ಗಿರೀಶ್ ಬಾಬು ಉದಯವಾಣಿಗೆ ವಲಸೆ ಹೊರಟಿದ್ದಾರೆ.

ಈಗ ವಿಕದಿಂದ ಕೆ.ವಿ. ಪ್ರಭಾಕರ್, ರಾಘವೇಂದ್ರ ಭಟ್ಟ, ಚೈತನ್ಯ ಹೆಗಡೆ ಕಪ್ರಕ್ಕೆ ವಲಸೆ ಹೊರಟಿದ್ದಾರೆ. ಹಾಗಂತ ವಿ.ಭಟ್ಟರು ಎಪ್ರಿಲ್ ೧ರನ್ದು ಪ್ರಕಟಿಸಿದ್ದಾರೆ. ಮೂರ್ಖರದಿನದಂದು ಸತ್ಯ ಸುದ್ದಿ ಪ್ರಕಟಿಸಿದ್ದು ವಿಚಿತ್ರ.

ವಿಕದಿಂದ ಇನ್ನು ಕೆಲವರು ಕಪ್ರಕ್ಕೆ ವಲಸೆ ಹೋಗಬಹುದು ಎಂಬ ನಿರೀಕ್ಷೆಯಿದೆ. ಎಲ್ಲೋ ಆರಂಭವಾದ ಭೂಕಂಪ ಇನ್ನೆಲ್ಲೋ ಪರಿಣಾಮ ಬೀರಿದಂತೆ, ಮಾಧ್ಯಮ ವಲಯದಲ್ಲಿ ಬದಲಾವಣೆ ಅಲೆಗಳು ಎಲ್ಲೆಲ್ಲೋ ಪರಿಣಾಮ ಬೀರುತ್ತಿವೆ.

ಇನ್ನು ಏನೇನು ಬದಲಾವಣೆ ಆಗಲಿದೆಯೋ?

Monday 4 April 2011

ಅಂದವಾಗಿ ವಿಶ್ವಕಪ್ ಕವರೇಜ್ ಮಾಡಿದ್ದು ಯಾರು?

ಕನ್ನಡದಲ್ಲಿ ಪ್ರಮುಖವಾಗಿ ೬ ಪತ್ರಿಕೆಗಳಿವೆ. ಅದರಲ್ಲಿ ಸಂಯುಕ್ತ ಕರ್ನಾಟಕವನ್ನು ಈ ಸ್ಪರ್ಧೆಯಿಂದ ಹೊರಗಿಡುವುದು ಒಳಿತು. ಉಳಿದ ೫ ಪತ್ರಿಕೆಗಳ ಕುರಿತು ಮಾತ್ರ ಚರ್ಚಿಸೋಣ.

ಭಾರತ ಫೈನಲ್ ಗೆದ್ದಾಗ ಉದಯವಾಣಿ ಸಂಪೂರ್ಣ ಪತ್ರಿಕೆಯನ್ನು ಅದಕ್ಕೆ ಅರ್ಪಿಸಿತು. ಇದು ಹೊಸ ಪ್ರಯೋಗ. ಸಂಪೂರ್ಣ ಪತ್ರಿಕೆಯನ್ನು ಒಂದು ವಿಷಯಕ್ಕೆ ಸಮರ್ಪಿಸಿದ್ದು ಇದೇ ಮೊದಲೇನೋ. ಇದರ ಶ್ರೇಯಸ್ಸು ರವಿ ಹೆಗಡೆ ಅವರಿಗೆ. ಆದರೆ ಬೇರೆ ಸುದ್ದಿಯನ್ನೇ ಪ್ರಕಟಿಸದಿರುವುದು ಅಷ್ಟು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಎಲ್ಲರಿಗು ಕ್ರಿಕೆಟ್ನಲ್ಲಿ ಆಸಕ್ತಿ ಇರಬೇಕೆಂದು ನಿಯಮವೇನೂ ಇಲ್ಲ. ಅಂತಹ ಓದುಗರಿಗಾಗಿ ಬೇರೆ ಸುದ್ದಿ ಹಾಕಬೇಕಿತ್ತು.

ಪಾಕಿಸ್ತಾನ ವಿರುದ್ಧ ಭಾರತ ಗೆದ್ದಗಲೇ 'ಉದಯವಾಣಿ' ಎಂಬ ಹೆಸರನ್ನು ಕೂಡ ಕೆಳಗೆ ಪ್ರಕಟಿಸಲಾಗಿತ್ತು. ಅದು ಸಾಲದೆಂಬಂತೆ ಮುಖಪುಟಕ್ಕೆ ನೀಲಿ ಬಣ್ಣ ತುಂಬಲಾಗಿತ್ತು. ಹೀಗಾಗಿ ಭಾರತ ಫೈನಲ್ ಗೆದ್ದಾಗ ಮಾಡಲು ಹೆಚ್ಚಿನದು ಏನು ಉಳಿದಿರಲ್ಲಿಲ್ಲ.

ಕನ್ನಡಪ್ರಭ ಉತ್ತಮವಾಗಿ ಕವರೇಜ್ ಮಾಡಿದೆ ಎಂಬುದಕ್ಕಿಂತ ಅಂದವಾಗಿ ಓದುಗರ ಮುಂದಿಟ್ಟಿದೆ. ಪುಟ ವಿನ್ಯಾಸ, ಹೆಡ್ಲೈನ್ ನಲ್ಲಿ ಕಪ್ರ ಮಿಂಚಿದೆ. 'ಭಾರತ ಭೂಶಿರ' ಹೆಡ್ಲೈನ್ ಸೂಪರ್. ಆದರೆ ಕ್ರಿಕೆಟ್ ವರದಿಗಳಲ್ಲಿ ಹಲವು ತಪ್ಪುಗಳಿದ್ದವು. ಇದು "ತಪ್ಪಾಯ್ತು ತಿದ್ಕೊತೀವಿ"ಯಲ್ಲೂ ಕಾಣಿಸಿಕೊಂಡಿಲ್ಲ. ಇದನ್ನು ಸರಿಪಡಿಸಿಕೊಂಡರೆ ಉಳಿದದ್ದೆಲ್ಲ ಓಕೆ.

ಹೊಸದಿಗಂತವನ್ನು ನಿಜಕ್ಕೂ ಮೆಚ್ಚಬೇಕು. ಆದರೆ ಪತ್ರಿಕೆಗೆ ಓದುಗರ ಕೊರತೆಯಿದೆ. ಸಂಘದ ಪತ್ರಿಕೆ ಎಂಬ ಇಮೇಜ್ ನಿಂದಾಗಿ ಹೀಗಾಗುತ್ತಿದೆ. ಆದರೆ ಇತ್ತೀಚಿಗೆ ಪತ್ರಿಕೆ ಅಂದವಾಗಿ ಮೂಡಿಬರುತ್ತಿದೆ. ಕ್ರಿಕೆಟ್ ಕವರೇಜ್, ವಿನ್ಯಾಸ ಕೂಡ ಉತ್ತಮವಾಗಿತ್ತು. ಆದರೆ ಫೈನಲ್ ದಿನ ಇಂಗ್ಲೀಷ್ ಹೆಡ್ಲೈನ್ ಹಾಕಿ ಎಡವಟ್ಟು ಮಾಡಿತು. ಕನ್ನಡಿಗರು ತಲೆತಗ್ಗಿಸುವಂತೆ ಮಾಡಿತು. ಅಡ್ಡಡ್ಡವಾಗಿ ಸುದ್ದಿ ಪ್ರಕಟಿಸಿದ್ದು ಓಕೆ.

ವಿಶ್ವಕಪ್ ಉದ್ದಕ್ಕೂ ವಿಫಲವಾದ ಪತ್ರಿಕೆಗಳೆಂದರೆ ಪ್ರಜಾವಾಣಿ ಮತ್ತು ವಿಕ. ಪ್ರಜಾವಾಣಿ ಪತ್ರಿಕೆ ಮೊದಲಿನಿಂದಲೂ ಕ್ರೀಡೆ ವರದಿಗೆ ಫೇಮಸ್. ಆದರೆ ಈ ಬಾರಿಯ ವಿಶ್ವಕಪ್ ನಲ್ಲಿ ಇದು ಸುಳ್ಳಾಗಿದೆ. ಇಬ್ಬರು ವರದಿಗಾರರನ್ನು ಮುಂಬಯಿಗೆ ಕಳುಹಿಸಿ, ಭಾರತ ವಿಶ್ವಕಪ್ ಗೆದ್ದಿದ್ದನ್ನು ಸಾಮಾನ್ಯ ಸುದ್ದಿಯಂತೆ ಪ್ರಕಟಿಸಿತು. ವಿಶೇಷ ಮುಖಪುಟ ವಿನ್ಯಾಸ ಕೂಡ ಇರಲಿಲ್ಲ. ಸಾಕಷ್ಟು ಇತರೆ ಸುದ್ದಿಗಳನ್ನು ಮುಖಪುಟದಲ್ಲಿ ಪ್ರಕಟಿಸಿತ್ತು. ಪತ್ರಿಕೆಯಲ್ಲಿ ಕೆಲಸ ಮಾಡುವವರು, ಮಾಡಿಸುವವರು ಜಡ್ಡು ಗಟ್ಟಿದರೆ ಹೀಗೆ ಆಗೋದು. ಇಷ್ಟೇ ಮಾಡುವುದಾದರೆ ಇಬ್ಬರನ್ನು ಮುಂಬಯಿಗೆ ಕಳುಹಿಸುವ ಅಗತ್ಯ ಇರಲ್ಲಿಲ್ಲ.

