Sunday 17 April 2011

ಯಾರಿವನ್, ಈ ರಾಘವನ್?

ಹೆಸರು ತಮಿಳರದ್ದು
ಹುಟ್ಟಿದ್ದು ಕರ್ನಾಟಕದಲ್ಲಿ
ಕೆಲಸ ಮಾಡಿದ್ದು ಇಂಗ್ಲಿಶ್ ಪತ್ರಿಕೆಯಲ್ಲಿ
ಈಗ ಕನ್ನಡ ಪತ್ರಿಕೆ ಸಂಪಾದಕ
ಯಾರಿವನ್?

ಅವರೇ ಈ ರಾಘವನ್!!!!!!!!!!!

ಇದು ಮಾಧ್ಯಮ ವಲಯದಲ್ಲಿ ಸದ್ಯ ಚಾಲ್ತಿಯಲ್ಲಿರುವ ಹೊಸ ಒಗಟು.

ಕಂಡು ಕೇಳರಿಯದ, ಗೊತ್ತಿಲ್ಲದ ವ್ಯಕ್ತಿಯೊಬ್ಬರು ದಿಧೀರನೆ ಕನ್ನಡ ಪತ್ರಿಕೋದ್ಯಮಕ್ಕೆ ಕಾಲಿರಿಸಿದಾಗ, ಅದೃಷ್ಟವಶಾತ್ ಕನ್ನಡ ನಂಬರ್ ಒನ್ ಪತ್ರಿಕೆ ಸಂಪಾದಕರು ಆದಾಗ ಕನ್ನಡ ಓದುಗರು ಯಾರಿವನ್ ಎಂದು ತಲೆ ಕೆರೆದುಕೊಂಡಿದ್ದರು.  ಹಾಗೆ ತಲೆ ಕೆರೆದು ಗಾಯ ಮಾಡಿಕೊಂಡವರಲ್ಲಿ ನಾವು ಇದ್ದೆವು. ಪತ್ರಕರ್ತರು ಅಚ್ಚರಿಪಟ್ಟಿದ್ದರು. ಹೆಚ್ಚಿನವರಿಗೆ ಇಂದಿಗೂ ಈ ರಾಘವನ್ ಯಾರೆಂಬುದು ಗೊತ್ತಿಲ್ಲ. ಇಂಟರ್ ನೆಟ್ನಲ್ಲಿ ಹುಡುಕಿದರು ಸಿಗಲಿಲ್ಲ. ಯಾಕೆಂದರೆ ಇವರು ಕನ್ನಡ ಪತ್ರಿಕೋದ್ಯಮದ ಧೀಮಂತ ಪತ್ರಕರ್ತರು ಅಲ್ಲ, ಇಂಗ್ಲೀಷ್ ನಲ್ಲಿ ಅಂತಹ ಸಾಧನೆಯನ್ನು ಮಾಡಲಿಲ್ಲ.

ಇವರು ಹುಟ್ಟಿದ್ದು ಮೈಸೂರಿನಲ್ಲಿ. ಆರಂಭದಲ್ಲಿ ಕೆಲಸ ಮಾಡಿದ್ದು ಇಂಡಿಯನ್ ಎಕ್ಸ್ಪ್ರೆಸ್ಸ್ ನಲ್ಲಿ. ಆಮೇಲೆ ಸೇರಿಕೊಂಡಿದ್ದು ಟೈಮ್ಸ್ ಆಪ್ ಇಂಡಿಯಾ. ಅಲ್ಲಿಂದ ಅವರನ್ನು ಇಕನಾಮಿಕ್ ಟೈಮ್ಸ್ ಗೆ ವಾರ್ಗಾಯಿಸಲಾಗಿತ್ತು. ಬಹುಷಃ ವಯಸ್ಸಾಯಿತು ಎಂಬ ಕಾರಣಕ್ಕೆ. ಇಕನಾಮಿಕ್ಸ್ ಟೈಮ್ಸ್ ನಲ್ಲಿ ಅವರು ರಾಜಕೀಯ ವರದಿ ಮಾಡುತ್ತಿದ್ದರು! ಅನುಭವಿ ಪತ್ರಕರ್ತರು!

ಕರ್ನಾಟಕದಲ್ಲಿ  ಇಕನಾಮಿಕ್ ಟೈಮ್ಸ್ ಇನ್ಚಾರ್ಜ್ ಆಗಿದ್ದರು, ಇಲ್ಲಿ ಸಿದ್ಧವಾಗುತ್ತಿದ್ದುದು ಕೇವಲ ೨ ಪುಟ ಮಾತ್ರ. ಉಳಿದ ಪುಟಗಳೆಲ್ಲ ಮುಂಬಯಿಯಿಂದ ಬರುತ್ತಿದ್ದವು. ಇಂತಿಪ್ಪ ರಾಘವನ್ ವಯಸ್ಸಿನ ಆಧಾರದಲ್ಲಿ ನಿವೃತ್ತಿಯಾಗಿದ್ದರು. ನಿವೃತ್ತಿಯಾಗಿ ೫ ವರ್ಷ ಮನೆಯಲ್ಲಿದ್ದರು.

