Friday 20 May 2011

ಉದಯವಾಣಿ ಹೊಸತನದಲ್ಲಿ ನಕಲಿನ ಘಮಲು

ಸಣ್ಣ ಗಿಡವನ್ನು ಪ್ರತಿದಿನ ಮುಖಪುಟದಲ್ಲಿ ಕಾಣುತ್ತಿತ್ತು. ಒಂದು ದಿನ ಬೆಳಿಗ್ಗೆ ಆ ಗಿಡ ಸಡನ್ ದೊಡ್ಡದಾಗಿತ್ತು. ಅದೊಂದನ್ನು ಬಿಟ್ಟರೆ ಉಳಿದಂತೆ ಉದಯವಾಣಿ ಬದಲಾವಣೆಯಲ್ಲಿ ಕಂಡಿದ್ದು ಕೇವಲ ನಕಲು ಮಾತ್ರ.

ಮುಖಪುಟದಲ್ಲಿ ಗ್ರೂಪ್ ಎಡಿಟರ್ ರವಿ ಹೆಗ್ಡೆ ಬರೆದ ನೋಟ್  ತುಂಬಾ ಆರ್ಡಿನರಿಯಾಗಿತ್ತು. ರವಿ ಹೆಗ್ಡೆಯವರಿಂದ ನಾವಿದನ್ನು ನಿರೀಕ್ಷಿಸಿರಲಿಲ್ಲ.

ಪುಟಕ್ಕೊಂದು ಪಂಚ್, ನಂಬರ್ ಪ್ಲೇಟ್ಗಳೆಲ್ಲ ಮೊದಲು ವಿಕದಲ್ಲಿ ಮಾಡಿದ ಪ್ರಯೋಗಗಳೇ. ಹೊಸ ಹೆಸರು, ಹೊಸ ಡಿಸೈನ್. ಅದರಲ್ಲೂ ದಂ ಇಲ್ಲ. ಓದುಗರನ್ನು ಕಣ್ಸೆಳೆಯಲು ವಿಫಲ. ಕಪ್ರದಲ್ಲಿ ಅಡ್ವಾಣಿ ಅವರ ಅಂಕಣ ಪ್ರಕಟವಾಗುತ್ತಿದ್ದಂತೆ, ಉದಯವಾಣಿಯಲ್ಲೂ ಅವರ ಲೇಖನ ಪ್ರಕಟಿಸಿದರು. ಬುಲೆಟ್ ಸಂದರ್ಶನ ಮಾದರಿಯಲ್ಲಿ ನೇರಾ ನೇರ. ಇದನ್ನೆಲ್ಲಾ ನೋಡಿದ ಮೇಲೆ ಉದಯವಾಣಿಯ ಹೊಸತು ಅಂದರೆ ಬೇರೆ ಪತ್ರಿಕೆಯಿಂದ ನಕಲು ಮಾಡಿದ್ದು ಎಂದು. ಆದರು ಕಾಡು ನೋಡೋಣ ಎಂದುಕೊಂಡಿದ್ದೆವು.

ಇಂದಿನ ಮುಖಪುಟದಲ್ಲಿ ಟ್ವೀಟರ್ ಜಾಹಿರಾತು ನೋಡಿದ ಮೇಲೆ ಖಾತ್ರಿಯಾಯಿತು, ಉದಯವಾಣಿಯ ಗಿಡ ಇನ್ಯಾರೋ ಬಿತ್ತಿದ ಬೀಜ ಎಂದು. ಕನ್ನಡದಲ್ಲಿ ಮೊದಲಬಾರಿಗೆ ಟ್ವಿಭಾಷಿತ ಹೆಸರಲ್ಲಿ ಟ್ವೀಟರ್ ಬಳಸಿದ್ದು ವಿ. ಭಟ್ಟರು, ಅವರ ವೆಬ್ ಸೈಟಿನಲ್ಲಿ. ಅದರನಂತರ ಕನ್ನಡಪ್ರಭ. ಟ್ವಿಭಾಷಿತ ಕಪ್ರದ ಎಡಿಟೋರಿಯಲ್ ಪೇಜ್ ಗೆ ವರ್ಗಾವಣೆಗೊಂಡಿತು.