ವಿ.ಭಟ್ಟರು ಬಿಟ್ಟಮೇಲೆ ವಿಕಕ್ಕೆ ಗರ ಬಡಿದಂತಾಗಿದೆ. ವಿ.ಭಟ್ಟರು ವಿಕ ಬಿಟ್ಟು ೪ ತಿಂಗಳಾಯಿತು. ಈ ಅವಧಿಯಲ್ಲಿ ಒಂದು ಹೊಸ ಪ್ರಯೋಗವನ್ನು ವಿಕ ಮಾಡಿಲ್ಲ. ಅದು ಹೊಸ ಸಂಪಾದಕರ ಸಾಮರ್ಥ್ಯವನ್ನು ತೋರಿಸುತ್ತದೆ! ವಿಶ್ವಕಪ್ ಅವಧಿಯಲ್ಲೂ ಅವರ ಹಾಗು ವಿಕ ಸಿಬ್ಬಂದಿ ಸಾಮರ್ಥ್ಯ ಜಗಜ್ಜಾಹೀರಾಯಿತು. ಮುಖಪುಟಗಳಂತೂ ತುಂಬಾ ಸಪ್ಪೆಯಾಗಿದ್ದವು.

ಇದು ನಮ್ಮ ಅಭಿಪ್ರಾಯ. ನಿಮ್ಮ ಅಭಿಪ್ರಾಯ ಏನು?

Friday 1 April 2011

ಮುಗಿಯಿತು ಕ್ಯಾಪ್ಟನ್ ರಂಗನ ಕಪ್ತಾನಗಿರಿ!

ಅಯ್ಯೋ ಯಾಕೆ ಹೀಗಾಯ್ತು? ರಂಗ ಬಿಡ್ತಾರೆ ಅನ್ನೋ ಸುದ್ದಿಯನ್ನು ಮಾಡಲು ಸ್ಫೋಟಿಸಿದ್ದೆ ಮೀಡಿಯಾಮನ. ಬಹುಷಃ ನೀವು ಬೇರಾವುದೋ ಕೆಲಸದಲ್ಲಿ ಬ್ಯುಸಿ ಆಗಿರಬೇಕು ಅನ್ಸುತ್ತೆ. ಅದ್ಕೆ ನನಗೆ ಸಿಕ್ಕ ಅಧಿಕೃತ ಮಾಹಿತಿಯನ್ನು ಪೋಸ್ಟ್ ಮಾಡುತ್ತಿದ್ದೇನೆ. ಸಾಧ್ಯವಾದರೆ ಬಳಸಿಕೊಳ್ಳಿ.

 ಕ್ಯಾಪ್ಟನ್ ರಂಗನ ಕಪ್ತಾನಗಿರಿ ಮುಗಿದಿದೆ. ಅವರ ಸರ್ವಾಧಿಕಾರಿ ಧೋರಣೆಗೆ ಪೆಟ್ಟು ಬಿದ್ದಿದೆ. ಸುಮಾರು ಒಂದೂವರೆ ತಿಂಗಳ ಹಿಂದೆ ರಂಗ ಹಾಗೂ ಶಿವಸ್ವಾಮಿ ಎಂಬುವರನ್ನು ಕರೆದ ಮ್ಯಾನೇಜ್ಮೆಂಟ್ `ನಿಮ್ಮಿಂದ ಕಚೇರಿ ವಾತಾವರಣ ಹಾಳಾಗುತ್ತಿದೆ. ಇದೆಲ್ಲ ಸರಿಯಲ್ಲ' ಎಂದು ಎಚ್ಚರಿಸಿದೆ. ಅದರೂ ರಂಗ ತಮ್ಮ ಸರ್ವಾಧಿಕಾರಿ ಧೋರಣೆ ಬದಲಿಸಿಕೊಳ್ಳಲಾರದೆ ಎಲ್ಲರನ್ನೂ ಏಕವಚನದಲ್ಲಿ ಬಯ್ಯುತ್ತ, ಸಿಟ್ಟು ಮಾಡಿಕೊಳ್ಳುತ್ತ ನಂಗೆ ಇದೆಲ್ಲ ಬೇಡ ಎಂದು ಚೇಮ್ಬರಿನ ಬಾಗಿಲು ಹಾಕಿ ಮನೆ ದಾರಿ ಹಿಡಿಯುತ್ತಿದ್ದರು.

ಆದರೆ ಇಂದು ಮ್ಯಾನೇಜ್ಮೆಂಟ್ ನವರೇ ಹೋಗಿ, ನಿಮ್ಮ ಸಹವಾಸ ಸಾಕು ಎಂದರೂ `ಹೊಸ ಸಂಪಾದಕರು ಬರುವವರೆಗೆ ಇರುತ್ತೇನೆ' ಎನ್ನುತ್ತಿದ್ದಾರಂತೆ. ಇದೆಂಥ ವಿಪರ್ಯಾಸ! ಅಲ್ಲದೆ ರಂಗ ಅವರು ತಮ್ಮ ಸಹೋದ್ಯೋಗಿಗಳ ಬಳಿ `ನಂಗೆ ಆರೋಗ್ಯ ಚೆನ್ನಾಗಿಲ್ಲ. ಅದ್ಕೆ ನ್ಯೂಸ್, ಪ್ರೋಗ್ರಾಮ್ಸ್ ಮಾತ್ರ ನೋಡ್ಕೋತೀನಿ. ಆಡಳಿತ ನಿರ್ವಹಣೆ ನನ್ನಿಂದ ಸಧ್ಯ ಇಲ್ಲ ಅಂತ ಮ್ಯಾನೇಜ್ಮೆಂಟ್ ಗೆ ಹೇಳಿದೀನಿ. ನಾನೆಲ್ಲೂ ಹೋಗಲ್ಲ' ಅಂತ ಪುಂಗಿ ಊದುತ್ತಿದ್ದಾರಂತೆ.

ಇದನ್ನೆಲ್ಲಾ ಕೇಳಿಸಿಕೊಂಡ ಮ್ಯಾನೇಜ್ಮೆಂಟ್ `ಅವ್ರ ಆರೋಗ್ಯ ಸರಿ ಇಲ್ಲ ಅಂತಾನೆ ಅವ್ರಿಗೆ ರಾಜೀನಾಮೆ ಕೊಡಿ ಅಂದ್ವಿ. ಅವ್ರು ಒಪ್ಪಲಿಲ್ಲ. ಆದ್ದರಿಂದ ರಂಗ ಅವರನ್ನು ಹಲವು ಕೆಲಸಗಳಿಂದ ಮುಕ್ತಿಗೊಳಿಸಿದ್ದೇವೆ. ಅವರು ಇನ್ಮುಂದೆ ಕೇವಲ ಸಂಪಾದಕೀಯ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ. ಅವರು ಜುಗಲ್ಬಂದಿ ಹಾಗೂ ಪಬ್ಲಿಕ್ ವಾಯ್ಸ್ ಕಾರ್ಯಕ್ರಮ ಮಾತ್ರ ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮಗಳಿಗೆ ಅತಿಥಿಗಳನ್ನು ಕರೆಸುವ ಜವಾಬ್ದಾರಿಯನ್ನು ನಾಲ್ಕೈದು ದಿನಗಳಲ್ಲಿ ರಚನೆಯಾಗಲಿರುವ ಕೋರ್ ಕಮಿಟಿ ಮಾಡಲಿದೆ. ಅಂದರೆ ಕ್ಯಾಪ್ಟನ್ ರಂಗ ಅವ್ರು ಕೇವಲ ಕಾರ್ಯಕ್ರಮ ನಿರೂಪಕರು ಮಾತ್ರ!' ಎಂದು ಮ್ಯಾನೇಜ್ಮೆಂಟ್ ಸ್ಪಷ್ಟವಾಗಿ ಹೇಳಿದೆ.

ಮುಂದಿನ ಬದಲಾವಣೆ ವರೆಗೆ ನಿರೂಪಕ ಹಮೀದ್ ಪಾಳ್ಯ ಸಂಪಾದಕೀಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ರಂಗ ಅವರು ಇತ್ತೀಚಿಗೆ ಹತಾಶೆಗೆ ಒಳಗಾಗಿದ್ದರಾ? ಅವರು ವರ್ತಿಸುತ್ತಿದ್ದ ರೀತಿ ನೋಡಿದರೆ ಹೌದು ಎನ್ನುತ್ತಾರೆ ಸುವರ್ಣ ನ್ಯೂಸ್ ನ ಹಲವರು. ಟಿವಿ ೯ ನಲ್ಲಿ ವಿಶೇಷ ವರದಿ ಬಂದರೂ ಅದು ನಮ್ಮಲ್ಲಿ ಯಾಕೆ ಬರಲಿಲ್ಲ ಎಂದು ದಬಾಯಿಸುತ್ತಿದ್ದರಂತೆ. ಅವರ ಅಧಿಕಾರಾವಧಿಯ ಆರಂಭದಿಂದ ಕೊನೆವರೆಗೂ ಅವರು ಟಿವಿ ೯ ಅನ್ನು ಯಶಸ್ವಿಯಾಗಿ ಅನುಕರಣೆ ಮಾಡಿದರು. ಎರಡು ವಾರದ ಹಿಂದೆ ಸುವರ್ಣ ನ್ಯೂಸ್ ಪಿಸಿಆರ್ (ಪ್ಯಾನೆಲ್ ಕಂಟ್ರೋಲ್ ರೂಂ) ನಲ್ಲಿದ್ದ ಇಬ್ಬರ ಮೇಲೆ ಹಲ್ಲೆಯನ್ನೂ ನಡೆಸಿದ್ದರಂತೆ ರಂಗ. ಇದನ್ನು ತಿಳಿದ ಮ್ಯಾನೇಜ್ಮೆಂಟ್ ಅವರಿಂದ ರಾಜೀನಾಮೆ ಪಡೆಯಲು ಮುಂದಾಯಿತು.

