Monday 20 June 2011

ಸಂಕೇಶ್ವರ್ ಪತ್ರಿಕೆಗೆ ತಿಮ್ಮಪ್ಪ ಭಟ್

ಕರಾರಿನ ಅವಧಿ ಮುಗಿಯುತ್ತಿದ್ದಂತೆ ಸಂಕೇಶ್ವರರು ಪತ್ರಿಕೆ ಕೆಲಸ ಆರಂಭಿಸಿದ್ದಾರೆ. ಮೊದಲ ಹೆಜ್ಜೆಯಾಗಿ ತಿಮ್ಮಪ್ಪ ಭಟ್ಟರನ್ನು ನೇಮಿಸಿಕೊಂಡಿದ್ದಾರೆ. ಆದರೆ ಅವರನ್ನು ಸಂಪಾದಕರನ್ನಾಗಿ ನೇಮಿಸಿಕೊಂಡಿದ್ದಾರೋ ಅಥವಾ ಸಲಹೆಗಾರ ರೀತಿ ನೇಮಿಸಿಕೊಂಡಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.

ತಿಮ್ಮಪ್ಪ ಭಟ್ ನೇಮಕದೊಂದಿಗೆ ಸಂಕೇಶ್ವರರ ಪತ್ರಿಕೆಗೆ ನೇಮಕ ಆರಂಭಗೊಳ್ಳುವ ಸೂಚನೆ ಇದೆ. ಇದು ಪತ್ರಕರ್ತರ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಲಿದೆ. ಕೆಲವರು ಆಗಲೇ ಯಾವ ಹುದ್ದೆಗೆ ಸೇರಬೇಕು ಎಂದು ಸ್ಕೆಚ್ ಹಾಕಿದ್ದಾರಂತೆ. ಸಂಕೇಶ್ವರರು ಹಾಗು ತಿಮ್ಮಪ್ಪ ಭಟ್ಟರು ಇವರಿಗೆಲ್ಲ ಹೇಗೆ ಮಣೆಹಾಕುತ್ತಾರೆ ನೋಡಬೇಕು.

ಉದಯವಾಣಿ ಬಳಗಕ್ಕೆ ರವಿ ಹೆಗ್ಡೆ ಬಳಗ ಹೋದ ಮೇಲೆ ತಿಮ್ಮಪ್ಪ ಭಟ್ಟರು ಅಲ್ಲಿಂದ ಹೊರಬಿದ್ದಿದ್ದರು. ಅಷ್ಟೇ ಬೇಗ ಇನ್ನೊಂದು ಸ್ಥಾನ ಗಳಿಸಲು ಅವರು ಯಶಸ್ವಿಯಾಗಿದ್ದಾರೆ. ಆದರೆ ಇನ್ನಿಬ್ಬರು ಮಾಜಿ ಸಂಪಾದಕರು ಮಾತ್ರ ಇನ್ನು ಹುದ್ದೆ ಹುಡುಕಾಟದಲ್ಲಿ ಬ್ಯೂಸಿ!

1 comment:

Anonymous said...

nijakku olle ayke.
usha kirana iddaga kannada prabhanu aste circulation ithu. vijay sankeshwarge ellavu gothidde olle ayke madiddare.
nijvaglu brastachara rahitha patrikodyamakke hosa team pana thodali.