ರವಿ ಹೆಗ್ಡೆ ಮತ್ತು ತಂಡದವರು ಇದನ್ನೇ ನಕಲು ಮಾಡಿದ್ದಾರೆ. ಆದರೆ ಮಾದರಿ ಬೇರೆ. ವಿ.ಭಟ್ಟರು ಒಳ್ಳೆ ಟ್ವೀಟರ್ ಆಯ್ಕೆ ಮಾಡಿ ಪ್ರಕಟಿಸಿದರೆ, ಉದಯವಾಣಿಯವರು ಒಂದು ವಿಷಯಕ್ಕೆ ಸಂಬಂಧಿಸಿದಂತೆ ಹಲವರ ಟ್ವೀಟ್ ಪ್ರಕಟಿಸಿದ್ದಾರೆ.

ರವಿ ಹೆಗ್ಡೆ ಮತ್ತು ತಂಡದವರು ಸುವರ್ಣ ಚಾನಲ್ ನಲ್ಲಿ ಇದ್ದಾಗಲೂ ಟಿವಿ ೯ ಕಾರ್ಯಕ್ರಮಗಳನ್ನು ನಕಲು ಮಾಡಿದ್ದೆ ಸಾಧನೆ. ಒಂದು ಹೊಸ ಅಥವಾ ಒರಿಜಿನಲ್ ಕಾರ್ಯಕ್ರಮ ಮಾಡಿದ್ದು ಗೊತ್ತಿಲ್ಲ.

ಕಪ್ರದವರು ಏನೇನ್ ಮಾಡ್ತೀವಿ ನೋಡ್ತಾ ಇರಿ ಅನ್ನುತ್ತಾರೆ. ಬಹುಶ ಉದಯವಾಣಿಯವರು ಏನೇನ್ ಕಳವು ಮಾಡ್ತೀವಿ ನೋಡ್ತಾ ಇರಿ ಎಂದು ಅನ್ನಬಹುದೇನೋ!

Sunday 8 May 2011

ಕುಮಾರನಾಥ ಆದ ಅನಾಥ!

ಕೆಲವು ದಿನಗಳ ಹಿಂದೆ ಸಾಯಿಬಾಬ ಮೃತರಾದ ನಂತರ ಕಪ್ರ, ಉದಯವಾಣಿಯಲ್ಲಿ ಸತ್ಯಜಿತ್ ಬಗ್ಗೆ ವರದಿ ಪ್ರಕಟವಾಗಿತ್ತು. ಮರುದಿನ ಈ ಕುಮಾರನಾಥ "ಸತ್ಯಜಿತ್ ಅನಾಥ, ಭೂಗತ" ಎಂದೆಲ್ಲ ವರದಿ ಬರೆದಿದ್ದ.

ಇಂದು ಬಂದಿರುವ ಸುದ್ದಿಯಂತೆ ಈಗ ಕುಮಾರನಾಥನೆ ಅನಾಥನಾಗಿದ್ದಾನೆ!

ಮೈಸೂರು ಬ್ಯೂರೋ ಮುಖ್ಯಸ್ಥರಾಗಿದ್ದ ಅರವಿಂದ ನಾವಡ ಮಂಗಳೂರಿಗೆ ಮುಖ್ಯ ವರದಿಗಾರರಾಗಿ ಹೋಗುತ್ತಾರೆಂಬುದು ಹಳೆ ಸುದ್ದಿ. ಹೊಸ ಸುದ್ದಿ ಏನೆಂದರೆ ಅರವಿಂದ ನಾವಡ ಅವರಿಗೆ ಬ್ಯೂರೋ ಮುಖ್ಯಸ್ಥ ಎಂದು ಡೇಸಿಗ್ನೇಶನ್ ಕೊಡಲಾಗಿದೆ. ಇದು ಕುಮಾರನಾಥನನ್ನು ಹೊರಹಾಕುವ ಸ್ಪಷ್ಟ ಸೂಚನೆ. ಇದು ಅರ್ಥವಾಗದಿದ್ದರೆ ಕುಮಾರನಾಥನಷ್ಟು ಮೂರ್ಖ ಇನ್ನೊಬ್ಬನಿಲ್ಲ.

೯ ರಂದು ಮಂಗಳೂರಿಗೆ ವಿಜಯ್ ಕರ್ನಾಟಕ  ಸಂಪಾದಕ ರಾಘವನ್ ಭೇಟಿ ನೀಡಲಿದ್ದಾರೆ. ಅರವಿಂದ ನಾವಡ ಪಟ್ಟಾಭಿಷೇಕ ಅವರ ಭೇಟಿಯ ಮುಖ್ಯ ಉದ್ದೇಶ. ೧೦ ರಂದು ವರದಿಗಾರರ ಸಭೆ ಇದೆ. ಅಲ್ಲಿ ಅರವಿಂದ ನಾವಡ ಮತ್ತು ಕುಮಾರನಾಥ ಯಾವ ಯಾವ ಕೆಲಸ ಮಾಡಲಿದ್ದಾರೆ ಎಂಬುದನ್ನು ವಿವರಿಸಲಿದ್ದಾರೆ.

ಅಲ್ಲಿಗೆ ಯು.ಕೆ.ಕುಮಾರನಾಥ ರೆಸಿಡೆಂಟ್  ಎಡಿಟರ್. ಅಂದರೆ ಮನಯಲ್ಲೇ ಉಳಿಯುವ ಸಂಪಾದಕ

Thursday 5 May 2011

ಗೋಡ್ಕಿಂಡಿ ಕೊಳಲು ನಾದಕ್ಕೆ ಮೇಯರ್ ನನ್ನು ಕುಣಿಸಿದ ರವಿ


ಕೆಂಪೇಗೌಡ ಪ್ರಶಸ್ತಿಯನ್ನು ಕರೆಕರೆದು ೨೭೦ ಜನರಿಗೆ ನೀಡಿದ್ದು ನಿಮಗೆ ಗೊತ್ತಿರಬಹುದು. ಅದರ ವಿಷಯ ನಾವು ಬರೆದು ಪ್ರಯೋಜನವಿಲ್ಲ. ಪತ್ರಿಕೆಗಳು ಆ ಕೆಲಸ ಮಾಡಿವೆ. ಕೆಂಪೇಗೌಡ ಪ್ರಶಸ್ತಿ ಪಡೆದವರಲ್ಲಿ ಕಪ್ಪು ಸುಂದರಿಯ ಜೊತೆ ಇರುತ್ತ ಕಂಡ ಕಂಡ ಹುಡುಗಿಯರಿಗೂ 'ಹಾಯ್' ಹಾಕುವ ರವಿ ಬೆಳೆಗೆರೆ ಮತ್ತು ಪ್ರಸಿದ್ಧ ಕೊಳಲುವಾದಕ ಪ್ರವೀಣ ಗೋಡ್ಕಿಂಡಿ ಕೂಡ ಇದ್ದರು.

ಇಬ್ಬರು ಪ್ರಶಸ್ತಿ ಗಳಿಸಿದ್ದು ಹೇಗೆ ಗೊತ್ತೇ?

ಪ್ರವೀಣ ಗೋಡ್ಕಿಂಡಿ ಅವರ ಪತ್ನಿ ಸಾರಿಕಾ ಗೋಡ್ಕಿಂಡಿ. ಸಾರಿಕಾ ಅವರ ತಂಗಿಯ ಗಂಡ ಸುಬ್ರಹ್ಮಣ್ಯ ಎಂಬವರು ಮೇಯರ್ ಜೊತೆಯೇ ಇರುತ್ತಾರೆ. ಒಂದರ್ಥದಲ್ಲಿ ಅತ್ಯಂತ ಆಪ್ತರು. ಇವರ ಮೂಲಕ ಪ್ರವೀಣ ಗೋಡ್ಕಿಂಡಿ ಮತ್ತು ರವಿ ಬೆಳೆಗೆರೆ ಪ್ರಸಸ್ತಿ ಗಿಟ್ಟಿಸಿದ್ದಾರೆ. ಪ್ರವೀಣ ಗೋಡ್ಕಿಂಡಿ ಇದಕ್ಕೆ ಅರ್ಹರೆ. ಆದರೆ ರವಿ ಬೆಳೆಗೆರೆಗೆ ಹೀಗೆ ಯಾರನ್ನಾದರು ದುಂಬಾಲು ಬಿದ್ದು ಪ್ರಸಸ್ತಿ ಗಿಟ್ಟಿಸುವ ಗೀಳು.

