Thursday 17 March 2011

ನಾವು ಸುಳ್ಳು ಬರೆಯಂಗಿಲ್ಲ, ಬರೆದಿದ್ದು ಸುಳ್ಳಾಗಂಗಿಲ್ಲ!

ಹೌದು. ರಂಗ ಚಾನಲ್ ನಲ್ಲಿ ಕಾಣಿಸಿಕೊಂಡಿದ್ದಾರೆ!

ಇದರರ್ಥ ಅವರನ್ನು ಚಾನಲ್ ನಿಂದ ಕಿತ್ತುಹಾಕಿಲ್ಲ ಎಂದಲ್ಲ. ಬುಧವಾರ ಸಂಜೆ ಇಬ್ಬರು (ಸಂಜಯ ಪ್ರಭು ಹಾಗು ಇನ್ನೊಬ್ಬರು) ಕಚೇರಿಗೆ ಬಂದು ರಂಗನ ಜೊತೆ ಮಾತನಾಡಿ, ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ. ಇದಾದ ಮೇಲೆಯೇ ರಂಗನ ಮುಖದ ರಂಗು ಇಳಿದಿದ್ದು. ನಂತರ ರಂಗ ಕಚೇರಿಯಿಂದ ಹೋಗಿದ್ದರು. ಇದು 100% ಸತ್ಯ.

ಅದರ ನಂತರ ರಂಗ ಯಾರ್ಯಾರಿಗೆ ಫೋನು ತಿರುಗಿಸಿದ ಎಂಬುದು ಅವರಿಗೇ ಗೊತ್ತು. ಹೇಗೊ ಸ್ವಲ್ಪ ದಿನದ ಜೀವದಾನ ಪಡೆದಿದ್ದಾರೆ. ಇದು ತೆರೆಮರೆಯಲ್ಲಿ ನಡೆದಿದ್ದು.
"ಯಾವನೋ ಏನೋ ಬರೆದ ಅಂತ ನೀವು ನಂಬಿದಿರೇನೊ' ಎಂದು ಕೆಲವರ ಮುಂದೆ ರಂಗ ರೋಪ್ ಹಾಕಿದ್ದಾರೆ. ಅವರ ಆತ್ಮಕ್ಕೆ ನಿಜ ಗೊತ್ತು.

ಈಗ ನಾವೇನು ಹೇಳಿದರೂ ನೀವು ನಂಬುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ರಾಜೀನಾಮೆ ನೀಡಿದ್ದಾರೆ ಎಂದು ಬರೆದ ನಂತರ ಅವರು ಅದೇ ಚಾನಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಸಧ್ಯದಲ್ಲೇ ನಾವು ಬರೆದದ್ದು ನಿಜವಾಗಲಿದೆ. ಆಗ ನೀವು ಒಪ್ಪಿಕೊಳ್ಳುತ್ತೀರಿ ಎಂಬ ವಿಶ್ವಾಸವಿದೆ.

ನಮ್ಮ ಮೂಲಗಳನ್ನು ನಾವು ನಂಬುತ್ತೇವೆ. ಬರೆದಿದ್ದಕ್ಕೆ ಬದ್ಧರಾಗಿದ್ದೇವೆ.

ನಾವು ಸುಳ್ಳು ಬರೆಯಂಗಿಲ್ಲ, ಬರೆದಿದ್ದು ಸುಳ್ಳಾಗಂಗಿಲ್ಲ!

9 comments:

Anonymous said...

ಮಾಧ್ಯಮದವರಿಗೆ ಮಾಧ್ಯಮದವರಿಂದಲೇ ಮದ್ದು ..ಚೆನ್ನಾಗಿದೆ .. ಸುಳ್ಳನ್ನು ಸತ್ಯ ಅನ್ನೋ ರೀತಿ ಕೆಲವೊಮ್ಮೆ ಮಾತಾಡೋ ಜನರಿಗೆ ಇದ್ರಿಂದ ಏನರ ಬುದ್ದಿ ಬರಲಿ ..

gopi said...

ರೀ ಸ್ವಾಮೀ ರಂಗನಾಥ್ ರಾಜೀನಾಮೆ ಕೊಡಲಿ ಅಥವಾ ಬಿಡಲಿ ಅದರಿಂದ ನಿಮಗೇನ್ರೀ ಲಾಭ???/ ಬರೆಯುವ ಸಾವಿರಾರು ವಿಚಾರ ಬಿಟ್ಟು ಇಂತಹ silly,silly ವಿಚಾರ ಬರ್ಕೊಂಡು ಪ್ರಚಾರ ಪಡೆಯುತ್ತಿದ್ದೀರಿ.silly ವಿಚಾರ ಬಿಟ್ಟು ಏನಾದ್ರು ಬೇರೆ ಬರಿರಿ...

ಚಿನ್ನಸ್ವಾಮಿವಡ್ಡಗೆರೆ said...

media mana emba nivu yava Rajakaranigintha kammiilla swamy.gassipu,vadanthi bagge mathanaduv mana media mana alla, `Athruptha mana" alva

-ಹಾಲ said...

