Tuesday 13 September 2011

ಮೋಹನ ರೋಗಕ್ಕೆ ಮಾನಸ ಬಲಿ!

ಗಂಡ ಬರೆದ ಲೇಖನಕ್ಕೆ ಹೆಂಡತಿ ಕೆಲಸ ಕಳೆದುಕೊಂಡಿದ್ದಾಳೆ! ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರು ಅಂತಾರಲ್ಲ ಹಾಗೆ.  ಇಂತಹ ಹೇಯ ಕೃತ್ಯ ಎಸಗಿದ್ದು 'ಸಂಪಾದಕೀಯ' ಬ್ಲಾಗ್ ಮೂಲಕ ಸಿಕ್ಕಸಿಕ್ಕವರಿಗೆ ಉಪದೇಶ ನೀಡುವ ಸಮಯ ಚಾನಲ್ ಮಖ್ಯಸ್ಥ ಜಿ.ಎನ್. ಮೋಹನ್. ಸುರೇಶ್ ಪುದುಬೆಟ್ಟು ಎಂಬ ತುಸು ಅಂಗವಿಕಲ ಪತ್ರಕರ್ತನಿದ್ದಾನೆ. ಮೊದಲು ವಿಜಯ ಕನಾFಟಕದಲ್ಲಿದ್ದ. ಜನಶ್ರಿ ಯಾತ್ರೆ ಮುಗಿಸಿ ಈಗ ಉದಯವಾಣಿಯಲ್ಲಿದ್ದಾನೆ. ಈತ ಇತ್ತೀಚೆಗೆ ಸಮಯ ಚಾನಲ್ ಮಾಲಿಕ ಮುರುಗೇಶ್ ನಿರಾಣಿ ವಿರುದ್ಧ ಒಂದು ಲೇಖನ ಬರೆದಿದ್ದ.  ಸುರೇಶ್ ಪುದುಬೆಟ್ಟು ಪತ್ನಿ ಮಾನಸ ಪುದುಬೆಟ್ಟು ಸಮಯ ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದಳು. ಅವಳನ್ನು ಕರೆದ ಜಿ.ಎನ್. ಮೋಹನ, ಮುರುಗೇಶ್ ನಿರಾಣಿ ವಿರುದ್ಧ ಬರೆಯದಂತೆ ನಿನ್ನ ಗಂಡನಿಗೆ ಹೇಳು ಎಂದು ಮಾನಸ ಪುದುಬೆಟ್ಟುಗೆ ಸೂಚಿಸಿದ್ದಾರೆ. ಅದಕ್ಕೆ ಆಕೆ "ಸರ್ ಅವರದ್ದು ಬೇರೆ ಸಂಸ್ಥೆ. ನಾನು ಹಾಗೆ ಹೇಳುವುದು ಸರಿಯಾಗುವುದಿಲ್ಲ" ಎಂದಿದ್ದಾಳೆ.
ಪ್ರಕಟವಾದ ವರದಿಗೆ ನಿರಾಣಿ ಕಡೆಯಿಂದ ಸ್ಪಷ್ಟೀಕರಣ ನೀಡಲಾಗಿತ್ತು. ಅದನ್ನು ಉದಯವಾಣಿ ಚಿಕ್ಕದಾಗಿ ಪ್ರಕಟಿಸಿತ್ತು. ಇದರ ಕುರಿತೂ ಜಿ.ಎನ್. ಮೋಹನ, ಮಾನಸಳ ಮೂಲಕ ಒತ್ತಡ ಹೇರಲು ಯತ್ನಿಸಿದ. ಮಾನಸ ಜಗ್ಗಲಿಲ್ಲ. ಕೆಲಸದಿಂದ ಕಿತ್ತುಹಾಕುವ ಬೆದರಿಕೆ ಹಾಕಲಾಯಿತು. ಆಗಲೂ ಪ್ರಯೋಜನವಾಗದಿದ್ದಾಗ ಮಾನಸಳನ್ನು ಗುಲ್ಬರ್ಗಕ್ಕೆ ವರ್ಗ ಮಾಡಲಾದೆ. ಇದನ್ನು ಖಂಡಿಸಿ ಮಾನಸ ರಾಜಿನಾಮೆ ಸಲ್ಲಿಸಿದ್ದಾಳೆ.
ಬೇರೆ ಪತ್ರಿಕೆಯಲ್ಲಿ ಕೆಲಸ ಮಾಡುವ ಗಂಡ ಲೇಖನಕ್ಕೆ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಆತನ ಪತ್ನಿಯನ್ನು ಕೆಲಸದಿಂದ ಕಿತ್ತು ಹಾಕಿದ ಜಿ.ಎನ್. ಮೋಹನ, ಟಿವಿ ಪರದೆಯ ಮೇಲೆ ನಟ ದರ್ಶನ್ ಪ್ರಕರಣದಲ್ಲಿ ನಟಿ ನಿಖಿತಾಗೆ ೩ ವರ್ಷ ನಿಷೇಧ ಹೇರಿದ್ದು ತಪ್ಪು ಎಂದು ವಾದಿಸುತ್ತಿದ್ದ. ನಾಚಿಕೆಗೇಡು.
ಸಾಕಷ್ಟು ಪತ್ರಕರ್ತರ ದಂಪತಿಗಳು ಹೀಗೆ ಬೇರೆ ಬೇರೆ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸ್ಥಿತಿಯನ್ನು ಮಾಲಿಕರೂ ಅರ್ಥಮಾಡಿಕೊಂಡಿದ್ದಾರೆ. ಆದರೆ ಜಿ.ಎನ್. ಮೋಹನನಂತಹ ಕೀಳು ಮನಸ್ಸಿನ ಪತ್ರಕರ್ತರು ಮಾತ್ರ ಮಾಲಿಕರನ್ನು ಮೆಚ್ಚಿಸಲು ಇಂತಹ ಕೆಲಸ ಮಾಡುತ್ತಾರೆ.

