Monday 21 March 2011

ಉದಯವಾಣಿಯಿಂದ ೩ ಜನ ವಿಕಕ್ಕೆ ಇದು ಸುಪರ್ ಮೂನ್ ಎಫೆಕ್ಟ್ ಅಲ್ಲ!

ವಿ.ಭಟ್ಟರು ವಿಕ ಬಿಡುವುದರ ಮೂಲಕ ಆರಂಭವಾದ ತಲ್ಲಣದ ಅಲೆಗಳು ಇನ್ನು ನಿಂತಿಲ್ಲ. ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ವಲಸೆ ಇನ್ನು ಕೆಲವು ದಿನ ಹೀಗೆ ಇರಬಹುದು ಎಂಬ ಶಂಕೆಯಿದೆ. ಸಂಖ್ಯೆಗಳ ಕುರಿತು ನಿಖರ ಮಾಹಿತಿ ಇಲ್ಲ.

ಈ ಅಲೆಯ ಪರಿಣಾಮವಾಗಿಯೇ ೩ ಜನ ಉದಯವಾಣಿಯಿಂದ ವಿಕಕ್ಕೆ ವಲಸೆ ಹೊರಟಿದ್ದಾರೆ.  ವೈ.ಗ. ಜಗದೀಶ್, ಹುದ್ರಣ್ಣ ಪರ್ತಿಕೋಟಿ, ಲಕ್ಷ್ಮಿನಾರಾಯಣ ಎಂಬವರೇ ವಿಕಕ್ಕೆ ಹೊರಟವರು. ವಿಕ ಚೀಫ್ ರಿಪೋರ್ಟರ್ ಎಲ್. ಪ್ರಕಾಶನೆ ಇವರನ್ನು ಕರೆತರುತ್ತಿದ್ದಾನೆ.

ಅತ್ತ ಉದಯವಾಣಿ ಸಂಪಾದಕ ರವಿ ಹೆಗಡೆ ಅವತಾರಕ್ಕೆ ಹೊಸ ಸಂಚಲನ ಮೂಡಿದೆ. ತುಂಬಾ ಜನ ಉದಯವಾಣಿಯಲ್ಲಿ ಓತ್ಲಾ ಹೊಡೆದುಕೊಂಡಿದ್ದರು. ಅವರಿಗೆಲ್ಲ ರವಿ ಹೆಗಡೆ ಚುರುಕು ಮುಟ್ಟಿಸಿದ್ದಾರೆ. ಹಿರಿ-ಕಿರಿಯರೆನ್ನದೆ ರವಿ ಹೆಗಡೆಯವರು ಏಕವಚನದಲ್ಲಿ ಕರೆಯುವುದು ನೋಡಿ ಉದಯವಾಣಿಯ ಜನತೆ ದಂಗಾಗಿದೆ.

ಕಂಕ ಮೂರ್ತಿ ಸೀನಿಯರ್ ಮನುಷ್ಯ. ಅವರು ೮:೦೦ ಗಂಟೆಗೆ ಬ್ಯಾಗು ಹಿಡಿದು ಮನೆಗೆ ಹೊರಟಾಗ ರವಿ ಹೆಗಡೆ ಕರೆದು "ಏನು ಮನೆಗೆ ಹೊರಟದ್ದಾ? ಇಷ್ಟು ಬೇಗ ಮನೆಗೆ ಹೋಗುವಂತಿಲ್ಲ. ಮನೆಗೆ ಹೋಗುವುದು ೧೧ರ ಮೇಲೆಯೆ' ಎಂದು ಹೇಳಿದ್ದಾರೆ. ಇದೆ ಅನುಭವ ಹುದ್ರಣ್ಣ ಪರ್ತಿಕೋಟಿಗೂ ಆಗಿದೆ. 'ನೀವು ಶ್ಯಾಮರಾಯರನ್ನು ನೋಡಿದ್ದೀರಿ. ನಾನು ೧೦೦ ಶ್ಯಾಮರಾಯರಿಗೆ ಸಮ. ನಾನು ಈವರೆಗೆ ೨೦೦ ಜನರನ್ನು ಕೆಲಸದಿಂದ ಕಿತ್ತು ಹಾಕಿದ್ದೇನೆ. ೨೪೦ ಜನರನ್ನು ಕೆಲಸಕ್ಕೆ ತೆಗೆದುಕೊಂಡಿದ್ದೇನೆ' ಎಂದು ರವಿ ಹೆಗಡೆ ಹೇಳಿರುವುದು ಉದಯವಾಣಿಯಲ್ಲಿ ಓತ್ಲಾ ಹೊಡೆದುಕೊಂಡು ಇದ್ದವರಿಗೆ ಚಿರುಕುರುಳಿ ಸೊಪ್ಪು ತೀಡಿದಂತಾಗಿದೆ. ರವಿ ಹೆಗಡೆ ಒಳ್ಳೆಯವರು ಆದರೆ ರಂಗನ ಜೊತೆ ಸೇರಿ ಹೀಗಾಗಿದ್ದಾರೆ ಎಂದು ಉದಯವಾಣಿಯ ಜನ ಮಾತಾಡಿಕೊಳ್ಳುತ್ತಿದ್ದಾರೆ.