ಎಚ್ಚರ ಇರುವ ಪ್ರಾಧ್ಯಾಪಕರಿಗೆ ನಮಸ್ಕಾರ್...
ನಿನ್ನೆ ನನ್ನ ಕಾಮೆಂಟ್ ಗೆ...
ನನಗೆ ಎಚ್ಚರ ಇದೆ. ಪಾಠ ಮಾಡುವ ಬಗ್ಗೆ ನೀವು ಪಾಠ ಮಾಡಬೇಡಿ. ಎಚ್ಚಜ ನಿಮಗೂ ಇರಲಿ. ನಾನು ಬರೆದಿದ್ದು ಸತ್ಯವಾ? ನೀವು ರಂಗನಾಥರಿಂದ ತಿಳಿದುಕೊಂಡಿದ್ದು ಸತ್ಯವಾ ನೋಡೇಬಿಡೋಣ...
ಅಂದಿದ್ರಿ... ಬಹುಶಃ ಇನ್ನೂ ಎಷ್ಟುದಿನ ಈ ‘ನೋಡೇಬಿಡೋಣಾ’
ಸಧ್ಯದಲ್ಲೇ ನಾವು ಬರೆದದ್ದು ನಿಜವಾಗಲಿದೆ ಎಂದಿದ್ದೀರಿ... ಇದೂ ಕೂಡಾ ಅಷ್ಟೆ.. ‘ಸಧ್ಯ’ ಅಂದರೆ, ಒಂದು ವಾರ, ಒಂದು ತಿಂಗಳು, ಒಂದು ವರ್ಷ... ಪ್ರಾಧ್ಯಾಪಕರಿಗೆ ಬರೆಯುವಾಗ ಎಚ್ಚರ ಇರಬೇಕು ಅಂತಾ ಹೇಳಿದ್ದು, ಇದೇ ಕಾರಣಕ್ಕೆ....
ನಾನು ಹೇಳ ಹೊರಟಿದ್ದು.... ಉಗಮ ಶ್ರೀನಿವಾಸ ಅವರ ಹೆಸರಿನಲ್ಲಿ ಕಾಮೆಂಟ್ ಪ್ರಕಟ ಆಗಿದೆ. ಅದು ಅವರು ಬರೆದದ್ದಲ್ಲ.. ಯಾರದ್ದೋ ಹೆಸರಿನಲ್ಲಿ ನೀವು ಕಾಮೆಂಟ್ ಹಾಕೊಳ್ಳುವ ಅಗತ್ಯವಿತ್ತಾ.. ಅವರು... ಇದರಿಂದ ನೆಮ್ಮದಿ ಹಾಳಾಗಿದೆ... ನನ್ನ ಹೆಸರಿನ ಕಾಮೆಂಟ್ ತೆಗಿರೀ ಅಂದ್ರೂ ನೀವಲ್ಲ ಬೇರೆ ಉಗಮ ಅಂದಿದ್ದೀರಿ... ಈ ಬೇರೆ ಉಗಮ ಎಲ್ಲಿಂದು ಉದ್ಭವ ಆಗಿದ್ದು... ಈ ರೀತಿ ಮುಖಹೀನ ಬ್ಲಾಗ್ ಮಾಡಿ, ಇನ್ನೊಬ್ಬರ ನೆಮ್ಮದಿ ಕದಡಬೇಡಿ... ನಿಮ್ಮ ಸುಳ್ಳು ಬರೆಯುವ ಚಟಕ್ಕೆ ಯಾವ ಉಸಾಬರಿಗೂ ಹೋಗದ ಉಗಮನಂತವರು ಬಲಿಯಾಗದಿರಲಿ..

manoj mysore said...

mr.chinna swamy vaddagere avare.... nevu patrakartaragi rajakiya madikondu ega full time rajakarani agidira.rajakarani agi rajakiya madikondiri...madyamadalli rajakiya madalu barabedi..plz.hucchu rangana vahisikondu bandiruva nevu innu entha huchharira bahudu,,,,,,

sushma said...

ಇಲ್ಲಿ ರಂಗನಾಥ್ ಅವರ ಬಗ್ಗೆ ಬಿಟ್ಟು ಬೇರೆ ಯಾವ ಲೇಖನ ಇಲ್ಲದನ್ನು ನೋಡಿದರೆ ಇದು ರಂಗನಾಥ್ ಅವರ ಜನಪ್ರಿಯತೆ ಸಹಿಸದೆ ಅವರ ವಿರುದ್ದ ಹುಟ್ಟಿ ಕೊಂಡ ಬ್ಲಾಗ್ ಇದು ಎನ್ನಿಸುತ್ತಿದೆ

Anonymous said...

ಜಟ್ಟಿ ನೆಲಕ್ಕೆ ಬಿದ್ರು ಮೀಸೆ ಮಣ್ಣಾಗಲಿಲ್ಲ ಅಂದ್ರೆ ಇದೇ ನೋಡಿ. ಪ್ರಾಧ್ಯಾಪಕರು ಅಂತ ಬೇರೆ ಹೇಳ್ಕೋತೀರಾ, ನಿಮ್ಮ ಬ್ಲಾಗ್ ನೋಡಿದ ಮೇಲೆ ನಿಮ್ಮ ಶಿಷ್ಯರ ಬಗ್ಗೆ ಕನಿಕರ ಮೂಡುತ್ತೆ.

vijay ramanna said...

suddi spota.......... Huchu rangana suvarnadinada kittu hakidru...idu egina suddi,,,

benki said...

H.R.Ranganath is a very honest and valuable person plz dont comment anybody about him.