ಇದೇನೇ ಇರಲಿ. ರಂಗ ಮತ್ತು ರವಿ ಹೆಗ್ಡೆ ಕಳೆದ ಒಂದೂವರೆ ವರ್ಷದಲ್ಲಿ ಸುವರ್ಣ ನ್ಯೂಸ್ ನಲ್ಲಿ ಮಾಡಬಾರದ ಎಲ್ಲ ಅನಾಹುತಗಳನ್ನೂ ಮಾಡಿದ್ದಾರೆ. *(ಕಳೆದ ಒಂದೂವರೆ ತಿಂಗಳಿನಿಂದ ರವಿ ಹೆಗ್ಡೆ ಉದಯವಾಣಿ ಸಂಪಾದಕರು.) ಮುಖ್ಯವಾಗಿ ಹೇಳುವುದಾದರೆ, ವೇತನ ತಾರತಮ್ಯ. ರವಿ ಹೆಗ್ಡೆ ಎಲ್ಲ ಮಹಿಳಾ ಆಂಕರ್ ಗಳ ಸಂಬಳವನ್ನು ಹೆಚ್ಚಿಸಿದರು. ಆದರೆ ಇತರ ಮಹಿಳಾ ಸಿಬ್ಬಂದಿಗೆ metarnity ರಜೆಯ ಸಂಬಳ ಕೊಡುವುದಕ್ಕೂ ನಿರಾಕರಿಸಿದ ಉದಾಹರಣೆಗಳಿವೆ. ಯಾಕೆ ಈ ತಾರತಮ್ಯ?

ರಂಗ ಅವರಂತೂ ತಮ್ಮವರಿಗೆ ಅಂದರೆ ಲಾಬಿ ಮಾಡುವವರಿಗೆ, ಬಕೆಟ್ ಹಿಡಿಯುವವರಿಗೆ, ಭ್ರಷ್ಟಾಚಾರ ಮಾಡುವವರಿಗೆ ಮನಸೋ ಇಚ್ಛೆ ವೇತನ ಹೆಚ್ಚಿಸಿದರು. ಸಂಬಳ ಹೆಚ್ಚಿಸಿಕೊಳ್ಳಬೇಕು ಎನಿಸಿದವರೆಲ್ಲ ಅವರಿಗೆ ಕಚೇರಿ ಒಳಗಿನ, ಹೊರಗಿನ ಮಾಹಿತಿಗಳನ್ನು ನೀಡುತ್ತ, ತನಗೆ ಬೇರೆ ಚಾನಲ್ ನಿಂದ ಆಫರ್ ಇದೆ ಎಂದರೆ ಸಾಕು. ಇಲ್ಲ, ನೀನೆಲ್ಲೂ ಹೋಗಬೇಡ. ಸಂಬಳ ಜಾಸ್ತಿ ಮಾಡ್ತೀನಿ ಎಂದು ಅದೇ ತಿಂಗಳಲ್ಲೇ ಸ್ಯಾಲರಿ ಹೆಚ್ಚಿಸುತ್ತಿದ್ದರು.

ಕೆಲವರಿಗಂತೂ ಆರು ತಿಂಗಳಲ್ಲಿ ಮೂರು ಬಾರಿ ಸಂಬಳ ಹೆಚ್ಚಳವಾದ ಉದಾಹರಣೆಗಳೂ ಇವೆ. ಆರು ತಿಂಗಳ ಹಿಂದೆ 25 ಸಾವಿರ ರೂ. ಪಡೆಯುತ್ತಿದ್ದವರು ಈಗ 45 ಸಾವಿರ ರೂ. ಪಡೆಯುತ್ತಿದ್ದಾರೆ! ಆರಂಭದಿಂದಲೂ ಇಲ್ಲೇ ಇರುವ ಕೆಲವರ ಸಂಬಳ 12 ಸಾವಿರವೂ ದಾಟಿಲ್ಲ. ಕೆಲ ಕಾಪಿ ಎಡಿಟರ್, ರಿಪೋರ್ಟರ್ ಗಳು ಈಗಲೂ 6 ರಿಂದ 8 ಸಾವಿರ ಸಂಬಳ ಪಡೆಯುತ್ತಿದ್ದಾರೆ. ಅದೇ ಸುವರ್ಣ ನ್ಯೂಸ್ ಗೆ ಕನ್ನದಪ್ರಭದಿಂದ ವರ್ಷದ ಹಿಂದಷ್ಟೇ ಬಂದ ಕೆಲವರು 38000, 45000 ರೂ. ಸಂಬಳ ಪಡೆಯುತ್ತಿದ್ದಾರೆ. ತಮ್ಮ ಪಾಡಿಗೆ ಕೆಲಸ ಮಾಡಿಕೊಂಡಿರುವ ನಿಷ್ಠಾವಂತರಿಗೆ ಉಂಡೆ ನಾಮ ಹಾಕುವಲ್ಲಿ ರಂಗ ಯಶಸ್ವಿಯಾಗಿದ್ದಾರೆ.

ಇನ್ನೂ ಒಂದು ಸೋಜಿಗವಿದೆ- ಸುವರ್ಣ ನ್ಯೂಸ್ ಪತ್ರಿಕೆಗೆ ಅಂತಾ ಕನ್ನದಪ್ರಭದಿಂದ ಬಂದ 15 ಕ್ಕೂ ಹೆಚ್ಚು ಮಂದಿಗೆ 20000 , 40000 ಸಂಬಳ ನೀಡಲಾಗಿತ್ತು. ಕೆಲಸವೇ ಇಲ್ಲದೆ ಅವರೆಲ್ಲ ಓತ್ಲಾ ಹೊಡೆಯುತ್ತ ಸಂಬಳ ಎಣಿಸುತ್ತಿದ್ದರು. ಇದನ್ನೆಲ್ಲಾ ಮಾಡಿದ್ದು ರಂಗ ಮತ್ತು ರವಿ ಹೆಗ್ಡೆ. *(ಈಗ ಅದೇ ರವಿ ಹೆಗ್ಡೆ ಉದಯವಾಣಿಯಲ್ಲಿ ಸುವರ್ಣ ನ್ಯೂಸ್ ನಿಂದ ಬಂದವರಿಗೆ ಅಷ್ಟು ಸಂಬಳ ಕೊಡಿಸಲಾಗದೆ ಒದ್ದಾಡುತ್ತಿದ್ದಾರೆ ಎಂಬುದು ಬೇರೆ ಮಾತು.) ಕಾರ್ಯಕ್ಷಮತೆ ನೋಡಿ ಸಂಬಳ ಕೊಡಬೇಕೇ ಹೊರತು ಲಾಬಿ, ಬಕೆಟ್ ಹಿಡಿಯುವವರಿಗೆಲ್ಲ ಮನಬಂದಂತೆ ಸಂಬಳ ಕೊಟ್ಟರೆ ಹೇಗೆ? ಸುವರ್ಣ ನ್ಯೂಸ್ ನಲ್ಲಿ ರಂಗ ಮಾಡಿರುವ ಅನಾಹುತ ಸರಿಪಡಿಸಲು ವರ್ಷವೇ ಬೇಕಾದೀತು.

(ಓದುಗರೊಬ್ಬರೊಬ್ಬರು ಕಾಮೆಂಟಿಸಿದ್ದನ್ನು ಯಥಾವತ್ ಪ್ರಕಟಿಸಲಾಗಿದೆ. ಮಾಹಿತಿಯ ಜೊತೆಗೆ ಲೇಖನವನ್ನು ಕಳುಹಿಸಿಕೊಟ್ಟಿರುವ ಓದುಗರಿಗೆ ಥ್ಯಾಂಕ್ಸ್. ಪ್ರೀತಿ ಹೀಗೆ ಮುಂದುವರಿಯಲಿ)

Thursday 31 March 2011

ಅಂದು ಬರೆದಿದ್ದು ಇಂದು ನಿಜವಾಗಿದೆ

ರಂಗ ಸುವರ್ಣ ಬಿಟ್ಟಿದ್ದಾರಂತೆ.

ಹೀಗೆ ಯಾರೋ ಕಾಮೆಂಟ್ ಹಾಕಿದ್ದಾರೆ. ಯಾರೋ ಗೊತ್ತಿಲ್ಲ.