ಮುಗಿಸುವ ಮೊದಲು ಒಂದು ಸೂಚನೆ: ಇದೆಲ್ಲ ಸೂಪರ್ ಮೂನ್ ಪರಿಣಾಮ ಅಲ್ಲ.

9 comments:

Anonymous said...

ಸ್ವಾಮೀ ಚೆನ್ನಾಗಿ ಬರೆತಿದ್ದಿರಿ,ಈ ಟಿವಿ ಬಗ್ಗೆನೂ ಸ್ವಲ್ಪ ಮಾಹಿತಿ ಮಸಾಲ ಇದ್ರೆ ಬರೆರಿ.ಮಜಾ ಇರುತ್ತೆ..ಜೈ ಮಿಡಿಯಾಮನ ಮಾಮ..

Unknown said...

ee ritiya sullu suddi habbisuvudu sariyalla. nane Rudranna Harthikote. nanu vk ge horatu nintilla, prakash nanna snehita adaru saha yavattu karedilla. astakku otla hodediruvudagi, Ravi Hegde nanage yavattu enu helilla. eeriti bekabitti bareyuvudu modalu nillisi. eeriti bareyuvudu nodidre nimage nanna bagge gottilla annisutte. modalu tiliyuvuva prayatna madi
Rudranna Harthikote

Anonymous said...

ರವಿ ಹೆಗಡೆಯನ್ನು ಕೆಲಸದಿಂದ ಕಿತ್ತು hakuva jana barabhudu allave?

Anonymous said...

ದಯವಿಟ್ಟು ಹುಚ್ಚುಚ್ಚಾಗಿ ಏನೇನೋ ಬರೆಯಬೇಡಿ. ಉದಯವಾಣಿಯಲ್ಲಿ ಯಾರೂ ಓತ್ಲಾ ಹೊಡೆದುಕೊಂಡು ಕುಳಿತಿಲ್ಲ. ಎಲ್ಲರೂ ಅವರವರ ಕೆಲಸಗಳನ್ನು ಶ್ರದ್ಡೆಯಿಂದ ಮಾಡುತ್ತಿದ್ದಾರೆ. ಪತ್ರಿಕೆಯನ್ನು ಅವರೂ ಬೆಳೆಸಿದ್ದಾರೆ. ಹೊಸ ಸಂಪಾದಕರುಗಳು ಬಂದಾಗ, ಅವರ ಜೊತೆ ದುಪ್ಪಟ್ಟು ಸಂಬಳದ ದೊಡ್ಡ ತಂಡವೇ ಬಂದಾಗಲೂ ಯಾರೂ ಬೇಸರ ಮಾಡಿಕೊಳ್ಳದೆ ಪತ್ರಿಕೆ ಮೇಲಿನ ಪ್ರೀತಿಯಿಂದ ಕೆಲಸ ಮಾಡುತ್ತಿದ್ದಾರೆ. ಇಲ್ಲದಿದ್ದಿದ್ದರೆ ವಿ.ಕ., ಕ.ಪ್ರ. ಸುವರ್ಣ ನ್ಯೂಸ್ ಥರ ಉದಯವಾಣಿಯಲ್ಲಿ ಇಷ್ಟೊತ್ತಿಗಾಗಲೇ ವಲಸೆ ಪರ್ವ ಆರಂಭವಾಗಿಬೇಕಿತ್ತು. ಓತ್ಲಾ ಹೊಡೆದುಕೊಂಡಿರುವ ನಿಮ್ಮಂಥವರಿಂದ ಮಾತ್ರ ಇಂಥ ಸುಳ್ಳು ಸುದ್ದಿಗಳು ಹುಟ್ಟಿಕೊಳ್ಳಲು ಸಾಧ್ಯ! ’ಓತ್ಲಾ’ ಪದ ಬಳಸಿ ನಮಗೆಲ್ಲ ನೋವುಂಟು ಮಾಡಿರುವ ನಿಮಗೆ ಧಿಕ್ಕಾರವಿರಲಿ.

sudheersanu said...

ಮಾನ್ಯ ಪ್ರಾಧ್ಯಾಪಕರೇ...
ಕೇಸಿಗೆ ಹೆದರಿ ಬ್ಲಾಗಿಗೆ ಪೋಸ್ಟ್ ಮಾಡೋದೇ ಮರೆತು ಬಿಟ್ರಾ ಹೇಗೆ...?
ಹ್ಹ...ಹ್ಹ....ಹ್ಹ

Anonymous said...

ನೀವು ಹೇಳಿದ್ದು ನೂರಕ್ಕೆ ನೂರರಷ್ಟು ನಿಜ. ನಮ್ಮ ನಿಮ್ಮಂತೆ ರವಿ ಹೆಗಡೆ ಅವರಿಗೆ ಒಂದೇ ಮುಖ ಅಲ್ಲ. ಅವರು ಹಲವು ಮುಖಗಳ ಮನುಷ್ಯ. ಎದುರುಗಡೆ ಎಲ್ಲರೊಂದಿಗೆ ಚೆನ್ನಾಗಿ, ನಯವಾಗಿ ವರ್ತಿಸುವ ಅವರು ಬೆನ್ನಿಗೆ ಚೂರಿ ಹಾಕುವ ಪ್ರವೃತ್ತಿಯವರು. ತಮಗಾಗದವರನ್ನು ನಗು ನಗುತ್ತಲೇ ಕೊಲ್ಲುವ ಸಾಮರ್ಥ್ಯ ಹೊಂದಿದವರು. ತಮ್ಮ ಕೆಳಗಿನ ಸಿಬ್ಬಂದಿಯನ್ನು `ಏನೋ, ಹೇಗಿದೀಯೋ' ಎಂದು ಏಕವಚನದಲ್ಲೇ ಕೇಳುವ ಮೂಲಕ ಅಧಿಕಾರ ಸ್ಥಾಪನೆಯನ್ನೂ, ಆತ್ಮೀಯತೆಯನ್ನೂ ಒಟ್ಟಿಗೇ ಸಾಧಿಸುತ್ತಾರೆ. ಅವರು ಮಾಡುವ ಪ್ರತಿ ಕೆಲಸದಲ್ಲೂ ಹಿಡನ್ ಅಜೆಂಡಾ ಇದ್ದೇ ಇರುತ್ತದೆ. ತಮ್ಮ ಬಗ್ಗೆ ಹೇಳಿಕೊಳ್ಳುವುದೆಂದರೆ ಅವರಿಗೆ ಎಲ್ಲಿಲ್ಲದ ಖುಷಿ. ಎಚ್. ಆರ್. ರಂಗನಾಥ್ ಜೊತೆ ಇದ್ದಾಗಲೂ ರಂಗ ಅವರನ್ನು ಅವರ ಹಿಂದಿನಿಂದ ಕೆಟ್ಟದಾಗಿ ಬಿಂಬಿಸುತ್ತಾ ತಾವು ಒಳ್ಳೆಯವರೆಂದು ಬಿಂಬಿಸಿಕೊಂಡವರು. ರಂಗ ಯಾರನ್ನಾದರೂ ಬೈದರೆ ಅವರನ್ನು ಪ್ರತ್ಯೇಕವಾಗಿ ಕರೆದು ಸಮಾಧಾನ ಹೇಳಿ, ತಮ್ಮತ್ತ ಸೆಳೆದುಕೊಳ್ಳುವ (ಕು)ತಂತ್ರಗಾರ. ಹೀಗಾಗಿ ಅವರಿಗೆ ಸಿಬ್ಬಂದಿಯನ್ನು ತೆಗೆದುಹಾಕುವುದು, ನೇಮಿಸಿಕೊಳ್ಳುವುದು ನೀರು ಕುಡಿದಷ್ಟೇ ಸುಲಭ ಬಿಡಿ. ಆಡಳಿತ ತಂತ್ರವರಿಯದ ರವಿ ಹೆಗಡೆ ಈಗ ಉದಯವಾಣಿಯಲ್ಲಿ ಮನಬಂದಂತೆ ವರ್ತಿಸುತ್ತಿದ್ದಾರೆ. ಕಂಡ ಕಂಡವರ ಮೇಲೆಲ್ಲಾ ಪ್ರಭುತ್ವ ಸಾಧಿಸಹೊರಟಿದ್ದಾರೆ. ಇಂಥ ವರ್ತನೆಯಿಂದ ಈಗಾಗಲೇ ಉದಯವಾಣಿ ಆಡಳಿತ ವರ್ಗಕ್ಕೆ ರವಿ ಹೆಗಡೆ ಬಿಸಿತುಪ್ಪವಾಗಿದ್ದಾರೆ. ಹೀಗೇ ಆದರೆ ಅವರು ಉದಯವಾಣಿಯಲ್ಲಿ ಬಹಳ ದಿನ ಮುಂದುವರಿಯುವುದು ಕಷ್ಟವಾದೀತು.

Anonymous said...

udayavaniyalli modalu idda sampaadaki matthu avara ippatthu janara thandave ishtoo putagalu matthu ishtondu puravanigalannu roopisutthiddaru. Kadime jana, hecchu kelasa- ellarigu heege kaithumbaa kelasa iddaga halabaru 'othla' hodeyuvudelli banthu swami? ivatthu alli raashi hosabaru bandu seriddare. Halabaroo endinanthe kelasa maadutthiddaare. Bareyuva munna yochisi....

Anonymous said...

ಉದಯವಾಣಿ ಬೇರೆ ಪತ್ರಿಕೆ ತರ ಅಲ್ಲ , ಅಲ್ಲಿ ಪೈ ಗಳೇ ಸುಪ್ರಿಂ , ಸೋನಿಯಾ ಮನಮೋಹನ್ ಇದ್ದ ಹಾಗೆ.. ರವಿ ಹೆಗ್ಡೆ ಮನಮೋಹನ್ ತರ ಇರಬೇಕು ಇಲ್ಲ ಅಂದ್ರೆ ಪೈಗಳು ರವಿ ಅಲ್ಲ ಅವರಪ್ಪ ಆದ್ರು ಒದ್ದು ಓಡಿಸ್ತಾರೆ ... ಅಲ್ಲಿ ಒತ್ಲಾ ಹೊಡಿಯೋರು ಇರೋದು ಸಂಶಯ ಯಾಕಂದ್ರೆ ಅಂತವರನ್ನು ಹುಡುಕಿ ಓಡಿಸ್ತಾರೆ ..ಮಣಿಪಾಲ ದಲ್ಲಿ ಮನಿ(Money )ಗಿದಸ್ಟು ಬೆಲೆ ಜನ ಕ್ಕೆ ಇಲ್ಲ ..

Anonymous said...

thu nimma, naachige agabeku nimagella