Monday 27 June 2011

ಸಂಕೇಶ್ವರ- ಶಿವ ಭೇಟಿ!

ಇದು ಈ ಕ್ಷಣದ ಬ್ರೆಕಿಂಗ್ ನ್ಯೂಸ್.

ಹೊಸ ಪತ್ರಿಕೆ ಮಾಡುವ ಹುಮ್ಮಸ್ಸಿನಲ್ಲಿರುವ ವಿಜಯ ಸಂಕೇಶ್ವರ ಅವರನ್ನು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಚೇರಿಯಲ್ಲಿ ಹುದ್ದೆಗಾಗಿ ಚಡಪಡಿಸುತ್ತಿರುವ ಶಿವ ಸುಬ್ರಹ್ಮಣ್ಯ ಮಂಗಳವಾರ ಬೆಳಿಗ್ಗೆ ೧೦.೦೦ ಗಂಟೆಗೆ ಭೇಟಿ ಮಾಡಿದ್ದಾರೆ. ಶಿವನ ಕುರಿತು ಸಂಕೇಶ್ವರ ಅವರ ಅಭಿಪ್ರಾಯ ಏನಿದೆ ಎಂಬುದನ್ನು ಮೊದಲೇ ಪ್ರಕಟಿಸಲಾಗಿದೆ. ಸಂಕೇಶ್ವರ ಅವರ ನಿರಾಸಕ್ತಿಯ ಹೊರತಾಗಿಯೂ ಕೆಲವರನ್ನು ಕಾಡಿ ಬೇಡಿ ಅವರನ್ನು ಭೇಟಿ ಮಾಡಲು ಶಿವ ಯಶಸ್ವಿಯಾಗಿದ್ದಾರೆ. ಈಗಾಗಲೇ ಹೊಸಪತ್ರಿಕೆ ಕಾರ್ಯಾರಂಭದ ಸೂಚನೆಯಾಗಿ ತಿಮ್ಮಪ್ಪ ಭಟ್ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವರ ಕೈ ಕೆಳಗೆ ಬೇಕಾದರೂ ಕೆಲಸ ಮಾಡಲು ಸಿದ್ಧ ಎಂದು ಶಿವ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಸುದ್ದಿ ಪ್ರಕಟಿಸುವಾಗ ಭೇಟಿ ಇನ್ನು ಜಾರಿಯಲ್ಲಿತ್ತು.

ಫಲಶ್ರುತಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು.

5 comments:

Vee said...

baari update idiri sara nev...

Vee said...

ರಿ ಸರ..
ನೀವ್ ಪೋಸ್ಟ್ ಮಾಡಿರೋದು ಓದಿದೆ. ಇದನ್ನ ನೀವ್ ಹಾಕಿರೋದು ಸೋಮವಾರ ೨೭ ನೇ ತಾರಿಕು.. ಹಾಕಿರೊದು ರಾತ್ರಿ ೧೦:೦೨(PM). ಆದ್ರೆ ಮಂಗಳವಾರ ಬೆಳಿಗ್ಗೆ ಭೇಟಿ ಮಾಡಿದ್ದಾರೆ ಮತ್ತು ಈ ಸುದ್ದಿ ಪ್ರಕಟಿಸುವಾಗ ಭೇಟಿ ಇನ್ನೂ ಜಾರಿಯಲ್ಲಿತ್ತು ಅಂತ ಹಾಕಿದಿರಲ.. ಇದರಲ್ಲಿ ತಪ್ಪಿದೆಯಲ್ಲ.. ರಾತ್ರಿ ನೀವ್ ಪೋಸ್ಟ್ ಮಾಡಿ ಹೀಗೆಲ್ಲ ಬರೆಯೋಗೆ ಹೇಗೆ ಸಾಧ್ಯ?

Anonymous said...

Updates heli
enaytu?
nam shiva sankeshwar paper ge seridra? egsa sankeshwar yallidare?

Anonymous said...

Shivasubramanya nannu serisikondare Sankeshwar mulgodu Khandit.
Antavarannu doora idode olledu.

Anonymous said...

ಏಕವಚನ ಬೇಡ ಸಿವ.