ನಾವು ಅಂದೇ ಹೇಳಿದ್ದೆವು. ನಾವು ಸುಳ್ಳು ಬರೆಯೋಲ್ಲ. ಬರೆದಿದ್ದು ಸುಳ್ಳಾಗೊಲ್ಲ ಅಂತ. ಕೆಲವರು ಕಾಮೆಂಟಿನಲ್ಲಿ ನಮಗೆ ಉಗಿದಿದ್ದರು. ಪರಿಸ್ಥಿತಿ ಹಾಗಿತ್ತು. ಉಗಿಸಿಕೊಂಡೆವು. ಕಾಮೆಂಟ್ಗಳ ಪ್ರಕಾರ ಈಗ ನಾವು ಬರೆದಿದ್ದು ನಿಜವಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಲಭ್ಯವಾದ ತಕ್ಷಣ ಪ್ರಕಟಿಸಲಾಗುವುದು.

ಆಗ ನಮಗೆ ಉಗಿದವರಿಗೆ ಈಗ ಮೇಲ್ಮುಖ ಮಾಡಿ ಉಗಿದುಕೊಂಡಂತೆ ಆಗಿರಬಹುದು.

ಅದಕ್ಕೆ ಅವರೇ ಜವಾಬ್ದಾರರು.

ಜೆಪಿ ನಾಪತ್ತೆ!

ಜೆಪಿ ೨ ವಾರ ವಿಕ ಕಚೇರಿಯಲ್ಲಿ ಕಾಣಿಸಿಕೊಂಡಿರಲಿಲ್ಲ!
ಪೊಲೀಸರು ಹುಡುಕಿಕೊಂಡು ಬಂದರು ಎಂಬ ಕಾರಣಕ್ಕೆ ಹೀಗೆ ಎಂದು ಪ್ರತ್ಯೇಕವಾಗಿ ಹೇಳಬೇಕೇ?
ವಿಕ ಕಚೇರಿಯಲ್ಲಿ ಎಲ್ಲರು ಜೆಪಿ ತಲೆಮರೆಸಿಕೊಂಡಿದ್ದಾರೆ ಎಂದು ಅಂದುಕೊಂಡಿದ್ದರು. ಆದರೆ ೨ ದಿನದಿಂದ ಅವರು ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದಕ್ಕಿಂತ ತಾಜಾ ಸುದ್ದಿಯೆಂದರೆ ಜೆಪಿಯನ್ನು ಬೆಂಬಲಿಸಬೇಕು ಎಂದು ವಿಕ ಮ್ಯಾನೇಜ್ಮೆಂಟ್ ತೀರ್ಮಾನಿಸಿದೆಯಂತೆ. ಹಾಗೆ ತೀರ್ಮಾನಿಸಿದ್ದೆ ಆದರೆ ನಾವು ವಿಕ ಮ್ಯಾನೇಜ್ಮೆಂಟ್ಗೆ ಕೆಲವು ಪ್ರಶ್ನೆ ಎತ್ತಬೇಕಾಗುತ್ತದೆ.

ಇಲ್ಲಿ ನಾವು ಎತ್ತಿದ್ದ ಪ್ರಶ್ನೆ ತಾತ್ವಿಕವಾದದ್ದು. ವಯಕ್ತಿಕವಾದುದಲ್ಲ. ಓದುಗ ಮಹಾಶಯರೊಬ್ಬರು ವಿ.ಭಟ್ಟರು, ಜೋಗಿ ಬರೆದಿಲ್ಲವೇ? ಎಂಬ ಮಹಾನ್ ಪ್ರಶ್ನೆ ಎತ್ತಿದ್ದಾರೆ. ಹೌದು. ಬರೆದಿದ್ದಾರೆ. ಅವರವರ ಹೆಸರಿನಲ್ಲಿ ಫೋಟೋ ಹಾಕಿ ಬರೆದಿದ್ದಾರೆ. ಪರ್ಮಿಶನ್ ಪಡೆದು ಬರೆದಿದ್ದಾರೆ. ಜೆಪಿಯ  ಹಾಗೆ ಕದ್ದು ಮುಚ್ಚಿ, ಯಾರದ್ದೋ ಹೆಸರಿನಲ್ಲಿ ಬರೆದಿಲ್ಲ. ಮುಖ್ಯವಾಗಿ ಅವರಿಬ್ಬರ ಬರಹದಿಂದ ಯಾರು ಸತ್ತಿಲ್ಲ. 

ಜೆಪಿ ಗುಪ್ತವಾಗಿ, ಪರ್ಮಿಶನ್ ಇಲ್ಲದೆ ಬರೆದಿದ್ದು ಮಾಧ್ಯಮಗಳ ಅಲಿಖಿತ ಸಂವಿಧಾನದ ಪ್ರಕಾರ ತಪ್ಪು. ಹಾಗಿಲ್ಲವಾದಲ್ಲಿ ಯಾರು, ಯಾರ ಹೆಸರಿನಲ್ಲಿ ಏನು ಬೇಕಾದರೂ, ಎಲ್ಲಿಗೆ ಬೇಕಾದರೂ ಬರೆಯಬಹುದು ಎಂದಾಗುತ್ತದೆ. ಹಾಗೆ ಬರೆಯಬಾರದು ಎಂದಾದರೆ ವಿಕ ಮ್ಯಾನೇಜ್ಮೆಂಟ್ ಯಾಕೆ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ? ಕ್ರಮ ಕೈಗೊಳ್ಳದೆ ಹೋದರೆ ಜೆಪಿ ಮಾಡಿದ್ದನ್ನು ಸಮರ್ಥಿಸಿದಂತಾಯಿತು. ಹಾಗಾದರೆ ಶಿವಮೊಗ್ಗದಲ್ಲಿ ನಡೆದ ಇಬ್ಬರ ಸಾವಿನ ಹೊಣೆ ಹೊರಲು ವಿಕ ಮ್ಯಾನೇಜ್ಮೆಂಟ್ ಸಿಧ್ಧವಿದೆಯೇ?

ವಿಕ ಮ್ಯಾನೇಜ್ಮೆಂಟ್ ಮುಂದೆ ಈಗ ಎರಡು ಆಯ್ಕೆಗಳಿವೆ. ೧) ಜೆಪಿ ಮೇಲೆ ಕ್ರಮ ಕೈಗೊಳ್ಳಬೇಕು. ೨) ೨ ಸಾವಿನ ಹೊಣೆ ಹೊರಬೇಕು. ಸುನೀಲ್ ರಾಜಶೇಖರ ಮತ್ತು ಈ. ರಾಘವನ್ ಯಾವುದನ್ನು ಆರಿಸಿಕೊಳ್ಳುತ್ತಾರೆ ಕಾದುನೋಡೋಣ.

Tuesday 29 March 2011

ಜಯಪ್ರಕಾಶ ಹೀಗೆ ಮಾಡುವುದೇ? ನಾರಾಯಣ ನಾರಾಯಣ!

ಸ್ಪೋಟಕ ಸುದ್ದಿ ಅದೇನು ಕೊಟ್ಟೀರಿ ಎಂದು ಒಬ್ಬ ಓದುಗ ಮಹಾಪುರುಶರೊಬ್ಬರು ಕೇಳಿದ್ದಾರೆ.

ಇಲ್ಲಿದೆ ನೋಡಿ!
ಕಪ್ರದಲ್ಲಿ ಪ್ರಕಟವಾದ ಬರಹಕ್ಕೆ ವಿಕ ವರದಿಗಾರನೋಬ್ಬನಿಗೆ ಪೋಲೀಸ್ ನೋಟೀಸ್ ಜಾರಿಯಾಗಿದೆ!

ಇದು ವಿಚಿತ್ರ. ಆದರೂ ಸತ್ಯ. ನಂಬಿ ಪ್ಲೀಸ್!

೧-೨ ವರ್ಷದ ಹಿಂದೆ ಕಪ್ರದಲ್ಲಿ ತಸ್ಲೀಮ ನಸ್ರೀನ್ ಬರೆದ ಪರ್ದಾ ಕುರಿತು ಸಾಪ್ತಾಹಿಕದಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದರಿಂದಾಗಿ ಸಾಕಷ್ಟು ಗಲಾಟೆಯೂ ಆಗಿತ್ತು. ಶಿವಮೊಗ್ಗದಲ್ಲಿ ಗೋಲಿಬಾರ್ ಆಗಿ ಇಬ್ಬರು ಮೃತಪಟ್ಟಿದ್ದರು. ನಿಮಗೆ ನೆನಪಿರಬಹುದು.

ವಿಚಿತ್ರವೆಂದರೆ ಅದನ್ನು ಬರೆದವರು ವಿಕದಲ್ಲಿರುವ ಜಯಪ್ರಾಕಾಶ ನಾರಾಯಣ!