ಪ್ರಶಸ್ತಿ ಪ್ರಧಾನ ಸಮಾರಂಭದ ದಿನ ಪ್ರವೀಣ ಗೋಡ್ಕಿಂಡಿ ಬರಲಿಲ್ಲ. ಅದಕ್ಕೂ ಸುಬ್ರಹ್ಮಣ್ಯ ಅವರು ಪ್ರಭಾವ ಬೀರಿ ಮೇಯರ್ ಕಚೇರಿಯಲ್ಲಿ ಪ್ರವೀಣ ಗೋಡ್ಕಿಂಡಿಗೆ ಪ್ರಶಸ್ತಿ ಕೊಡಿಸುವ ವ್ಯವಸ್ಥೆ ಮಾಡಿದರು. ಮಧ್ಯಾಹ್ನ ೩.೩೦ಕ್ಕೆ ಮೇಯರ್ ಚೇಂಬರ್ ನಲ್ಲಿ ಪ್ರಶಸ್ತಿ ಕೊಡುವುದು ನಿಗದಿಯಾಗಿತ್ತು. ಸುಬ್ರಹ್ಮಣ್ಯ ಅವರು ಕೆಲವು ಕಾರ್ಪೊರೇಟರ್ ಗಳಿಗೂ ಬರಲು ಹೇಳಿದ್ದರು. ಎಲ್ಲರು ಬಂದು ಕಾಯುತ್ತಿದ್ದರೆ ಪ್ರವೀಣ ಗೋಡ್ಕಿಂಡಿ ಸುಳಿವಿಲ್ಲ. ಕೊಂಚ ಹೊತ್ತಿನಲ್ಲಿ ದೂರವಾಣಿ ಕರೆ ಮಾಡಿದ ಪ್ರವೀಣ ಗೋಡ್ಕಿಂಡಿ "ತನ್ನ ಮನೆಗೆ ರವಿ ಬೆಳೆಗೆರೆ ಮಧ್ಯಾಹ್ನದ ಊಟಕ್ಕೆ ಬಂದಿದ್ದರು. ಅವರು ಇನ್ನು ನನ್ನ ಮನೆಯಲ್ಲೇ ಇದ್ದಾರೆ. ಆದ್ದರಿಂದ ಬರುವುದು ವಿಳಂಬವಾಗುತ್ತಿದೆ. ಕಾರ್ಯಕ್ರಮವನ್ನು ೧-೨ ಗಂಟೆ ಮುಂದೂಡಿ" ಎಂದರು.

ಇದು ಕಾದು ಕುಳಿತಿದ್ದ ಮೇಯರ್ ಹಾಗು ಪ್ರಸಸ್ತಿ ಕೊಡಿಸಿದ ಸುಬ್ರಹ್ಮಣ್ಯ ಹಾಗು ಇತರರಿಗೆ ಕೋಪ ತರಿಸಿತ್ತು. ದೂರವಾಣಿಯಲ್ಲಿ ಪ್ರವೀಣ ಗೋಡ್ಕಿಂಡಿ ಆಡಿದ ಮಾತು ರವಿ ಬೆಳೆಗೆರೆ ಕಿವಿಗೆ ಬಿಟ್ಟು. ಅರೆ ನೀವೇನ್ರಿ ಅಲ್ಲಿಗೆ ಹೋಗೋದು. ಅವರನ್ನೇ ಇಲ್ಲಿಗೆ ಕರೆಸೋಣ. ಅವರಿಗೇನು ಸರಕಾರೀ ಕಾರಿದೆ. ಬರ್ತಾರೆ. ಬರಲ್ಲ ಅಂದ್ರೆ ಕರೆಸೋಣ. ನಾನಿಲ್ವೆ ಎಂದ ರವಿ ಬೆಳೆಗೆರೆ ಮೊಬೈಲ್ ಕೈಗೆತ್ತಿಕೊಂಡರು.