ಮನೆಯಲ್ಲಿ ನಿವೃತ್ತಿ ಜೀವನ ನಡೆಸುತ್ತ, ಸಮಯದೂಡುತಿದ್ದ ರಾಘವನ್ ಅವರನ್ನು ಟೈಮ್ಸ್ ಮ್ಯಾನೇಜ್ಮೆಂಟ್ ಹೊಸದಾಗಿ ಆರಂಭಿಸಿದ ವಿಜಯ ನೆಕ್ಸ್ಟ್ ಗೆ ಸಂಪಾದಕರಾಗಿ ಕರೆದು ಕೂರಿಸಿತು. ಈ ಮೂಲಕ ಅವರು ಕನ್ನಡ ಪತ್ರಿಕೋದ್ಯಮ ಪ್ರವೇಶಿಸಿದರು. ಇದಕ್ಕೆ ಅವರಿಗಿದ್ದ ಏಕೈಕ ಅರ್ಹತೆಯೆಂದರೆ ವಿಪಿಎಲ್ ಸಿಇಓ ಸುನೀಲ್ ರಾಜಶೇಖರ್ ಅವರ ಜೊತೆಗಿನ ಸ್ನೇಹ.

ಈ ಸ್ನೇಹದ ಪರಿಣಾಮವಾಗಿಯೇ ಕನ್ನಡ ಪತ್ರಿಕೋದ್ಯಮದ ಗಂಧಗಾಳಿ ಇಲ್ಲದ ಇ. ರಾಘವನ್ ಇಂದು ಕನ್ನಡದ ನಂಬರ್ ೧ ದಿನಪತ್ರಿಕೆಯ ಸಂಪಾದಕರು! ಕನ್ನಡ ಪತ್ರಿಕೋದ್ಯಮ ಪ್ರವೇಶಿಸಿದ ಅತ್ಯಲ್ಪ ಅವಧಿಯಲ್ಲಿ ನಂಬರ್ ೧ ಪತ್ರಿಕೆ ಸಂಪಾದಕರಾದ ಅವರ ಸಾಧನೆ ಮೆಚ್ಚುವಂತದ್ದು! ಸಾಧನೆಯ ಹಿಂದೆ ಅಪಾರ ಪರಿಶ್ರಮ ಇದೆ!


ಸಂಪಾದಕರಾಗಿ ಅವರು ಮಾಡಿದ ಸಾಧನೆ ವಿಕ ಓದುವವರಿಗೆ ಗೊತ್ತು. ಬಜೆಟ್ ದಿನ 'ಡಬ್ಬಲ್ ಬ್ಯಾರಲ್ ಗನ್' ತನ್ನೆಡೆಗೆ ಗುರಿ ಇಟ್ಟು ಟ್ರಿಗರ್ ಒತ್ತಿದಾಗಲೇ ವಿಕ ಸಿಬ್ಬಂದಿಗೆ ರಾಘವನ್ ಏನು ಎಂಬುದು ಅರ್ಥವಾದಂತಿದೆ. ಕಚೇರಿಯಲ್ಲಿ ದಿನಕ್ಕೆ ೧೦-೨೦ ಸಿಗರೇಟು ಸೇದುವುದೇ ರಾಘವನ್ ಸಾಧನೆ ಎಂಬ ಮಾತಿದೆ. ಬಾಯಿಂದ ಸಿಗರೇಟು ಹೋಗೆ ಬಿಡುವುದನ್ನು ನೋಡಿದ ವಿಕ ಸಿಬ್ಬಂದಿ ಈತ ವಿಕದ ಹೊಗೆಯನ್ನು ಹೀಗೆ ಹಾರಿಸುವುದು ಗ್ಯಾರಂಟಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

14 comments:

Anonymous said...

ಸಾರ್, ಮೀಡಿಯಾ ಮನದವರೇ,
ಈ.ರಾಘವನ್ ಬಗ್ಗೆ ಹೇಳಿದ್ರೀ... ಇನ್ನು, ವಿಶ್ವೇಶ್ವರ ಭಟ್ಟರನ್ನು ವಿಕದಿಂದ ಹೊರ ದಬ್ಬಿದ್ದು ಯಾಕೆ, ಅವರ ಜೊತೆ ಅವರ ಹವ್ಯಕ ಸಮುದಾಯದವರು ಮಾತ್ರವೇ ಯಾಕೆ ಓಡಿ ಹೋದ್ರು ಅಂತೆಲ್ಲಾ ಒಂದಿಷ್ಟು ತನಿಖೆ ನಡೆಸಿ ಬರೆದ್ರೆ ತುಂಬಾ ಒಳ್ಳೇದೀತ್ತು... ನಮ್ಮಂಥವರ ಕುತೂಹಲವಾದ್ರೂ ತಣೀತಿತ್ತು...

-ನಾಗೇಶ್...

Anonymous said...

Protector of B forces in Vijay Karnataka after VBhat left.
He is in-charge protecting B prople and killing Vk slowlly.
when Amul baby SuRA sil wake up and Clean the system.

Anonymous said...

This not fair to to downgrade E.Raghavan. He was a good journalist. Written a book. Well connected with top leaders unlike Vbhat. Very noble persons and dislikes chamachagiri..
But, now he killing the No.1 newspaper. He earns 25 lac pa.So enjoys it. Gave a report or impressed the management that paper is doing well. After all what Times group & SuRa wants ? Revenue means MONEY !!
It is coming flowing...