ತಸ್ಲೀಮ ನಸ್ರೀನ್ ಅವರ ಪರ್ದಾ ಲೇಖನವನ್ನು ಜಯಪ್ರಕಾಶ್ ನಾರಾಯಣ ಭಾಷಾಂತರಿಸಿದ್ದರು. ಅದನ್ನು ವಿಕದಲ್ಲಿ ಪ್ರಕಟಿಸುವುದು ಅವರ ಉದ್ದೇಶವಾಗಿತ್ತು. ಆದರೆ ಕೋಮುವಾದಿ ಎಂದು ಬುದ್ದಿಜೀವಿಗಳಿಂದ ಕರೆಸಿಕೊಂಡಿರುವ ವಿ.ಭಟ್ಟರು ಕೂಡ ಅದನ್ನು ಪ್ರಕಟಿಸಲು ನಿರಾಕರಿಸಿದರು. ಸುಮ್ಮನೆ ಒಂದು ಲೇಖನ ವೇಸ್ಟ್ ಆಗಿಬಿಡುತ್ತಲ್ಲ ಎಂದು ಕುಬುದ್ದಿ ಕರ್ಚು ಮಾಡಿದ ಜಯಪ್ರಕಾಶ್ ನಾರಾಯಣ ಲೇಖನವನ್ನು ಕಪ್ರಕ್ಕೆ ಕಳುಹಿಸಿದರು.

ಅಲ್ಲಿ ಸಂಪಾದಕ ಶಿವಸುಬ್ರಮಣ್ಯ ಮತ್ತು ಸಾಪ್ತಾಹಿಕ ಮುಖ್ಯಸ್ಥ ಡಾ.ವೆಂಕಿ ಸೇರಿ ಅದನ್ನು ಸಾಪ್ತಾಹಿಕದಲ್ಲಿ ಪ್ರಕಟಿಸಿಬಿಟ್ಟರು. ಆಮೇಲೆ ಶಿವ ಶಿವ ಎನ್ನಬೇಕಾಯ್ತು!

ಗಲಾಟೆಗಳೆಲ್ಲ ಮುಗಿದು ಪೋಲೀಸ್ ವಿಚಾರಣೆ ಆರಂಭವಾಯಿತು. ಯಾವಾಗ ಕುತ್ತಿಗೆಗೆ ಬಂತೊ ಆಗ ಇಬ್ಬರು ಜೆಪಿ ನಾಮಸ್ಮರಣೆ ಆರಂಭಿಸಿದ್ದಾರೆ. ಯಾವ ಜೆಪಿ ಎಂದು ಹುಡುಕುತ್ತ ಹೊರಟ ಪೋಲೀಸ್ ಜೀಪು ವಿಕ ಕಚೇರಿ ತಲುಪಿದೆ!
ಈಗ ಪೊಲೀಸರು ವಿಕದ ಜಯಪ್ರಕಾಶ್ ನಾರಾಯಣನಿಗೂ ನೋಟೀಸ್ ನೀಡಿದ್ದಾರೆ. ವಿಕ ಆಡಳಿತ ವರ್ಗಕ್ಕೂ ಇ ಮಾಹಿತಿ ದೊರೆತಿದೆ.

ನಮ್ಮ ಪ್ರಶ್ನೆ ಇರುವುದು ಒಂದು ಪತ್ರಿಕೆಯಲ್ಲಿ ಇದ್ದುಕೊಂಡು ಇನ್ನೊಂದು ಪತ್ರಿಕೆಗೆ ಬರೆಯುವುದು ಸರಿಯೆ? ಇದು ಗೊತ್ತಾಗಿಯೂ ವಿಕ ಆಡಳಿತ ಸುಮ್ಮನಿರುವುದೇಕೆ? ಅದರರ್ಥ ಜಯಪ್ರಕಾಶ್ ನಾರಾಯಣ ಬರೆದ ಲೇಖನವನ್ನು ವಿಕ ಆಡಳಿತ ಬೆಂಬಲಿಸುತ್ತಿದೆಯೆಂದೆ?

ಜಯಪ್ರಕಾಶ್ ನಾರಾಯಣ ಕಚೇರಿಯಲ್ಲಿ ಇನ್ನೊಬ್ಬರಿಗೆ ಪಾಠ ಮಾಡುವಲ್ಲಿ ಪ್ರವೀಣರು. ಇನ್ನೊಬ್ಬರಿಗೆ ಪಾಠ ಮಾಡುವವರು ಹೀಗೆ ಮಾಡಿದರೆ ಹೇಗೆ? ಇದನ್ನೆಲ್ಲಾ ನೋಡಿಕೊಂಡು ಸುರಾ (Sunil Rajshekhar) ಸುಮ್ಮನುಳಿಯುವರೆ?

Sunday 27 March 2011

ಮಾಡಿದಮೇಲೆ ಕಂಡೆ ಕಾಣುತ್ತೆ ಬಿಡಿ!

 ಏನೇನ್ ಮಾಡ್ತೀವಿ ನೋಡ್ತಾ ಇರಿ!

ಹಾಗಂತ ಕಪ್ರ ಜಾಹೀರಾತು ಪ್ರಕಟಿಸುತ್ತಿದೆ. ಜಾಹೀರಾತುಗಳೇನೋ ಚೆನ್ನಾಗಿವೆ. ಆದರೆ ಪತ್ರಿಕೆಯಲ್ಲಿ ತುಂಬಾ ಹೊಸದೇನು ಕಾಣುತ್ತಿಲ್ಲ. ಒಂದೆರಡು ಅಂಕಣಕಾರರು, ಸ್ವಲ್ಪ ವಿನ್ಯಾಸದಲ್ಲಿ ಬದಲಾವಣೆ ಹೊರತುಪಡಿಸಿ ಹೊಸದೇನು ಓದುಗರಾದ ನಮಗೆ ಕಂಡಿಲ್ಲ.

ಹೀಗಾಗಿ ನಮ್ಮ ದ್ರಷ್ಟಿಯಲ್ಲಿ ಏನೇನ್ ಮಾಡ್ತೀವಿ ನೋಡ್ತಾ ಇರಿ ಎಂಬುದು ಸ್ವಲ್ಪ ಧಿಮಾಕಿನ ಮಾತು. ಪತ್ರಿಕೆಯಲ್ಲಿ ಏನೇ ಹೊಸತು ಮಾಡಿದರು ಎಲ್ಲರಿಗು ಕಾಣುತ್ತದೆ. ಕಂಡಾಗ ನೋಡುತ್ತಾರೆ. ಅದು ಬಿಟ್ಟು ಏನೇನ್ ಮಾಡ್ತೀವಿ ನೋಡ್ತಾ ಇರಿ!ಅಂದ್ರೆ?

ನಮಗೇನು ಅದೇ ಕೆಲಸಾನ? ಕಪ್ರ ದವರು ಏನು ಮಾಡಿದ್ರು? ಅದ್ರಲ್ಲಿ ಹೊಸದೇನು? ಎಂದು ಹುಡುಕ್ತಾ ಕೂತ್ಕೊಬೇಕ?

ಜನಕ್ಕೆ ಅದೆಲ್ಲ ಬೇಕಾಗಿಲ್ಲ. ಬೆಳಗ್ಗೆದ್ದು ಪೇಪರ್ ಓದುವಾಗ ಅದು ಇಷ್ಟವಾಗಬೇಕು. ಆಸಕ್ತಿಕರವಾಗಿ ಓದಿಸಿಕೊಂಡು ಹೋಗಬೇಕು. ಆಕರ್ಷಕವಾಗಿರಬೇಕು. ಇಷ್ಟೇ. ಅದು ಬಿಟ್ಟು ನೀವು ಏನೇನ್ ಮಾದಿದ್ರು ನೋಡ್ತಾ ಇರೋಕೆ ಜನಕ್ಕೆ ಪುರುಸೊತ್ತಿಲ್ಲ.

ಗೊತ್ತಾಯ್ತ ಸ್ವಾಮಿ ಸಂಪಾದಕರೆ?

ಸ್ವಲ್ಪ ಧಿಮಾಕು ಕಡಿಮೆ ಮಾಡ್ಕೊಳ್ಳಿ. ಅದು ಆರೋಗ್ಯಕ್ಕೆ ಒಳ್ಳೇದಲ್ಲ.

ಪೋಸ್ಟ್ ಮಾಡದೆ ಇರುವುದಕ್ಕೆ ಸಾರಿ

ಕೆಲಸದ ನಿಮಿತ್ತ ಪರ ಊರಿಗೆ ಹೋಗಿದ್ದೆ. ಇಷ್ಟು ದಿನ ಪೋಸ್ಟ್ ಮಾಡಿರಲಿಲ್ಲ.

ಆದರು ಓದುಗರು ಬಂದು ಹೋಗಿದ್ದೀರಿ. ಧನ್ಯವಾದಗಳು.

ಕೆಲವರು ಕೇಸಿಗೆ ಹೆದರಿ ಪೋಸ್ಟ್ ಮಾಡಿಲ್ಲವೇ ಎಂದು ಕಿಚಾಯಿಸಿದ್ದಾರೆ. ನಾವು ಹೇಗೆ ಬೇರೆಯವರ ಬಗ್ಗೆ ವಿಚಾರ ಮಾಡುತ್ತೇವೆಯೋ ಹಾಗೆ ಅವರೂ ನಮ್ಮ ಬಗ್ಗೆ ವಿಚಾರ ಮಾಡಲು ಸ್ವತಂತ್ರರು. ಕೇಸಿಗೆ ಹೆದುರವಂತದ್ದು ಏನೂ ಇಲ್ಲ. ಕೇಸು ಹಾಕುವಂತದ್ದು ಏನು ಬರೆದಿಲ್ಲ. ಅಸ್ತರಮೇಲು ಕೇಸು ಹಾಕಿದರೆ ಇದಕ್ಕಿಂತ ಹೆಚ್ಚಿನ ಸ್ಪೋಟಕ ಮಾಹಿತಿ ಇದೆ. ಪ್ರಕಟಿಸೋಣ ಬಿಡಿ.