6 comments:

Anonymous said...

What the hell this communist loafer doing in BJP leaders TV channel. Kick him out.

Anonymous said...

ಜಗತ್ತಿನ ಎಲ್ಲ ವಿಷಯಗಳ ಬಗ್ಗೆ ಬರೆಯುವ ಸಂಪಾದಕೀಯ
ಮೋಹನನ ವಿಷಯ ಯಾಕೆ ಬರೆಯಲಿಲ್ಲ. ಆಗಲೇ ಗೊತ್ತಾಗುತ್ತೆ .
ಇದೆ ಮೋಹನ ಅನಾಮಿಕ ಬ್ಲಾಗುಗಳ ಬಗ್ಗೆ ದೊಡ್ಡ ವಿರೋಧ ವ್ಯಕ್ತ ಪಡಿಸಿದ್ದ.ಆತನಿಗೆ ಹೆದರಿಕೆ ಇತ್ತು.
ಮೋಹನನ ಮಂಗಳೂರು ಮತ್ತು ಗುಲ್ಬರ್ಗ ಬಾನಗಡಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಬರೆಯಿರಿ. ತುಂಬಾ ಸ್ವಾರಸ್ಯವಾಗಿವೆ.
ಬಿ.ಆರ್.ಪಾಟೀಲ್ , ಅಳಂದ

ravini said...

ಸ್ವಲ್ಪ ಬಹುವಚನದಲ್ಲಿ ಬರೆಯಿರಿ ಸರ್

Anonymous said...

ಮಿಡಿಯಾ ಮಸಾಲಾ ಕಾಲ್ಂ ಮೂಲಕ ಈ ಜಿ.ಎನ್.ಮೋಹನ್ ಪತ್ರಿಕೋದ್ಯಮ ನೀತಿ ಬೋಧಿಸಿದ್ದೇ ಬೋಧಿಸಿದ್ದು. ಇವರ ಅಸಲಿ ಮುಖ ಈಗ ಬಯಲಾಗಿದೆ. ತಮ್ಮ ಮಾಲೀಕನ ಮನಕ್ಕೆ ಖುಶಿಪಡಿಸಲು ಒಬ್ಬ ಅಮಾಯಕ ಪತ್ರಕರ್ತೆಯನ್ನು ಬಲಿ ಕೊಟ್ಟಿದ್ದು ಅಮಾನುಶ. ಇಂಥ ಮಾಧ್ಯಮ ಮುಖ್ಯಸ್ಥರ ಹೀನ ಸಂತತಿಗೆ ಧಿಕ್ಕಾರ.
-ರಾಜೀವ್ ಶೆಟ್ಟಿ, ಮಂಗಳೂರು

Anonymous said...

ಪ್ರಾಧ್ಯಾಪಕರೇ, ಮೋಹನ್ ಮಾಡಿದ್ದು ಖಂಡನೀಯ. ಅದಿರಲಿ, ಗಣಿ ಕಪ್ಪದ ಬಗ್ಗೆ ನಿಮ್ಮ ಬ್ಲಾಗಿನಲ್ಲಿ ಯಾಕೆ ತುಟಿ ಬಿಚ್ಚಿಲ್ಲ. ಬೆರೆಯವರ ಬಗ್ಗೆ ಏಕವಚನದಲ್ಲಿ ಬರೆಯುವ ನಿಮ್ಮ sadist ಮನಸ್ಸು ಈ ವಿಚಾರದಲ್ಲಿ ಏಕೀ ಮೌನಾ? ನೀವು ಯಾರ ಪರ ಸ್ವಾಮೀ?
-ದೇಶ ಬಕ್ತ.

Anonymous said...

eetana kachche haruka budhdhiyannu maaji etvgala bali kelidare heluttare. esto kutumbagalu eetana kaatadinda beedi paalaaguva stitige bandiddavu. intahavanige karedu udyoga kottavaru moorkharu.....