Thursday 7 April 2011

ನಿಮ್ಮ ಕಳಕಳಿ, ಅವರಿಗೆ ದುಡ್ಡಿನ ಬಳುವಳಿ

ಅಣ್ಣಾ ಹಜಾರೆಗೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದೆ. ಎಲ್ಲ ಮಾಧ್ಯಮಗಳು ಬೆಂಬಲಕ್ಕೆ ನಿಂತಿವೆ. ಕನ್ನಡದಲ್ಲಿ ಉದಯವಾಣಿ ಮೊದಲು ಬೆಂಬಲ ವ್ಯಕ್ತಪಡಿಸಿತು. ಇಂದು ವಿಕ ಕೂಡ ಬೆಂಬಲ ವ್ಯಕ್ತಪಡಿಸಿದೆ. ವಿಚಿತ್ರ ರೀತಿಯಲ್ಲಿ.

ಲಾಭವಿಲ್ಲದೆ ವಿಕ ಮತ್ತು ಟೈಮ್ಸ್ ಮ್ಯಾನೇಜ್ಮೆಂಟ್ ಯಾವ ಕೆಲಸವನ್ನು ಮಾಡುವುದಿಲ್ಲ. ದೇಶಾದ್ಯಂತ ಅಣ್ಣಾ ಹಜಾರೆಗೆ ಉಂಟಾದ ಬೆಂಬಲವನ್ನು ಏನ್ ಕ್ಯಾಶ್ ಮಾಡಿಕೊಳ್ಳಲು ವಿಕ ಮುಂದಾಗಿದೆ. ಅದಕ್ಕಾಗಿ "ನೀವು ಅಣ್ಣಾ ಹಜಾರೆಯನ್ನು ಬೆಂಬಲಿಸುವುದಾದರೆ ನಮಗೆ ಎಸ್ಎಂಎಸ್ ಕಳುಹಿಸಿ. ನಾವು ಅದನ್ನು ಪ್ರಕಟಿಸುತ್ತೇವೆ" ಎಂಬ ಘೋಷಣೆ ಪ್ರಕಟಿಸಿದೆ.

ನೀವು ಎಸ್ಎಂಎಸ್ ಕಳುಹಿಸಿ ಅಣ್ಣಾ ಹಜಾರೆಗೆ ಬೆಂಬಲ ವ್ಯಕ್ತಪಡಿಸಿ. ನಿಮ್ಮ ಈ ಕಾಳಜಿಯನ್ನು ಬಳಸಿಕೊಂಡು ನಾವು ದುಡ್ಡು ಮಾಡಿಕೊಳ್ಳುತ್ತೇವೆ ಎಂಬುದು ಇದರ ಒಳಾರ್ಥ!

ನೀವು ಒಂದು ಎಸ್ಎಂಎಸ್ ಕಳುಹಿಸಿದರೆ ಅದಕ್ಕೆ ೬ ರೂಪಾಯಿ ತೆರಬೇಕು. ಅದರಲ್ಲಿ ೩ ರೂಪಾಯಿ ವಿಕ ಕಿಸೆಗೆ. ಉಳಿದ ೩ ರೂಪಾಯಿ ಮೊಬೈಲ್ ಕಂಪನಿಗೆ. ಹೀಗೆ ನಿಮ್ಮ ಕಾಳಜಿಯನ್ನು ವಿಕ ತನ್ನ ಕಾಳಜಿಗೆ ಬಳಸಿಕೊಳ್ಳಲು ಮುಂದಾಗಿದೆ. ದೇಶದ ಜನರೆಲ್ಲಾ ಕಾಳಜಿಯಿಂದ ಭ್ರಷ್ಟಾಚಾರದ ವಿರುಧ್ಧ ಹೋರಾಟದಲ್ಲಿ ತೊಡಗಿದ್ದಾರೆ . ವಿಕ ಮ್ಯಾನೇಜ್ಮೆಂಟ್ ಮಾತ್ರ ದುಡ್ಡು ಮಾಡುವದರಲ್ಲಿ ನಿರತವಾಗಿದೆ.

ಇವರೆಲ್ಲ ಬೆಂಕಿ ಬಿದ್ದ ಮನೆಯಲ್ಲಿ ಬೀಡಿ ಹಚ್ಚಿಕೊಳ್ಳುವ ಬುದ್ದಿ ಬಿಡುವುದು ಯಾವಾಗ?

4 comments:

Anonymous said...

ree swamiiii
bere vishya sigalva nimge..... sms kalsi antha duddu madtare antha baritirallla. heege modlu sms kalisi antha UDAYAVANI, SUVARNA CHANNEL etc madyamagalu prachara madta idare....
sumne VK mele goobe kurisabedi.

-And

Anonymous said...

ಮಾದ್ಯಮದಲ್ಲಿರುವ ಭ್ರಷ್ಟಾಚಾರ ಮೊದಲು ತೊಲಗಲಿ.ಪೇಯ್ಡ್ ನ್ಯೂಸ್ ಮತ್ತು ಜಾಹಿರಾತು ನೀಡದಿದ್ದರೆ ಸುದ್ದಿ ಹಾಕದಿರುವುದು.ಚಾನೆಲ್ಲೂಗಳಲ್ಲಿ ಸುದ್ದಿ ಹಾಕಿ ನಂತರ ಹಣಕ್ಕಾಗಿ ಪೀಡಿಸುವುದು ಭ್ರಷ್ಟಾಚಾರ ಅಲ್ಲವೇ ?

Anonymous said...

Breaking News::ಮಂಗಳೂರಿನ ವಿಕ ಬ್ಯೂರು ಮುಖ್ಯಸ್ಥ ಕುಮಾರ್ ನಾಥ್ ನನ್ನು ಮೆನೆಜ್ಮಮೆಂಟ್ ಪಕ್ಕಕ್ಕೆ ಸರಿಸಿ ಮೈಸೂರಿನಿಂದ ಅರವಿಂದ ನಾವಡರನ್ನು ಮಂಗಳೂರು ಚೀಫ್ ಆಗಿ ಕಳಿಸಿದ್ದಾರೆ.ಒಳ್ಳೇ ಕೆಲಸವನ್ನೇ ವಿಕ ಮೆನೆಜ್ಮಮೆಂಟ್ ಮಾಡಿದೆ. ಇನ್ನಾದರೂ ಕುಮಾರನಿಗೆ ಬುದ್ದಿ ಬರಲಿ.ಹೆಂಗೇ! ತಲೆಗೆ ಸುರಿದದ್ದು ಕಾಲಿಗೆ ಇಳಿಯಲು ಹೆಚ್ಚು ಹೊತ್ತು ಇಲ್ಲಾ ಸ್ವಾಮೀ..

Anonymous said...

adu sari devaru, kasthri tv alli innu salary agilla.iddke melinda mele by election madutiro cm yaddi karana antha iddre chek madi