ಹೇಗೂ ಓದುಗರು ನೀವಿದ್ದಿರಲ್ಲ!

Monday 21 March 2011

ಉದಯವಾಣಿಯಿಂದ ೩ ಜನ ವಿಕಕ್ಕೆ ಇದು ಸುಪರ್ ಮೂನ್ ಎಫೆಕ್ಟ್ ಅಲ್ಲ!

ವಿ.ಭಟ್ಟರು ವಿಕ ಬಿಡುವುದರ ಮೂಲಕ ಆರಂಭವಾದ ತಲ್ಲಣದ ಅಲೆಗಳು ಇನ್ನು ನಿಂತಿಲ್ಲ. ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ವಲಸೆ ಇನ್ನು ಕೆಲವು ದಿನ ಹೀಗೆ ಇರಬಹುದು ಎಂಬ ಶಂಕೆಯಿದೆ. ಸಂಖ್ಯೆಗಳ ಕುರಿತು ನಿಖರ ಮಾಹಿತಿ ಇಲ್ಲ.

ಈ ಅಲೆಯ ಪರಿಣಾಮವಾಗಿಯೇ ೩ ಜನ ಉದಯವಾಣಿಯಿಂದ ವಿಕಕ್ಕೆ ವಲಸೆ ಹೊರಟಿದ್ದಾರೆ.  ವೈ.ಗ. ಜಗದೀಶ್, ಹುದ್ರಣ್ಣ ಪರ್ತಿಕೋಟಿ, ಲಕ್ಷ್ಮಿನಾರಾಯಣ ಎಂಬವರೇ ವಿಕಕ್ಕೆ ಹೊರಟವರು. ವಿಕ ಚೀಫ್ ರಿಪೋರ್ಟರ್ ಎಲ್. ಪ್ರಕಾಶನೆ ಇವರನ್ನು ಕರೆತರುತ್ತಿದ್ದಾನೆ.

ಅತ್ತ ಉದಯವಾಣಿ ಸಂಪಾದಕ ರವಿ ಹೆಗಡೆ ಅವತಾರಕ್ಕೆ ಹೊಸ ಸಂಚಲನ ಮೂಡಿದೆ. ತುಂಬಾ ಜನ ಉದಯವಾಣಿಯಲ್ಲಿ ಓತ್ಲಾ ಹೊಡೆದುಕೊಂಡಿದ್ದರು. ಅವರಿಗೆಲ್ಲ ರವಿ ಹೆಗಡೆ ಚುರುಕು ಮುಟ್ಟಿಸಿದ್ದಾರೆ. ಹಿರಿ-ಕಿರಿಯರೆನ್ನದೆ ರವಿ ಹೆಗಡೆಯವರು ಏಕವಚನದಲ್ಲಿ ಕರೆಯುವುದು ನೋಡಿ ಉದಯವಾಣಿಯ ಜನತೆ ದಂಗಾಗಿದೆ.

ಕಂಕ ಮೂರ್ತಿ ಸೀನಿಯರ್ ಮನುಷ್ಯ. ಅವರು ೮:೦೦ ಗಂಟೆಗೆ ಬ್ಯಾಗು ಹಿಡಿದು ಮನೆಗೆ ಹೊರಟಾಗ ರವಿ ಹೆಗಡೆ ಕರೆದು "ಏನು ಮನೆಗೆ ಹೊರಟದ್ದಾ? ಇಷ್ಟು ಬೇಗ ಮನೆಗೆ ಹೋಗುವಂತಿಲ್ಲ. ಮನೆಗೆ ಹೋಗುವುದು ೧೧ರ ಮೇಲೆಯೆ' ಎಂದು ಹೇಳಿದ್ದಾರೆ. ಇದೆ ಅನುಭವ ಹುದ್ರಣ್ಣ ಪರ್ತಿಕೋಟಿಗೂ ಆಗಿದೆ. 'ನೀವು ಶ್ಯಾಮರಾಯರನ್ನು ನೋಡಿದ್ದೀರಿ. ನಾನು ೧೦೦ ಶ್ಯಾಮರಾಯರಿಗೆ ಸಮ. ನಾನು ಈವರೆಗೆ ೨೦೦ ಜನರನ್ನು ಕೆಲಸದಿಂದ ಕಿತ್ತು ಹಾಕಿದ್ದೇನೆ. ೨೪೦ ಜನರನ್ನು ಕೆಲಸಕ್ಕೆ ತೆಗೆದುಕೊಂಡಿದ್ದೇನೆ' ಎಂದು ರವಿ ಹೆಗಡೆ ಹೇಳಿರುವುದು ಉದಯವಾಣಿಯಲ್ಲಿ ಓತ್ಲಾ ಹೊಡೆದುಕೊಂಡು ಇದ್ದವರಿಗೆ ಚಿರುಕುರುಳಿ ಸೊಪ್ಪು ತೀಡಿದಂತಾಗಿದೆ. ರವಿ ಹೆಗಡೆ ಒಳ್ಳೆಯವರು ಆದರೆ ರಂಗನ ಜೊತೆ ಸೇರಿ ಹೀಗಾಗಿದ್ದಾರೆ ಎಂದು ಉದಯವಾಣಿಯ ಜನ ಮಾತಾಡಿಕೊಳ್ಳುತ್ತಿದ್ದಾರೆ.

ಮುಗಿಸುವ ಮೊದಲು ಒಂದು ಸೂಚನೆ: ಇದೆಲ್ಲ ಸೂಪರ್ ಮೂನ್ ಪರಿಣಾಮ ಅಲ್ಲ.

ಕಾಮೆಂಟಿಗರೆ ದಯವಿಟ್ಟು ಗಮನಿಸಿ

ನಾವು ಯಾರ ಕುರಿತು ಕೂಡ ಕೀಳಾಗಿ ಬರೆಯಲಾರೆವು. ಆದ್ದರಿಂದ ಕಾಮೆಂಟು ಮಾಡುವವರು ಕೂಡ ಇದನ್ನು ಪಾಲಿಸಬೇಕು ಎಂಬುದು ನಮ್ಮ ವಿನಂತಿ.
ಇನ್ನು ಮುಂದೆ ಯಾವುದೇ ರೀತಿಯ ಬೈಗುಳ, ನಿಂದನೆ ಇರುವ ಕಾಮೆಂಟುಗಳನ್ನು ನಿರ್ದಯವಾಗಿ ಡಿಲಿಟ್ ಮಾಡಲಾಗುವುದು. ನಿಮ್ಮ ಆಕ್ರೋಶ, ಬೇಸರ ಏನೇ ಇರಲಿ ಅದನ್ನು ಸಾತ್ವಿಕ ಶಬ್ದಗಳಲ್ಲೇ ತಿಳಿಸಿ. ಪ್ರಕಟಿಸೋಣ. ಇಲ್ಲವಾದಲ್ಲಿ ಇಲ್ಲ. 

ಇಲ್ಲಿ ಆರೋಗ್ಯಕರ ಚರ್ಚೆಗೆ ಮಾತ್ರ ಅವಕಾಶ.

Saturday 19 March 2011

ವಿಕಕ್ಕೆ 'ಶಕ್ತಿ' ತುಂಬಲು 'ರೆಸಾರ್ಟ್' ಪ್ರವಾಸ

ರಾಜಕೀಯಕ್ಕೆ ಸೀಮಿತವಾಗಿದ್ದ ರೆಸಾರ್ಟ್ ರಾಜಕೀಯ ಈಗ ಪತ್ರಿಕೋದ್ಯಮಕ್ಕೂ ಕಾಲಿರಿಸಿದೆ!

ವಿ.ಭಟ್ಟರು ಬಿಟ್ಟನಂತರ ವೀಕ್ ಆಗಿರುವ ವಿಕಕ್ಕೆ 'ಶಕ್ತಿ' ತುಂಬಲು 'ರೆಸಾಟ್೯' ರಾಜಕಾರಣದಿಂದ ಸ್ಪೂತಿ೯ ಪಡೆದ ಟೈಮ್ಸ್ ಮ್ಯಾನೇಜ್ಮೆಂಟ್ ರೆಸಾಟ್೯ ಮೊರೆ ಹೋಗಿದೆ.

ವಿಕ ಸಿಬ್ಬಂದಿಗೆ ಶನಿವಾರ ಶಕ್ತಿ ಹಿಲ್ ರೆಸಾಟ್೯ ಪ್ರವಾಸ ಏಪ೯ಡಿಸಲಾಗಿದೆ. ಬೆಳಗ್ಗೆ 10.00 ಗಂಟೆಯಿಂದ ಸಂಜೆ 4.00 ಗಂಟೆವರೆಗೆ ವಿಕ ಸಿಬ್ಬಂದಿ ರೆಸಾಟ್೯ನಲ್ಲಿ ಕಳೆಯಲಿದ್ದಾರೆ. ಇಲ್ಲಿ ಭಜ೯ರಿ ಈಟಿಂಗ್ ಜೊತೆಗೆ ಮೀಟಿಂಗ್ ಇದೆಯಂತೆ. ಸಿಬ್ಬಂದಿಗೆ ಔಟಿಂಗೂ ಆದಂತಾಯಿತು.

ಟೈಮ್ಸ್ ಮ್ಯಾನೇಜ್ಮೆಂಟ್ ವಿಕ ಸಿಬ್ಬಂದಿಗೆ ಶಕ್ತಿ ತುಂಬಲು ಹೊರಡಲು ಮೂಲ ಕಾರಣ ಪ್ರಸಾರ ಸಂಖ್ಯೆ ಮತ್ತು ಜಾಹೀರಾತು ಸಂಖ್ಯೆ ಕುಸಿತ. ವಿ. ಭಟ್ಟರು ಬಿಟ್ಟು ಕಪ್ರ ಸೇರಿದ ಮೇಲೆ ಕಪ್ರದ ಪ್ರಸಾರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರದಿದ್ದರೂ, ವಿಕ ಪ್ರಸಾರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಪತ್ರಿಕೆ ಗುಣಮಟ್ಟದ ಬಗ್ಗೆ ಸಾಕಷ್ಟು ದೂರು-ದುಮ್ಮಾನಗಳಿವೆ.

ಅದೇನು ವಿಚಿತ್ರವೊ. ವಿ.ಭಟ್ಟರು ಸಂಪಾದಕರಾಗಿದ್ದರೂ, ಅವರು ಬಿಟ್ಟಮೇಲೆ ಜಾಹೀರಾತುಗಳು ಗಣನೀಯವಾಗಿ ಕುಸಿದಿವೆ. ಇದು ಟೈಮ್ಸ್ ಮ್ಯಾನೇಜ್ಮೆಂಟ್ಗೆ ತಲೆ ಬಿಸಿ ಮಾಡಿದೆ. ಟೈಮ್ಸ್ ಮ್ಯಾನೇಜ್ಮೆಂಟ್ ಪ್ರಕಾರ ಪತ್ರಿಕೆ ಒಳ್ಳೆಯದಾಗಿ ಬರುತ್ತೊ, ಬಿಡುತ್ತೊ, ಜಾಹೀರಾತು ಬರಬೇಕು. ಅದು ಬರಲಿಲಲ್ಲವೆಂದರೆ ಪತ್ರಿಕೆ ಮುಚ್ಚಲು ಅವರು ಹಿಂದೆಮುಂದೆ ನೋಡುವವರಲ್ಲ.

ಈಗ ಸಿಬ್ಬಂದಿಯನ್ನು ಶಕ್ತಿಹಿಲ್ ರೆಸಾಟ್೯ಗೆ ಕರೆದುಕೊಂಡು ಹೋಗಿರುವುದನ್ನು ಗಮನಿಸಿದರೆ ಅಷ್ಟು ಅಶಕ್ತಿಯಾಗಿದೆಯೆಂದು ಅರ್ಥವಲ್ಲವೆ? ಅಥವಾ ಸಿಬ್ಬಂದಿಯ ವಿಶ್ವಾಸ ಗಳಿಸಿ ಅವರನ್ನು ವಿಕದಲ್ಲೇ ಉಳಿಸಿಕೊಳ್ಳುವ ಯತ್ನವಾ?

ವಿಶೇಷವೆಂದರೆ ಈ ಶಕ್ತಿ ಹಿಲ್ ರೆಸಾಟ್೯ ವಿ.ಭಟ್ಟರ ಮನೆಯಿಂದ ಕೂಗಳತೆ ದೂರದಲ್ಲಿದೆಯಂತೆ!

Friday 18 March 2011

ವಿಕ ಸುದ್ದಿ ಹೊರಗೆ 'ಹಾಯ್'ಸುವವರಾರು?

ವಿಕದಲ್ಲಿ ಏನಾದರು ಅದು ಸಿಇಒ ಸುನೀಲ್ ರಾಜಶೇಖರ್ ಗೆ ಗೊತ್ತಾಗುವ ಮೊದಲು ಬೆಳೆಗೆರೆ ಕಿವಿ ತಲುಪಿರುತ್ತದೆ!

ಇದು ವಿಕ ವಿಶೇಷ!

ಬೆಳೆಗೆರೆ ಕಿವಿಗೆ ಬಿದ್ದ ಮೇಲೆ ಮುಗಿಯಿತು. ಅದು 'ಹಾಯ್' ನಲ್ಲಿ ಪ್ರಕಟವಾಗುತ್ತದೆ. ಈ ಬಾರಿ ಹಾಗೆ ಆಗಿದೆ. ವಿಕದಿಂದ 3 ಜನ ಕಪ್ರಕ್ಕೆ ಹೋಗುತ್ತಾರೆ ಎಂಬ ವರದಿ ಪ್ರಕಟವಾಗಿದೆ. ವಿಕದಲ್ಲಿ ನಡೆವ ಪ್ರತಿಯೊಂದು ಸಂಗತಿಯನ್ನು ಬೆಳೆಗೆರೆಗೆ ಹಾಯ್ ಸುವವರು ಯಾರು?

ಅಲ್ಲಿನ ಆ್ಯಕ್ಟಿಂಗ್ ಚೀಫ್ ರಿಪೋರ್ಟರ್!

ಈ ಆ್ಯಕ್ಟಿಂಗ್ ಚೀಫ್ ರಿಪೋರ್ಟರ್ ವಿಕಕ್ಕೆ ವರದಿ ಮಾಡುವುದಕ್ಕಿಂತ ಹೆಚ್ಚಾಗಿ ಹಾಯ್ ಗೆ ವರದಿ ಮಾಡುತ್ತಾರೆ. ಹೀಗೇಕೆ ಹೇಳುತ್ತೀರಿ ಎಂದು ನೀವು ಕೇಳಬಹುದು. ಆ್ಯಕ್ಟಿಂಗ್ ಚೀಫ್ ರಿಪೋರ್ಟರ್ ಇತ್ತೀಚೆಗೆ ವರದಿ ಮಾಡಿದ್ದನ್ನು ಯಾರು ನೋಡಿಲ್ಲ. ಅವರು ನಿಜವಾದ ಅರ್ಥದಲ್ಲಿ ಆ್ಯಕ್ಟಿಂಗ್ ಚೀಫ್ ರಿಪೋರ್ಟರ್!

ಬರೀ ಆ್ಯಕ್ಟ್ ಮಾಡುತ್ತಿದ್ದಾರೆ!

ಅವರ ಹೆಸರು ಎಲ್. ಪ್ರಕಾಶ್.

ವಿ.ಭಟ್ಟರು ವಿಕದಲ್ಲಿದ್ದಾಗ ಅವರಿಗೆ ಬಕೆಟ್ ಹಿಡಿದುಕೊಂಡು ಓಡಾಡಿದ. ಈಗ ಈ ರಾಘವನ್ ಗೆ ಬಕೆಟ್ ಕಾಯಕ ಮುಂದುವರಿಸಿದ್ದಾರೆ. ಬೆಳೆಗೆರೆಗೆ ಅವರು ಬಕೆಟ್ ಹಿಡಿಯಲಾರಂಭಿಸಿ ದಶಕಗಳು ಕಳೆದಿವೆ. ಪದ್ಮನಾಭನಗರಕ್ಕೆ ಹೋದಾಗ ಬೆಳೆಗೆರೆಗೆ ಕಾಲು ಒತ್ತುತ್ತಿರುವುದನ್ನು ನೋಡಿದವರಿದ್ದಾರೆ. ಇದನ್ನು ನೋಡಿದವರು ಮೊದಲಕ್ಷರ ಎಲ್. ಅಂದರೆ ಲೆಗ್ ಎಂದು ಗೇಲಿ ಮಾಡುತ್ತಾರೆ.

ಪದ್ಮನಾಭನಗರದಲ್ಲಿ ಕಾಲು ಒತ್ತುವ ಈತ ಆಚೆ ಬಂದು ಬೆಳೆಗೆರೆಗೆ ಹಿಗ್ಗಾಮುಗ್ಗಾ ಹಿಯಾಳಿಸುತ್ತಾನೆ. ಬೆಳೆಗೆರೆ-ಯಶೋಮತಿಯನ್ನು ಮದುವೆಯಾದಾಗ ಎಲ್ಲರೆದುರು ಬೈದುಕೊಂಡು ತಿರುಗಾಡಿದ್ದ. ಕೇಳಿದರೆ ನಾನು ಬೆಳೆಗೆರೆ ಋಣದಲ್ಲಿಲ್ಲ, ಅವರು ನನ್ನ ಋಣದಲ್ಲಿದ್ದಾರೆ. ನಾನು ಅವರಿಗೆ 20 ವಷ೯ದ ಹಿಂದೆ  500 ರೂಪಾಯಿ ಕೊಟ್ಟಿದ್ದೆ ಎಂದು ಜಂಭದಿಂದ ಹೇಳಿಕೊಳ್ಳುತ್ತಾನೆ.

ಈತ ವಿಚಿತ್ರ ವ್ಯಕ್ತಿ. ಅವನ ಪ್ರಕಾರ ತಾನೊಬ್ಬನೆ ಸಾಚಾ, ಉಳಿದವರೆಲ್ಲ ಅಧಮರು. ಇನ್ನೊಬ್ಬರ ಏಳ್ಗೆಯನ್ನು ಸಹಿಸದವ. ಎಲ್ಲರ ಬಗ್ಗೆ ಚಾಡಿ ಹೇಳುವುದು ಹವ್ಯಾಸ. ಯಾರ ಕುರಿತು ಚಾಡಿಹೇಳಲು ಆಗದಿದ್ದರೆ ತನ್ನ ಕುರಿತೇ ಚಾಡಿಹೇಳುವಷ್ಟು ಚಾಡಿಕೋರ. ಇಂಟರೆಸ್ಚಿಂಗ್ ಸಂಗತಿಯೊಂದಿದೆ. ಪ್ರಕಾಶ್ ಪತ್ನಿ ಶಾಂತಾ ಸಂಕದಲ್ಲಿದ್ದರು. ಅವರಿದೆ ಚೀಫ್ ರಿಪೋರ್ಟರ್ ಆಗುವ ಅವಕಾಶ ಸೖಷ್ಟಿಯಾಗಿತ್ತು. ತನಗಿಂತ ಮೊದಲೆ ಹೆಂಡತಿ ಚೀಫ್ ರಿಪೋರ್ಟರ್ ಆಗುವುದನ್ನು ಸಹಿಸದೆ, ಹುಣಸವಾಡಿ ರಾಜನ್ ಜೊತೆ ಜಗಳ ಮಾಡಿ. ಆಕೆ ಚೀಫ್ ರಿಪೋರ್ಟರ್ ಆಗದಂತೆ ನೋಡಿಕೊಂಡ!
ಹೀಗೂ ಉಂಟಾ?
ಅಶೋಕರಾಮನ ತಂಗಿ ಮದುವೆಗೆ ಬೆಳೆಗೆರೆಯಿಂದ 8 ಲಕ್ಷ ಕೊಡಿಸಿದ್ದಾಗಿ ಇದೆ ಪ್ರಕಾಶ ಕೆಲ ಕಾಲ ಹೇಳಿಕೊಂಡು ತಿರುಗಾಡುತ್ತಿದ್ದ.
ವಿಕ ಸುದ್ದಿಯನ್ನು ಪ್ರಕಾಶನಂತಹ ಕೆಲವರು ಹೊರಗೆ ಹಾಯ್ ಸುತ್ತಿದ್ದರೆ ಸಿಇಒ ಸುನೀಲ್ ರಾಜಶೇಖರ್ ಮಾತ್ರ ಈ ರಾಘವನ್ ಅವರು ರಾಜ್ಯ ಬಜೆಟ್ ಕುರಿತು ಬರೆದ ವಿಶ್ಲೇಷಣೆ ಓದುತ್ತ, ಅರ್ಥವಾಗದೆ ಚಡಪಡಿಸಿ, ಅದರ ಕುರಿತೇ ಚಿಂತೆ ಮಾಡುತ್ತಿದ್ದಾರಂತೆ.

Thursday 17 March 2011

ನಾವು ಸುಳ್ಳು ಬರೆಯಂಗಿಲ್ಲ, ಬರೆದಿದ್ದು ಸುಳ್ಳಾಗಂಗಿಲ್ಲ!

ಹೌದು. ರಂಗ ಚಾನಲ್ ನಲ್ಲಿ ಕಾಣಿಸಿಕೊಂಡಿದ್ದಾರೆ!

ಇದರರ್ಥ ಅವರನ್ನು ಚಾನಲ್ ನಿಂದ ಕಿತ್ತುಹಾಕಿಲ್ಲ ಎಂದಲ್ಲ. ಬುಧವಾರ ಸಂಜೆ ಇಬ್ಬರು (ಸಂಜಯ ಪ್ರಭು ಹಾಗು ಇನ್ನೊಬ್ಬರು) ಕಚೇರಿಗೆ ಬಂದು ರಂಗನ ಜೊತೆ ಮಾತನಾಡಿ, ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ. ಇದಾದ ಮೇಲೆಯೇ ರಂಗನ ಮುಖದ ರಂಗು ಇಳಿದಿದ್ದು. ನಂತರ ರಂಗ ಕಚೇರಿಯಿಂದ ಹೋಗಿದ್ದರು. ಇದು 100% ಸತ್ಯ.

ಅದರ ನಂತರ ರಂಗ ಯಾರ್ಯಾರಿಗೆ ಫೋನು ತಿರುಗಿಸಿದ ಎಂಬುದು ಅವರಿಗೇ ಗೊತ್ತು. ಹೇಗೊ ಸ್ವಲ್ಪ ದಿನದ ಜೀವದಾನ ಪಡೆದಿದ್ದಾರೆ. ಇದು ತೆರೆಮರೆಯಲ್ಲಿ ನಡೆದಿದ್ದು.
"ಯಾವನೋ ಏನೋ ಬರೆದ ಅಂತ ನೀವು ನಂಬಿದಿರೇನೊ' ಎಂದು ಕೆಲವರ ಮುಂದೆ ರಂಗ ರೋಪ್ ಹಾಕಿದ್ದಾರೆ. ಅವರ ಆತ್ಮಕ್ಕೆ ನಿಜ ಗೊತ್ತು.

ಈಗ ನಾವೇನು ಹೇಳಿದರೂ ನೀವು ನಂಬುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ರಾಜೀನಾಮೆ ನೀಡಿದ್ದಾರೆ ಎಂದು ಬರೆದ ನಂತರ ಅವರು ಅದೇ ಚಾನಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಸಧ್ಯದಲ್ಲೇ ನಾವು ಬರೆದದ್ದು ನಿಜವಾಗಲಿದೆ. ಆಗ ನೀವು ಒಪ್ಪಿಕೊಳ್ಳುತ್ತೀರಿ ಎಂಬ ವಿಶ್ವಾಸವಿದೆ.

ನಮ್ಮ ಮೂಲಗಳನ್ನು ನಾವು ನಂಬುತ್ತೇವೆ. ಬರೆದಿದ್ದಕ್ಕೆ ಬದ್ಧರಾಗಿದ್ದೇವೆ.

ನಾವು ಸುಳ್ಳು ಬರೆಯಂಗಿಲ್ಲ, ಬರೆದಿದ್ದು ಸುಳ್ಳಾಗಂಗಿಲ್ಲ!

Wednesday 16 March 2011

ರಂಗ ರಾಜೀನಾಮೆ

 ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ಎಚ್. ಆರ್. ರಂಗನಾಥ ರಾಜೀನಾಮೆ ನೀಡಿದ್ದಾರೆ.
ಇದು ಈ ಕ್ಷಣದ ಬ್ರೆಕಿಂಗ್ ನ್ಯೂಸ್!
ರಂಗನಾಥ್ ಸುವರ್ಣ ಚಾನಲ್ ಬಿಟ್ಟು ಸಮಯ ಖರೀದಿಸುತ್ತಾರೆ, ಕಸ್ತೂರಿಗೆ ಹೋಗುತ್ತಾರೆ ಎಂದೆಲ್ಲ ಹರಡಿದ್ದ ಸುದ್ದಿಗಳೆಲ್ಲ ಗಾಳಿಯಲ್ಲಿ  ಲೀನವಾಗಿ ಸುವರ್ಣ ನ್ಯೂಸ್ ಚಾನಲ್ ನಿಂದ ಅವರು ಹೊರಹಾಕಿಸಿಕೊಳ್ಳುವುದರಲ್ಲಿ ಪರ್ಯಾವಸಾನವಾಗಿದೆ. ಅವರಿಗೆ    ಗುರುವಾರದಿಂದ ಕಚೇರಿಗೆ ಬರದಂತೆ ಮ್ಯಾನೆಜ್ಮೆಂಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ರಂಗ ರಾತ್ರಿ ನ್ಯೂಸ್ ನಲ್ಲಿ ಕಾಣಿಸಿಕೊಂಡಿಲ್ಲ.
ರಂಗ ಅವರ ಜೊತೆಗೆ ಅವರ ಎಷ್ಟು ಸಹೋದ್ಯೋಗಿಗಳು ಅವರನ್ನು ಹಿಂಬಾಲಿಸುತ್ತಾರೆ ಎಂಬುದು ಗೊತ್ತಾಗಿಲ್ಲ. ರಂಗ ಅವರ ಬಗ್ಗೆ ಕಳೆದ  ಕೆಲವು "ಸಮಯ"ದಿಂದ ಮ್ಯಾನೆಜ್ಮೆಂಟ್ಗೆ ಅಸಮಾಧಾನ ಇತ್ತು. ಸಮಯ ಚಾನಲ್ ಖರೀದಿಸಲು ರಂಗ ಮುಂದಾದಾಗಿನಿಂದ ಈ ಅಸಮಾದಾನ ಹೆಚ್ಚಾಗಿತ್ತು. ಆದರೆ ರಂಗ ಮಾತ್ರ ಪರದೆ ಮೇಲೆ ಮೆರೆಯುತ್ತಲೇ ಇದ್ದರು.
ಈಗ ಅದಕ್ಕೆಲ್ಲ ಬ್ರೇಕ್ ಬಿದ್ದಿದೆ.