Anonymous said...

E.Raghavan is continuing despite Umapathy. Sources say that L.Prakash & former delhi boy Ashokram are covertly opposing Umapathy joing at Bangalore.These two are V.Bhat's close aids & now sides with Ravi belegere are former aspirants for Executive Managing Editor post.

Anonymous said...

(ಇವೆಲ್ಲ ನಮಗೆ ಸಿಕ್ಕ ಮಾಹಿತಿಗಳು. ಸಾಧ್ಯವಾದರೆ ಬಳಸಿಕೊಳ್ಳಿ.)


24 ಕೋಟಿ ಕೊಟ್ಟು ಭೂಮಿ ಖರೀದಿಸಿದ ಕ್ಯಾಪ್ಟನ್ ರಂಗ!


ಸುವರ್ಣ ನ್ಯೂಸ್ ಮ್ಯಾನೇಜ್ಮೆಂಟ್ ಆಕ್ರೋಶಕ್ಕೆ ಒಳಗಾಗಿ ಹಿಮ್ಭಡ್ತಿ ಹೊಂದಿದ ಕ್ಯಾಪ್ಟನ್ ರಂಗ ಕಳೆದ 15 ದಿನಗಳಿಂದ ಸುವರ್ಣ ನ್ಯೂಸ್ ಕಚೇರಿಗೆ ಬರುತ್ತಿಲ್ಲ. ಹೀಗಾಗಿ ಕಚೇರಿಯ ಸಿಬ್ಬಂದಿ ನೆಮ್ಮದಿಯಾಗಿದ್ದಾರೆ. ಆದರೆ ರಂಗ ಹಿಂಬಾಲಕರು ಮಾತ್ರ ಮೂಲೆಗುಂಪಾಗಿ ನೆಮ್ಮದಿ ಕಳೆದುಕೊಂಡಿದ್ದಾರೆ. ರಂಗನ ಆಡಳಿತಾವಧಿಯಲ್ಲಿ ಮೆರೆಯುತ್ತಿದ್ದ ಶೋಭಾ, ವಿನೋದಕುಮಾರ್ ನಾಯಕ್, ದಿಲೀಪ್, ಮಹೇಶ್, ಶಿವಸ್ವಾಮಿ, ಮೆಟ್ರೋ ಚೀಫ್ ಅವಿನಾಶ್ ಇತ್ಯಾದಿ ಮಂದಿ ಮಂಕಾಗಿದ್ದಾರೆ. ಅದಕ್ಕೇ ವಿನೋದ್ ಅಂಥವರು ವಿಜಯ ಕರ್ನಾಟಕದ ಕದ ತಟ್ಟಿದ್ದಾರಂತೆ. ಇವರೆಲ್ಲ ರಂಗ ಗೆ ಬಕೆಟ್ ಹಿಡಿದು ಹಿಡಿದು ಲಾಭ ಪಡೆದುಕೊಂದವರೆಂದು ಚಾನಲ್ಲಿನಲ್ಲಿರುವವರೇ ಹೇಳುತ್ತಿದ್ದಾರೆ.
ಸುವರ್ಣ ನ್ಯೂಸ್ ಕಚೇರಿಗೆ ಬಾರದ ರಂಗ ಏನು ಮಾಡುತ್ತಿದ್ದಾರೆ? ಸುವರ್ಣ ನ್ಯೂಸ್ ನಲ್ಲಿ ಮಾಡಿದ ದುಡ್ಡನ್ನೆಲ್ಲ ಬೇರೆ ಬೇರೆ ಕಡೆ ಹೂಡಿಕೆ ಮಾಡುತ್ತಿದ್ದಾರೆ. ಮೈಸೂರಿನ ತಿ. ನರಸೀಪುರ ಮಾರ್ಗದಲ್ಲಿ ಬರೋಬ್ಬರಿ 24 ಕೋಟಿ ಕೊಟ್ಟು 20 ಎಕರೆ ಲ್ಯಾಂಡ್ ಖರೀದಿಸಿದ್ದಾರಂತೆ. ಸುಮಾರು ೧೦ ದಿನಗಳ ಹಿಂದೆ ರಿಜಿಸ್ಟ್ರೇಶನ್ ಕೂಡ ಆಗಿದೆಯಂತೆ. ಇಷ್ಟೆಲ್ಲಾ ದುಡ್ಡು ಎಲ್ಲಿಂದ ಬಂತೋ... ಎಲ್ಲ ಸುವರ್ಣ ನ್ಯೂಸ್ ಮಹಿಮೆ. ಈ ಚಾನೆಲ್ ಮಾಲೀಕ ರಾಜೀವ್ ಚಂದ್ರಶೇಖರ್ ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ರೆ ಅವರದೇ ಚಾನೆಲ್ನ ಕೆಲ ಸಿಬ್ಬಂದಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಚಾನೆಲ್ನ ಸ್ಟುಡಿಯೋಗೆ ಗೆಸ್ಟ್ ಫಿಕ್ಸ್ ಮಾಡುವವರೆಗೂ ಇವರ ಭ್ರಷ್ಟಾಚಾರ ಮೇರೆ ಮೀರಿದೆ. ಹೊಸ ಮುಖ್ಯಸ್ಥ ಹಮೀದ್ ಅವ್ರ ಆಡಳಿತದಲ್ಲೂ ಇದು ಮುಂದುವರಿದಿದೆ. ಹಮೀದ್ ಕೂಡ ಭ್ರಷ್ಟಾಚಾರಕ್ಕೆ ಮಣೆ ಹಾಕ್ತಾರೆ ಅನ್ನೋದು ಚಾನೆಲ್ ನ ಉದ್ಯೋಗಿಗಳ ಹೇಳಿಕೆ. ಇದೆಲ್ಲ ರಾಜೀವ್ ಅವ್ರಿಗೆ ಗೊತ್ತಾಗ್ತಿಲ್ವ ಅನ್ನೋದು ನಮ್ಮ ಪ್ರಶ್ನೆ.
ಸುವರ್ಣ ನ್ಯೂಸ್ ನ ಮಾಜಿ ಮುಖ್ಯಸ್ಥ ರಂಗ ಕಸ್ತೂರಿ ಚಾನೆಲ್ ಗೆ ಹೋಗ್ತಾರೆ ಅನ್ನೋ ಸುದ್ದಿ ಇದೆ. ಇದಿನ್ನೂ ದೃಢಪಟ್ಟಿಲ್ಲ. ಕಸ್ತೂರಿ ನ್ಯೂಸ್ ಚಾನೆಲ್ ಆರಂಭದ ದಿನಾಂಕವೇ ಇನ್ನೂ ಸ್ಪಷ್ಟವಾಗಿಲ್ಲ. ರವಿ ಹೆಗಡೆ ಹಾಗೂ ಸಿ.ಇ. ಓ. ವಿನೋದ್ ಪ್ರಭಾವದಿಂದ ರಂಗ ಪೈ ಗ್ರೂಪ್ ಸೇರಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ರವಿ ಹೆಗ್ಡೆಯೂ ಅತಂತ್ರ!
ಸುವರ್ಣ ನ್ಯೂಸ್ ಬಿಟ್ಟು ತಮ್ಮ ಹಿಂ'ಬಾಲಕ'ರೊಂದಿಗೆ ಉದಯವಾಣಿ ಸೇರಿದ ೨ ಮುಖದ ರವಿ ಹೆಗಡೆ ತಮ್ಮವರಿಗೆ ಮೊದಲು ಹೇಳಿದಷ್ಟು ಸಂಬಳ ಕೊಡಿಸುವಲ್ಲಿ ವೈಫಲ್ಯ ಕಂಡಿದ್ದಾರೆ. ಹೇಳಿದ ಸಂಬಳದಲ್ಲಿ ಅರ್ಧದಷ್ಟನ್ನು ಮಾತ್ರ ಮ್ಯಾನೇಜ್ಮೆಂಟ್ ಕೊಟ್ಟಿದೆ. ಈಗ ಕೊಟ್ಟಿರುವ ಸಂಬಳವೇ ಅವರೆಲ್ಲರ ಅಧಿಕೃತ ಸಂಬಳವಾಗಲಿದೆ ಎನ್ನುತ್ತಿದ್ದಾರೆ ಅಲ್ಲಿನ ಮೂಲನಿವಾಸಿಗಳು. ಅಲ್ಲದೆ ಇವರಾರಿಗೂ ಮ್ಯಾನೇಜ್ಮೆಂಟ್ ಇನ್ನೂ ಅಪಾಯಿಂಟ್ಮೆಂಟ್ ಆರ್ಡರ್ ಕೊಟ್ಟಿಲ್ಲ. ಹೀಗಾಗಿ ರವಿ ಹೆಗ್ಡೆ ಹಿಂಬಾಲಕರು ಕಂಗಾಲಾಗಿದ್ದಾರೆ. . ಪೈ ಮ್ಯಾನೇಜ್ಮೆಂಟ್ ನಿಂದ ಉಗಿಸಿಕೊಂಡ ಬಳಿಕ ರವಿ ಹೆಗಡೆ ಮೆತ್ತಗಾಗಿದ್ದಾರೆ ಎಂದೂ ಅವರೆಲ್ಲ ಹೇಳುತ್ತಿದ್ದಾರೆ. ಜಾಹೀರಾತು ವಿಚಾರದಲ್ಲಿ ರವಿ ಹೆಗಡೆಗೂ ಪೈ ಮ್ಯಾನೇಜ್ಮೆಂಟ್ ಗೂ ಮುಸುಕಿನ ಗುದ್ದಾಟ ನಡೆಯುತ್ತಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ರವಿ ಹೆಗಡೆಯವರೂ ಉದಯವಾಣಿ ಯನ್ನು ತಾತ್ಕಾಲಿಕ ಪುನರ್ವಸತಿ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಬೇರೆ ಕಡೆ ವ್ಯವಸ್ಥೆ ಆದಮೇಲೆ ಉದಯವಾಣಿ ಬಿಡುತ್ತಾರೆ. ಅದಕ್ಕಾಗೇ ಅವರು ಈಗಲೂ ರಂಗನ ಜೊತೆ ಸತತ ಸಂಪರ್ಕದಲ್ಲಿದ್ದಾರೆ ಎಂದೂ ರವಿ ಹೆಗಡೆ ಹಿಂಬಾಲಕರೆ ಹೇಳುತ್ತಿದ್ದಾರೆ. ಯಾವುದಕ್ಕೂ ಉದಯವಾಣಿ ಮ್ಯಾನೇಜ್ಮೆಂಟ್ ಎಚ್ಚರಾಗಿರುವುದು ಒಳ್ಳೆಯದು ಎನ್ನುತ್ತಾರೆ ಮೂಲನಿವಾಸಿಗಳು.
ರಾಘವನ್ ಗೆ ಸ್ವಂತ ಬುದ್ಧಿ ಇಲ್ವಾ?
ಅಕಸ್ಮಾತ್ತಾಗಿ ವಿಜಯ ಕರ್ನಾಟಕದ ಸಂಪಾದಕರಾದ ಈ. ರಾಘವನ್ ಅವ್ರಿಗೆ ಸ್ವಂತ ಬುದ್ಧಿ ಇಲ್ವಾ? ಜಾತಿವಾದಿ ಎಲ್. ಪ್ರಕಾಶ್, ಇತ್ತೀಚೆಗಷ್ಟೇ ವಿ.ಕ. ಸೇರಿರುವ ಚನ್ನಕೃಷ್ಣ ಮೊದಲಾದವರ ಮಾತು ಕೇಳಿಕೊಂಡು ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಪ್ರಕಾಶ್, ಚನ್ನಕೃಷ್ಣ ಇಂತಹ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳಲು ಮುಂದಾಗಿದ್ದಾರೆ. ರಾಘವನ್ ಸ್ವಂತ ಬುದ್ಧಿ ಇಲ್ಲದವರಂತೆ ಅವರ ಮಾತು ಕೇಳಿಕೊಂಡು ಬ್ರಾಹ್ಮನೆತರ ಪತ್ರಕರ್ತರನ್ನು ಮಾತ್ರ ನೇಮಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ವಿಶ್ವೇಶ್ವರ ಭಟ್ಟರಂತೆ! ವಿ.ಭ. ಬ್ರಾಹ್ಮಣರಿಗೆ ಮಾತ್ರ ಅವಕಾಶ ನೀಡಿದ್ದಾರೆ. ಅದಕ್ಕೇ ನಾವೂ ಈಗ ಸೇಡು ತೀರಿಸಿಕೊಲ್ಲಬೇಕೆಂದು ಪ್ರಕಾಶ್ ಬಳಗ ರಾಘವನ್ ಅವರಿಗೆ ತಿದಿ ಊದುತ್ತಿದೆ. ಪತ್ರಿಕೋದ್ಯಮದಲ್ಲೂ ಜಾತಿ ನೋಡಿ ಕೆಲಸ ಕೊಡುವ ರಾಘವನ್ ಮನೋಭಾವಕ್ಕೆ ಛೀ, ಥೂ ಅಂಥಾ ಉಗಿಯಬೇಕು. ಒಣ ಜಂಭದ ಪ್ರಕಾಶ್ ಮೊದಲಿನಿಂದಲೂ ಜಾತಿವಾದಿಯೇ, ಅಹಂಕಾರಿಯೇ. ರಾಘವನ್ ಅವರೂ ಇಂತಹ ಜಾತಿವಾದಿತನಕ್ಕೆ ಬೆಲೆ ಕೊಡುತ್ತಾರಲ್ಲ. ಹೆಸರಿಗೆ ಮಾತ್ರ ಇವರೆಲ್ಲ ಹಿರಿಯ ಪತ್ರಕರ್ತರು. ಈಗಾಗಲೇ ಪ್ರಕಾಶ್ ಅವರ ಧಿಮಾಕಿಗೆ ವಿ.ಕ. ದ ಬ್ರಾಹ್ಮಣ ಪತ್ರಕರ್ತರು ಕಂಗಾಲಾಗಿದ್ದಾರೆ. ಪ್ರಕಾಶ್ ರ ದಬ್ಬಾಳಿಕೆ ಸಹಿಸಲಾರದೆ ರಾಘವೇಂದ್ರ ಭಟ್, ಕೆ.ವಿ. ಪ್ರಭಾಕರ್ ವಿ.ಕ. ಬಿಟ್ಟಿದ್ದಾರೆ. ಸುದರ್ಶನ್ ಚನ್ನಂಗಿಹಳ್ಳಿ ಅದೇ ದಾರಿಯಲ್ಲಿದ್ದಾರೆ. ಇನ್ನೂ ಎಷ್ಟು ಜನ ಇವರ ಅಟ್ಟಹಾಸಕ್ಕೆ ಬಲಿಯಾಗುತ್ತಾರೋ ಗೊತ್ತಿಲ್ಲ.