ಆಗ ಬಂತು ನೋಡಿ ಮೇಯರ್ ಗೆ ಬೆಳೆಗೆರೆ ಫೋನು!
"ಏನ್ರೀ ಪ್ರವೀಣ ಗೋಡ್ಕಿಂಡಿ ಯಾರು ಗೊತ್ತ? ಅವರು ಅಂತರಾಷ್ಟ್ರೀಯ ಕಲಾವಿದರು. ಅವರು ನಿಮ್ಮ ಚೇಂಬರ್ ಗೆ ಬಂದು ಪ್ರಶಸ್ತಿ ತಗೋಬೇಕ? ನೀವೇ ಅವರ ಮನೆಗೆ ಹೋಗಿ ಪ್ರಶಸ್ತಿ ಕೊಡಬೇಕು. ನಾನು ಅಲ್ಲೇ ಇದ್ದೀನಿ ಮನೆಗೆ ಬಂದು ಬಿಡಿ" ಎಂದು ಧಮಕಿ ಹಾಕಿದ್ದಾರೆ.
ಮೇಯರ್ ಹಾಗು ಸಂಗಡಿಗರಿಗೆ ಮೈಯ್ಯೆಲ್ಲ ಉರಿದುಹೋಗಿದೆ. ಅಲ್ಲೇ ಬೈದುಕೊಂಡಿದ್ದಾರೆ. ಮಹಾನ್ ಪತ್ರಕರ್ತನಿಗೆ ಛೀ ಥೂ ಎಂದು ಉಗಿದುಕೊಂಡಿದ್ದಾರೆ. ಸುಬ್ರಹ್ಮಣ್ಯ ಅವರಿಗೂ ಯಾಕಾದರೂ ಪ್ರಶಸ್ತಿ ಕೊಡಿಸಿದೇನೋ ಅನ್ನಿಸಿದೆ. ಆದರೆ ಬೇರೆ ಮಾರ್ಗ ಕಾಣದೆ ಪ್ರವೀಣ ಗೋಡ್ಕಿಂಡಿ ಮನೆಗೆ ಹೋಗಿ ಪ್ರಶಸ್ತಿ ಕೊಟ್ಟು ಬಂದಿದ್ದಾರೆ.

ಕೆಂಪೇಗೌಡ ಪ್ರಶಸ್ತಿ ಪಡೆದ ಹಲವರು ಪ್ರಶಸ್ತಿ ಪಡೆಯಲು ಸಮಾರಂಭಕ್ಕೆ ಬಂದಿಲ್ಲ. ಅವರಲ್ಲಿ ಎಷ್ಟು ಜನರ ಮನೆಗೆ ಮೇಯರ್ ಹೋಗಿ ಪ್ರಶಸ್ತಿ ನೀಡಿದ್ದಾರೆ? ಪ್ರವೀಣ ಗೋಡ್ಕಿಂಡಿ ಅಂತರಾಷ್ಟ್ರೀಯ ಕಲಾವಿದರೇ ಇರಬಹುದು ಆದರೆ ಮೇಯರ್ ಬೆಂಗಳೂರಿನ ಪ್ರಥಮ ಪ್ರಜೆ. ಇದನ್ನು ರವಿ ಬೆಳೆಗೆರೆ ಮರೆಯಬಾರದಿತ್ತು.

ಏನೋ ಸಮಾಜಕ್ಕೆ ಕೆಲಸ ಮಾಡುವವರು ಪತ್ರಕರ್ತರಿಗೆ ಜನ ಗೌರವ ಕೊಡುತ್ತಾರೆ. ಅವರು ಕೊಡುವ ಗೌರವವನ್ನು ಈ ರೀತಿ ದುರ್ಬಳಕೆ ಮಾಡುವುದು ಎಷ್ಟು ಸರಿ? ಇಂತಹ ಸಾಮಾನ್ಯ ಜ್ಞಾನವು ರವಿ ಬೆಳೆಗೆರೆಯಂತಹ ನುರಿತ ಮತ್ತು ನೆರೆತ ಪತ್ರಕರ್ತರಿಗೆ ಇಲ್ಲದಿದ್ದರೆ ಹೇಗೆ?

ಇಂತಹ ಚಿಕ್ಕ ಚಿಕ್ಕ ವಿಷಯಕ್ಕೆಲ್ಲ ಪತ್ರಕರ್ತರು ಪ್ರಭಾವ ಬೀರುತ್ತಾರಾ? ಛೀ ಛೀ!
ನಾಚಿಕೆಯಾಗಬೇಕು! ಕೆಲವರಿಗೆ ಅದು ಇರುವುದಿಲ್ಲ!

