Tuesday 27 December 2011

ಮಾಧ್ಯಮ ಅಕಾಡೆಮಿಯಿಂದ ಗೇಟ್ ಪಾಸ್ !

ಮಾಧ್ಯಮ ಅಕಾಡೆಮಿಯಿಂದ ಪೊನ್ನಪ್ಪ ಹಾಗೂ ಇತರ ಪದಾಧಿಕಾರಿಗಳಿಗೆ ಸರಕಾರ ಒಂದೇ ವಾರದಲ್ಲಿ ಗೇಟ್ ಪಾಸ್ ನೀಡಿದೆ!
ಅಕಾಡೆಮಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ನೇಮಕದಲ್ಲಿ 'ಜಗದೀಶ್'ರ ಮಹಾತ್ಮೆ ಅರಿತ ಸರಕಾರ ತನ್ನ ತಪ್ಪಿನ ಅರಿವಾಗಿ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಮಹತ್ವವಾದ ನಿರ್ಣಯ ಮಾಡಿದೆ.
ಹೀಗಾಗಿ ಪೊನ್ನಪ್ಪ ಎಷ್ಟು ಧಾವಂತದಲ್ಲಿ ಅಧಿಕಾರ ಸ್ವೀಕರಿಸಿದರೋ ಅದೇ ಸ್ಪೀಡಿನಲ್ಲಿ ರಿವರ್ಸ್ ಗೆರ್ನಲ್ಲಿ ಪ್ರೆಸ್ ಕ್ಲಬ್ ಹೋಗಿ, ಎಂಜಿ ರೋಡ್ ಕಡೆ ಹೋಗಿದ್ದಾರೆ. ಪೊನ್ನಪ್ಪ ಅಧಕ್ಷಗಿರಿ ಹೋಗಲು ಮುಖ್ಯವಾಗಿ ಎರಡು ಕಾರಣವೆಂದು ಮೂಲಗಳು ತಿಳಿಸಿವೆ.
ಪೊನ್ನಪ್ಪ ಪ್ರೆಸ್ ಕ್ಲಬ್ ಅಧ್ಯಕ್ಷರು ಆಗಿರುವುದು ಮುಖ್ಯಮಂತ್ರಿಯ ಗಮನಕ್ಕೆ ಬಂದಿದೆ. ಒಬ್ಬರಿಗೆ ಎರಡು ಹುದ್ದೆ ಬೇಡ ಎಂದು ನಿರ್ಧರಿಸಿದರಂತೆ. ಮತ್ತೊಂದೆಡೆ ಪೊನ್ನಪ್ಪ ಅವರನ್ನು ಕುರ್ಚಿಲಿ ಕೂರಿಸಲು ಆರ್.ಪಿ.ಜಗದೀಶ್ ಪ್ರಯತ್ನಿಸಿರುವುದು ಗಮನಕ್ಕೆ ಬಂದಿದೆ. ಇದರಿಂದೆ ಮುಂದೆ ತಮ್ಮ ಮೇಲೆ ಮಾಧ್ಯಮ ಮಿತ್ರರು ಮುನಿಸಿಕೊಂಡಾರು ಎಂಬ ಜಾಣತನವನ್ನು ಸದಾನಂದ ಗೌಡರು ತೋರಿಸಿದ್ದಾರೆ. ಇದರಿಂದ ಅಕಾಡೆಮಿಯಿಂದ ಪೋ ಎಂದು ಸಂದೇಶ ನೀಡಲಾಗಿದೆ.
ಪದಾಧಿಕಾರಿಗಳ ನೇಮಕವನ್ನು ರದ್ದು ಮಾಡಲು ಕಾರಣ ಸದಸ್ಯರ ಆಯ್ಕೆಯಲ್ಲಿನ ಗೊಂದಲ ಎಂದು ತಿಳಿದುಬಂದಿದೆ. ಹಿರಿಯ ವರದಿಗಾರ ಶೃಂಗೇಶ್ ಅವರಿಗೆ ನಕ್ಸಲೈಟ್ ಜೊತೆ ಸಂಬಂಧ ಇದೆ ಎನ್ನುವುದೇ ಹಿನ್ನಡೆ ಆಗಿದೆ. ಇನ್ನು ಗಂಗಾಧರ್ ಮೂದಲಿಯಾರ್ ಮತ್ತೊಮ್ಮೆ ಸದಸ್ಯರಾಗಿದ್ದು ಸರಕಾರದ ಗಮನಕ್ಕೆ ಬಂದಿದೆ. ಶಿವರಾಜ್ ತಂಗಡುರ್ ಅಕ್ರಡಿಶನ್ ಸಮಿತಿಯ ಸದಸ್ಯರಾಗಿದ್ದು ಮತ್ತೆ ಅಕಾಡೆಮಿ ಪದಾಧಿಕಾರಿಯಾಗಿದ್ದು ಸರಕಾರದ ಕೆಂಗಣ್ಣಿಗೆ ಗುರಿಯಾಗಿದೆ.
ಇವೆಲ್ಲ ಕಾರಣಗಳಿಂದ ಯಾವುದೇ ಗೊಂದಲವಿಲ್ಲದಂತೆ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲು ಸರಕಾರ ನಿಶ್ಚಯಿಸಿದೆ.

No comments: