Showing posts with label ಪುದುಬೆಟ್ಟು. Show all posts
Showing posts with label ಪುದುಬೆಟ್ಟು. Show all posts

Tuesday, 13 September 2011

ಮೋಹನ ರೋಗಕ್ಕೆ ಮಾನಸ ಬಲಿ!

ಗಂಡ ಬರೆದ ಲೇಖನಕ್ಕೆ ಹೆಂಡತಿ ಕೆಲಸ ಕಳೆದುಕೊಂಡಿದ್ದಾಳೆ! ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರು ಅಂತಾರಲ್ಲ ಹಾಗೆ.  ಇಂತಹ ಹೇಯ ಕೃತ್ಯ ಎಸಗಿದ್ದು 'ಸಂಪಾದಕೀಯ' ಬ್ಲಾಗ್ ಮೂಲಕ ಸಿಕ್ಕಸಿಕ್ಕವರಿಗೆ ಉಪದೇಶ ನೀಡುವ ಸಮಯ ಚಾನಲ್ ಮಖ್ಯಸ್ಥ ಜಿ.ಎನ್. ಮೋಹನ್. ಸುರೇಶ್ ಪುದುಬೆಟ್ಟು ಎಂಬ ತುಸು ಅಂಗವಿಕಲ ಪತ್ರಕರ್ತನಿದ್ದಾನೆ. ಮೊದಲು ವಿಜಯ ಕನಾFಟಕದಲ್ಲಿದ್ದ. ಜನಶ್ರಿ ಯಾತ್ರೆ ಮುಗಿಸಿ ಈಗ ಉದಯವಾಣಿಯಲ್ಲಿದ್ದಾನೆ. ಈತ ಇತ್ತೀಚೆಗೆ ಸಮಯ ಚಾನಲ್ ಮಾಲಿಕ ಮುರುಗೇಶ್ ನಿರಾಣಿ ವಿರುದ್ಧ ಒಂದು ಲೇಖನ ಬರೆದಿದ್ದ.  ಸುರೇಶ್ ಪುದುಬೆಟ್ಟು ಪತ್ನಿ ಮಾನಸ ಪುದುಬೆಟ್ಟು ಸಮಯ ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದಳು. ಅವಳನ್ನು ಕರೆದ ಜಿ.ಎನ್. ಮೋಹನ, ಮುರುಗೇಶ್ ನಿರಾಣಿ ವಿರುದ್ಧ ಬರೆಯದಂತೆ ನಿನ್ನ ಗಂಡನಿಗೆ ಹೇಳು ಎಂದು ಮಾನಸ ಪುದುಬೆಟ್ಟುಗೆ ಸೂಚಿಸಿದ್ದಾರೆ. ಅದಕ್ಕೆ ಆಕೆ "ಸರ್ ಅವರದ್ದು ಬೇರೆ ಸಂಸ್ಥೆ. ನಾನು ಹಾಗೆ ಹೇಳುವುದು ಸರಿಯಾಗುವುದಿಲ್ಲ" ಎಂದಿದ್ದಾಳೆ.
ಪ್ರಕಟವಾದ ವರದಿಗೆ ನಿರಾಣಿ ಕಡೆಯಿಂದ ಸ್ಪಷ್ಟೀಕರಣ ನೀಡಲಾಗಿತ್ತು. ಅದನ್ನು ಉದಯವಾಣಿ ಚಿಕ್ಕದಾಗಿ ಪ್ರಕಟಿಸಿತ್ತು. ಇದರ ಕುರಿತೂ ಜಿ.ಎನ್. ಮೋಹನ, ಮಾನಸಳ ಮೂಲಕ ಒತ್ತಡ ಹೇರಲು ಯತ್ನಿಸಿದ. ಮಾನಸ ಜಗ್ಗಲಿಲ್ಲ. ಕೆಲಸದಿಂದ ಕಿತ್ತುಹಾಕುವ ಬೆದರಿಕೆ ಹಾಕಲಾಯಿತು. ಆಗಲೂ ಪ್ರಯೋಜನವಾಗದಿದ್ದಾಗ ಮಾನಸಳನ್ನು ಗುಲ್ಬರ್ಗಕ್ಕೆ ವರ್ಗ ಮಾಡಲಾದೆ. ಇದನ್ನು ಖಂಡಿಸಿ ಮಾನಸ ರಾಜಿನಾಮೆ ಸಲ್ಲಿಸಿದ್ದಾಳೆ.
ಬೇರೆ ಪತ್ರಿಕೆಯಲ್ಲಿ ಕೆಲಸ ಮಾಡುವ ಗಂಡ ಲೇಖನಕ್ಕೆ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಆತನ ಪತ್ನಿಯನ್ನು ಕೆಲಸದಿಂದ ಕಿತ್ತು ಹಾಕಿದ ಜಿ.ಎನ್. ಮೋಹನ, ಟಿವಿ ಪರದೆಯ ಮೇಲೆ ನಟ ದರ್ಶನ್ ಪ್ರಕರಣದಲ್ಲಿ ನಟಿ ನಿಖಿತಾಗೆ ೩ ವರ್ಷ ನಿಷೇಧ ಹೇರಿದ್ದು ತಪ್ಪು ಎಂದು ವಾದಿಸುತ್ತಿದ್ದ. ನಾಚಿಕೆಗೇಡು.
ಸಾಕಷ್ಟು ಪತ್ರಕರ್ತರ ದಂಪತಿಗಳು ಹೀಗೆ ಬೇರೆ ಬೇರೆ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸ್ಥಿತಿಯನ್ನು ಮಾಲಿಕರೂ ಅರ್ಥಮಾಡಿಕೊಂಡಿದ್ದಾರೆ. ಆದರೆ ಜಿ.ಎನ್. ಮೋಹನನಂತಹ ಕೀಳು ಮನಸ್ಸಿನ ಪತ್ರಕರ್ತರು ಮಾತ್ರ ಮಾಲಿಕರನ್ನು ಮೆಚ್ಚಿಸಲು ಇಂತಹ ಕೆಲಸ ಮಾಡುತ್ತಾರೆ.