Tuesday 3 May 2011

ವಿಕದಲ್ಲಿ ಬ್ಯೂರೋ ಮುಖ್ಯಸ್ಥರ ವರ್ಗ

ವಿಕದ ಮೈಸೂರು ಬ್ಯೂರೋ ಮುಖ್ಯಸ್ಥರಾಗಿದ್ದ ಅರವಿಂದ ನಾವಡ ಮಂಗಳೂರಿಗೆ ಹೊರಟಿದ್ದಾರೆ. ಅವರಲ್ಲಿ ಮುಖ್ಯವರದಿಗಾರರಂತೆ.  ಬ್ಯೂರೋ ಮುಖ್ಯಸ್ಥರಾಗಿದ್ದವರು ಮಂಗಳೂರಿಗೆ ಹೋಗಿ ಮುಖ್ಯವರದಿಗಾರರಾಗುವುದು ಡಿಮೋಶನ್ ಹೊಂದಿದಂತೆ. ಆದರೆ ಕುಮಾರನಾಥನನ್ನು ಓಡಿಸುವ ಮೊದಲ ಹಂತವಾಗಿ ನಾವಡರನ್ನು ಮಂಗಳೂರಿಗೆ ಕಳುಹಿಸಲಾಗುತ್ತಿದೆ ಎಂಬ ಸುದ್ದಿ ಇದೆ. ನಾವಡರಿಗೂ ಬ್ಯೂರೋ ಮುಖ್ಯಸ್ಥರಾಗಬೇಕೆಂಬ ಆಸ ಇದ್ದೆ ಇರುತ್ತದೆ.

ಅರವಿಂದ ನಾವಡ ಇನ್ನು ಕೆಲವು ದಿನದಲ್ಲಿ ಮಂಗಳೂರಿನಲ್ಲಿ ಕೆಲಸಕ್ಕೆ ಹಾಜರಾಗಲಿದ್ದಾರೆ. ಅವರು ಹಾಜರಾಗುವ ದಿನ ಸಂಪಾದಕ ರಾಘವನ್ ಮಂಗಳೂರಿಗೆ ಹೋಗುತ್ತಾರಂತೆ. ಇದರರ್ಥ ಅವರು ಅಲ್ಲಿ ನಾವಡರು ಮಾಡಬೇಕಾದ ಕೆಲಸಂ ಕುಮಾರನಾಥನ ಕಾರ್ಯ ವ್ಯಾಪ್ತಿಯನ್ನು ಸರಿಯಾಗಿ ಡಿವೈಡ್ ಮಾಡುತ್ತಾರೆ.

ಕುಮಾರನಾಥ ತನಗೆ ಕಾಂಪಿಟೇಶನ್ ನೀಡುತ್ತಾರೆ ಅನ್ನಿಸಿದ ಎಲ್ಲರಿಗು ಕಿರಿಕಿರಿ ನೀಡಿದ್ದಾನೆ. ಹೀಗಿರುವಾಗ ನಾವಡರನ್ನು ಸುಮ್ಮನೆ ಬಿಡುವವನಲ್ಲ. ಒಂದಷ್ಟು ದಿನ ಮಂಗಳೂರು ವಿಕದಲ್ಲಿ ಘರ್ಷಣೆಗಳನ್ನು ನೋಡಬಹುದು. ಇದರಲ್ಲಿ ಯಾರು ಉಳಿಯುತ್ತಾರೆ, ಯಾರು ಉಡೀಸ್ ಆಗುತ್ತಾರೆ ಎಂಬುದು ಕುತೂಹಲದ ಪ್ರಶ್ನೆ. ಕಾದುನೋಡೋಣ.

ಅರವಿಂದ ನಾವಡರ ಜಾಗಕ್ಕೆ ಚಿತ್ರದುರ್ಗ ಬ್ಯೂರೋ ಮುಖ್ಯಸ್ಥರಾಗಿದ್ದ ದ.ಕೊ. ಹಳ್ಳಿ ಚಂದ್ರಶೇಖರ್ ಅವರನ್ನು ವರ್ಗಾಯಿಸಲಾಗಿದೆ. ಹಾಸನ ಬ್ಯೂರೋ ಮುಖ್ಯಸ್ಥರಾಗಿದ್ದ ರಾಕೇಶ್ ಪೂಂಜಾ ಅವರನ್ನು ಚಿತ್ರದುರ್ಗಕ್ಕೆ ಕಳುಹಿಸಲಾಗಿದೆ. ಹಾಸನಕ್ಕೆ ಯಾರನ್ನು ನೇಮಿಸಲಾಗಿಲ್ಲ.

ಸಂಪಾದಕ ರಾಘವನ್ ಅವರು ಕರಿಸ್ವಾಮಿ ಕಿರಿಕ್ ಪಾರ್ಟಿ ಎಂಬ ಕಾರಣಕ್ಕೆ  ಅವರನ್ನೇ ಹಾಸನಕ್ಕೆ ಕಳುಹಿಸಬಹುದು ಎಂಬುದು ವಿಕ ಪತ್ರಕರ್ತರ ಅನುಮಾನ.