Unknown said...
This comment has been removed by the author.
Anonymous said...

ಪ್ಲೇಸ್ ಬೈ ಮಿಸ್ಟೇಕ್ ಕಮೆಂಟ್ ಬಂದಿದೆ.. ನನ್ನ ಹೆಸರು ಬರೆಯದಿರಿ... ಪ್ಲೀಸ್... ಜಿತೇಂದ್ರ

Anonymous said...

Very Bad and Coveted Report.
I'am sorry.

rai said...
This comment has been removed by the author.
jitendra kundeshwar said...

nanna profile hijack maadalagide..
it is too bad..

Anonymous said...

He is a Tamilian like R.K.Narayan, Masti, R.K.Laxamn ...
He is really good journalist...
Very self disciplined editor...
But, kannada journalists in VK made him a fool. He fully depends on Former V.Bhat;s hench man like L.prakash, Ashokarama etc
He is fooled by many...'
One can;t fool Sunil Rajshekhar evry time...
Mind it
Quik gun Murugan
Pampa Kavi maarga

Anonymous said...

(ಇವೆಲ್ಲ ನಮಗೆ ಸಿಕ್ಕ ಮಾಹಿತಿಗಳು. ಸಾಧ್ಯವಾದರೆ ಬಳಸಿಕೊಳ್ಳಿ.)

24 ಕೋಟಿ ಕೊಟ್ಟು ಭೂಮಿ ಖರೀದಿಸಿದ ಕ್ಯಾಪ್ಟನ್ ರಂಗ!

ಸುವರ್ಣ ನ್ಯೂಸ್ ಮ್ಯಾನೇಜ್ಮೆಂಟ್ ಆಕ್ರೋಶಕ್ಕೆ ಒಳಗಾಗಿ ಹಿಮ್ಭಡ್ತಿ ಹೊಂದಿದ ಕ್ಯಾಪ್ಟನ್ ರಂಗ ಕಳೆದ 15 ದಿನಗಳಿಂದ ಸುವರ್ಣ ನ್ಯೂಸ್ ಕಚೇರಿಗೆ ಬರುತ್ತಿಲ್ಲ. ಹೀಗಾಗಿ ಕಚೇರಿಯ ಸಿಬ್ಬಂದಿ ನೆಮ್ಮದಿಯಾಗಿದ್ದಾರೆ. ಆದರೆ ರಂಗ ಹಿಂಬಾಲಕರು ಮಾತ್ರ ಮೂಲೆಗುಂಪಾಗಿ ನೆಮ್ಮದಿ ಕಳೆದುಕೊಂಡಿದ್ದಾರೆ. ರಂಗನ ಆಡಳಿತಾವಧಿಯಲ್ಲಿ ಮೆರೆಯುತ್ತಿದ್ದ ಶೋಭಾ, ವಿನೋದಕುಮಾರ್ ನಾಯಕ್, ದಿಲೀಪ್, ಮಹೇಶ್, ಶಿವಸ್ವಾಮಿ, ಮೆಟ್ರೋ ಚೀಫ್ ಅವಿನಾಶ್ ಇತ್ಯಾದಿ ಮಂದಿ ಮಂಕಾಗಿದ್ದಾರೆ. ಅದಕ್ಕೇ ವಿನೋದ್ ಅಂಥವರು ವಿಜಯ ಕರ್ನಾಟಕದ ಕದ ತಟ್ಟಿದ್ದಾರಂತೆ. ಇವರೆಲ್ಲ ರಂಗ ಗೆ ಬಕೆಟ್ ಹಿಡಿದು ಹಿಡಿದು ಲಾಭ ಪಡೆದುಕೊಂದವರೆಂದು ಚಾನಲ್ಲಿನಲ್ಲಿರುವವರೇ ಹೇಳುತ್ತಿದ್ದಾರೆ.
ಸುವರ್ಣ ನ್ಯೂಸ್ ಕಚೇರಿಗೆ ಬಾರದ ರಂಗ ಏನು ಮಾಡುತ್ತಿದ್ದಾರೆ? ಸುವರ್ಣ ನ್ಯೂಸ್ ನಲ್ಲಿ ಮಾಡಿದ ದುಡ್ಡನ್ನೆಲ್ಲ ಬೇರೆ ಬೇರೆ ಕಡೆ ಹೂಡಿಕೆ ಮಾಡುತ್ತಿದ್ದಾರೆ. ಮೈಸೂರಿನ ತಿ. ನರಸೀಪುರ ಮಾರ್ಗದಲ್ಲಿ ಬರೋಬ್ಬರಿ 24 ಕೋಟಿ ಕೊಟ್ಟು 20 ಎಕರೆ ಲ್ಯಾಂಡ್ ಖರೀದಿಸಿದ್ದಾರಂತೆ. ಸುಮಾರು ೧೦ ದಿನಗಳ ಹಿಂದೆ ರಿಜಿಸ್ಟ್ರೇಶನ್ ಕೂಡ ಆಗಿದೆಯಂತೆ. ಇಷ್ಟೆಲ್ಲಾ ದುಡ್ಡು ಎಲ್ಲಿಂದ ಬಂತೋ... ಎಲ್ಲ ಸುವರ್ಣ ನ್ಯೂಸ್ ಮಹಿಮೆ. ಈ ಚಾನೆಲ್ ಮಾಲೀಕ ರಾಜೀವ್ ಚಂದ್ರಶೇಖರ್ ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ರೆ ಅವರದೇ ಚಾನೆಲ್ನ ಕೆಲ ಸಿಬ್ಬಂದಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಚಾನೆಲ್ನ ಸ್ಟುಡಿಯೋಗೆ ಗೆಸ್ಟ್ ಫಿಕ್ಸ್ ಮಾಡುವವರೆಗೂ ಇವರ ಭ್ರಷ್ಟಾಚಾರ ಮೇರೆ ಮೀರಿದೆ. ಹೊಸ ಮುಖ್ಯಸ್ಥ ಹಮೀದ್ ಅವ್ರ ಆಡಳಿತದಲ್ಲೂ ಇದು ಮುಂದುವರಿದಿದೆ. ಹಮೀದ್ ಕೂಡ ಭ್ರಷ್ಟಾಚಾರಕ್ಕೆ ಮಣೆ ಹಾಕ್ತಾರೆ ಅನ್ನೋದು ಚಾನೆಲ್ ನ ಉದ್ಯೋಗಿಗಳ ಹೇಳಿಕೆ. ಇದೆಲ್ಲ ರಾಜೀವ್ ಅವ್ರಿಗೆ ಗೊತ್ತಾಗ್ತಿಲ್ವ ಅನ್ನೋದು ನಮ್ಮ ಪ್ರಶ್ನೆ.
ಸುವರ್ಣ ನ್ಯೂಸ್ ನ ಮಾಜಿ ಮುಖ್ಯಸ್ಥ ರಂಗ ಕಸ್ತೂರಿ ಚಾನೆಲ್ ಗೆ ಹೋಗ್ತಾರೆ ಅನ್ನೋ ಸುದ್ದಿ ಇದೆ. ಇದಿನ್ನೂ ದೃಢಪಟ್ಟಿಲ್ಲ. ಕಸ್ತೂರಿ ನ್ಯೂಸ್ ಚಾನೆಲ್ ಆರಂಭದ ದಿನಾಂಕವೇ ಇನ್ನೂ ಸ್ಪಷ್ಟವಾಗಿಲ್ಲ. ರವಿ ಹೆಗಡೆ ಹಾಗೂ ಸಿ.ಇ. ಓ. ವಿನೋದ್ ಪ್ರಭಾವದಿಂದ ರಂಗ ಪೈ ಗ್ರೂಪ್ ಸೇರಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ರವಿ ಹೆಗ್ಡೆಯೂ ಅತಂತ್ರ!
ಸುವರ್ಣ ನ್ಯೂಸ್ ಬಿಟ್ಟು ತಮ್ಮ ಹಿಂ'ಬಾಲಕ'ರೊಂದಿಗೆ ಉದಯವಾಣಿ ಸೇರಿದ ೨ ಮುಖದ ರವಿ ಹೆಗಡೆ ತಮ್ಮವರಿಗೆ ಮೊದಲು ಹೇಳಿದಷ್ಟು ಸಂಬಳ ಕೊಡಿಸುವಲ್ಲಿ ವೈಫಲ್ಯ ಕಂಡಿದ್ದಾರೆ. ಹೇಳಿದ ಸಂಬಳದಲ್ಲಿ ಅರ್ಧದಷ್ಟನ್ನು ಮಾತ್ರ ಮ್ಯಾನೇಜ್ಮೆಂಟ್ ಕೊಟ್ಟಿದೆ. ಈಗ ಕೊಟ್ಟಿರುವ ಸಂಬಳವೇ ಅವರೆಲ್ಲರ ಅಧಿಕೃತ ಸಂಬಳವಾಗಲಿದೆ ಎನ್ನುತ್ತಿದ್ದಾರೆ ಅಲ್ಲಿನ ಮೂಲನಿವಾಸಿಗಳು. ಅಲ್ಲದೆ ಇವರಾರಿಗೂ ಮ್ಯಾನೇಜ್ಮೆಂಟ್ ಇನ್ನೂ ಅಪಾಯಿಂಟ್ಮೆಂಟ್ ಆರ್ಡರ್ ಕೊಟ್ಟಿಲ್ಲ. ಹೀಗಾಗಿ ರವಿ ಹೆಗ್ಡೆ ಹಿಂಬಾಲಕರು ಕಂಗಾಲಾಗಿದ್ದಾರೆ. . ಪೈ ಮ್ಯಾನೇಜ್ಮೆಂಟ್ ನಿಂದ ಉಗಿಸಿಕೊಂಡ ಬಳಿಕ ರವಿ ಹೆಗಡೆ ಮೆತ್ತಗಾಗಿದ್ದಾರೆ ಎಂದೂ ಅವರೆಲ್ಲ ಹೇಳುತ್ತಿದ್ದಾರೆ. ಜಾಹೀರಾತು ವಿಚಾರದಲ್ಲಿ ರವಿ ಹೆಗಡೆಗೂ ಪೈ ಮ್ಯಾನೇಜ್ಮೆಂಟ್ ಗೂ ಮುಸುಕಿನ ಗುದ್ದಾಟ ನಡೆಯುತ್ತಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ರವಿ ಹೆಗಡೆಯವರೂ ಉದಯವಾಣಿ ಯನ್ನು ತಾತ್ಕಾಲಿಕ ಪುನರ್ವಸತಿ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಬೇರೆ ಕಡೆ ವ್ಯವಸ್ಥೆ ಆದಮೇಲೆ ಉದಯವಾಣಿ ಬಿಡುತ್ತಾರೆ. ಅದಕ್ಕಾಗೇ ಅವರು ಈಗಲೂ ರಂಗನ ಜೊತೆ ಸತತ ಸಂಪರ್ಕದಲ್ಲಿದ್ದಾರೆ ಎಂದೂ ರವಿ ಹೆಗಡೆ ಹಿಂಬಾಲಕರೆ ಹೇಳುತ್ತಿದ್ದಾರೆ. ಯಾವುದಕ್ಕೂ ಉದಯವಾಣಿ ಮ್ಯಾನೇಜ್ಮೆಂಟ್ ಎಚ್ಚರಾಗಿರುವುದು ಒಳ್ಳೆಯದು ಎನ್ನುತ್ತಾರೆ ಮೂಲನಿವಾಸಿಗಳು.
ರಾಘವನ್ ಗೆ ಸ್ವಂತ ಬುದ್ಧಿ ಇಲ್ವಾ?
ಅಕಸ್ಮಾತ್ತಾಗಿ ವಿಜಯ ಕರ್ನಾಟಕದ ಸಂಪಾದಕರಾದ ಈ. ರಾಘವನ್ ಅವ್ರಿಗೆ ಸ್ವಂತ ಬುದ್ಧಿ ಇಲ್ವಾ? ಜಾತಿವಾದಿ ಎಲ್. ಪ್ರಕಾಶ್, ಇತ್ತೀಚೆಗಷ್ಟೇ ವಿ.ಕ. ಸೇರಿರುವ ಚನ್ನಕೃಷ್ಣ ಮೊದಲಾದವರ ಮಾತು ಕೇಳಿಕೊಂಡು ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಪ್ರಕಾಶ್, ಚನ್ನಕೃಷ್ಣ ಇಂತಹ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳಲು ಮುಂದಾಗಿದ್ದಾರೆ. ರಾಘವನ್ ಸ್ವಂತ ಬುದ್ಧಿ ಇಲ್ಲದವರಂತೆ ಅವರ ಮಾತು ಕೇಳಿಕೊಂಡು ಬ್ರಾಹ್ಮನೆತರ ಪತ್ರಕರ್ತರನ್ನು ಮಾತ್ರ ನೇಮಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ವಿಶ್ವೇಶ್ವರ ಭಟ್ಟರಂತೆ! ವಿ.ಭ. ಬ್ರಾಹ್ಮಣರಿಗೆ ಮಾತ್ರ ಅವಕಾಶ ನೀಡಿದ್ದಾರೆ. ಅದಕ್ಕೇ ನಾವೂ ಈಗ ಸೇಡು ತೀರಿಸಿಕೊಲ್ಲಬೇಕೆಂದು ಪ್ರಕಾಶ್ ಬಳಗ ರಾಘವನ್ ಅವರಿಗೆ ತಿದಿ ಊದುತ್ತಿದೆ. ಪತ್ರಿಕೋದ್ಯಮದಲ್ಲೂ ಜಾತಿ ನೋಡಿ ಕೆಲಸ ಕೊಡುವ ರಾಘವನ್ ಮನೋಭಾವಕ್ಕೆ ಛೀ, ಥೂ ಅಂಥಾ ಉಗಿಯಬೇಕು. ಒಣ ಜಂಭದ ಪ್ರಕಾಶ್ ಮೊದಲಿನಿಂದಲೂ ಜಾತಿವಾದಿಯೇ, ಅಹಂಕಾರಿಯೇ. ರಾಘವನ್ ಅವರೂ ಇಂತಹ ಜಾತಿವಾದಿತನಕ್ಕೆ ಬೆಲೆ ಕೊಡುತ್ತಾರಲ್ಲ. ಹೆಸರಿಗೆ ಮಾತ್ರ ಇವರೆಲ್ಲ ಹಿರಿಯ ಪತ್ರಕರ್ತರು. ಈಗಾಗಲೇ ಪ್ರಕಾಶ್ ಅವರ ಧಿಮಾಕಿಗೆ ವಿ.ಕ. ದ ಬ್ರಾಹ್ಮಣ ಪತ್ರಕರ್ತರು ಕಂಗಾಲಾಗಿದ್ದಾರೆ. ಪ್ರಕಾಶ್ ರ ದಬ್ಬಾಳಿಕೆ ಸಹಿಸಲಾರದೆ ರಾಘವೇಂದ್ರ ಭಟ್, ಕೆ.ವಿ. ಪ್ರಭಾಕರ್ ವಿ.ಕ. ಬಿಟ್ಟಿದ್ದಾರೆ. ಸುದರ್ಶನ್ ಚನ್ನಂಗಿಹಳ್ಳಿ ಅದೇ ದಾರಿಯಲ್ಲಿದ್ದಾರೆ. ಇನ್ನೂ ಎಷ್ಟು ಜನ ಇವರ ಅಟ್ಟಹಾಸಕ್ಕೆ ಬಲಿಯಾಗುತ್ತಾರೋ ಗೊತ್ತಿಲ್ಲ.

Anonymous said...

ಹಮೀದ್ ಕೂಡ ಭ್ರಷ್ಟಾಚಾರಕ್ಕೆ ಮಣೆ ಹಾಕ್ತಾರೆ ಅನ್ನೋದು..
not correct...
what you mean ಮಣೆ ಹಾಕ್ತಾರೆ?
He is straightforward person like Ranga...
You got it
Money is important

Anonymous said...

Good. you have given feedback on H R Ranga. He is very int. Where is Our Kirik, Cast Oriented Parameshwara Bhat? He is going to Join Udayavani Or He follows Ranga to KASTOORI? Now a days he got blessings of Mr. Ravi Belegara to join VK OR JANASREE. Please find it.